ಪಾಂಡುರಂಗ
ಪಾಂಡುರಂಗ | ಹುಟ್ಟಿದ ದಿನಾಂಕ: | ||
ತಂದೆ: ರಾಮಾಚಾರ್ಯ | ತಾಯಿ: | ||
ಮಕ್ಕಳು: ರಮೇಶ, ಚಿತ್ರಾಂಗದಾ, ಸುರೇಶ, ಕಾವೇರಿ, ಅಂಜನಾ, ಜಯಶ್ರೀ, ಜನಾರ್ಧನ | |||
ಒಡಹುಟ್ಟಿದವರು: ಬಾಳಾಚಾರ್ಯ (?), ರಂಗಾಚಾರ್ಯ, ಗೋವಿಂದ, ಭೀಮಾಬಾಯಿ (ಅಕ್ಕಣ್ಣಿ), ಕ್ರಿಷ್ಣಾಬಾಯಿ, ಅನಂತಾಚಾರ್ಯ, ಕೃಷ್ಣಾಜಿ, ಸುಭದ್ರಾ | Branch: 3 | Generation: 7 |
ವ್ಯಕ್ತಿ ಚಿತ್ರ
ದಿ. ಪಾಂಡುರಂಗ ರಾಮಾಚಾರ್ಯ ಮಂಗಳವೇಢೆ
ಮುರಗೋಡದ ರಂಗಾಚಾರ್ಯರ ಪ್ರಪೌತ್ರ, ಅನಂತಾಚಾರ್ಯರ ಪೌತ್ರ, ರಾಮಾಚಾರ್ಯರ ಪುತ್ರ
ಕಿರು ಪರಿಚಯ
ಪೋಲಿಸ ಇಲಾಖಾಖೆಯಲ್ಲಿ ಅಸಿಸ್ಟಂಟ್ ಪೋಲಿಸ ಸಬ್-ಇನ್ಸಪೆಕ್ಟರ್ (ಎ.ಎಸ್. ಆಯ್) – Asstt. Police Sub-Inspector (ASI) – ನಿವೃತ್ತ ರಾಗಿದ್ದರು.
ಬೆಳಗಾವಿ ಜಿಲ್ಲೆಯ ಒಂದು ತಾಲೂಕಿನ ಮುಖ್ಯಸ್ಥಳವಾದ ಬೈಲಹೂಂಗಲದಲ್ಲಿ ಬೆಹರೆ ಚಾಳಿನಲ್ಲಿ ವಾಸವಾಗಿದ್ದರು. ಮನೆಗೆ ದೂರವಾಣಿ ಸಂಪರ್ಕವನ್ನು ಹೊಂದಿರಲಿಲ್ಲ.
ಪತ್ನಿ : ಕಮಲಾ (ಆದರೆ ತೌರುಮನೆ ಹೆಸರು ವನಮಾಲಾ ಎಂಬ ಹೆಸರಿನಿಂದಲೆ ಎಲ್ಲರಿಗೆ ಪರಿಚಿತ)
ಮಕ್ಕಳು :
ಚೊಚ್ಚಲ ಮಗ ರಮೇಶ – ಪೋಸ್ಟ ಮಾಸ್ಟರ (ನಿವೃತ್ತ) – ಇರುವದು ಬೆಳಗಾವಿಯಲ್ಲಿ.
ಎರಡನೆಯವಳು – ಚಿತ್ರಾಂಗದಾ ( ತನ್ನ ಸೋದರ ಅತ್ತೆ ಸುಬ್ಬಕ್ಕ ಇವರ ಜ್ಯೇಷ್ಠ ಪುತ್ರ) ಕೃಷ್ಣರಾವ ಉರ್ಫ್ ಬಾಬೂರಾವ ರಾಮರಾವ ಅಧ್ಯಾಪಕ ಇವರ ಪತ್ನಿ- ಇರುವದು – ಭೆಳಗಾವಿಯ ಟಿಳಕವಾಡಿಯಲ್ಲಿ.
ಮೂರನೆಯವ ಸುರೇಶ – ಪೋಸ್ಟ ಅಫೀಸಿನಲ್ಲಿಕೆಲಸವಿದ್ದಿತು. ಈಗ ನಿವೃತ್ತ. ಇರುವದು ಬೆಳಗಾವಿಯಲ್ಲಿ.
ನಾಕನೆಯವಳು ಕಾವೇರಿ (ಬೇಬಿ) – ಅಸುಂಡಿಯ ವಿಷ್ಣುಪಂತ ಸರದೇಸಾಯಿ ಇವರ ಪತ್ನಿ – ಇರುವದು ಅಸುಂಡಿಯಲ್ಲಿ.
ಐದನೆಯವಳು ಅಂಜನಾ – ಮುಧೋಳದ ವೆಂಕಟೇಶ ಮನಗೂಳಿ ಇವರ ಪತ್ನಿ. ಪತಿ ತೀರಿಕೊಂಡಿದ್ದಾರೆ. ಇರುವದು ಮುಧೋಳದಲ್ಲಿ.
ಆರನೆಯವವಳು ಜಯಶ್ರೀ – ಇರುವದು ಬೈಲಹೊಂಗಲದಲ್ಲಿ.
ಏಳನೆಯವ ಜನಾರ್ಧನ – ಕೆ.ಎಸ್.ಆರ್.ಟಿ.ಸಿ ಯಲ್ಲಿ ಕಂಡಕ್ಟರ, ಇರುವದು ಯರಗಟ್ಟಿಯಲ್ಲಿ.
ವಿವರವಾದ ಪರಿಚಯ : ಮುರಗೋಡದ ರಂಗಾಚಾರ್ಯರ ಪ್ರಪೌತ್ರ, ಅನಂತಾಚಾರ್ಯರ ಪೌತ್ರ, ರಾಮಾಚಾರ್ಯರ ಪುತ್ರ – ಪಾಂಡುರಂಗ
ಜನ್ಮ ದಿನಾಂಕ ಮತ್ತು ಸ್ಥಳ: ಮುರಗೋಡದಲ್ಲಿದ್ದ ತಂದೆಯ ಮನೆಯಲ್ಲಿ ೫-೧೦-೧೯೧೪ ರಂದು ಹುಟ್ಟಿದ್ದು.
ಮರಣ: ಬೈಲಹೊಂಗಲದಲ್ಲಿನ ಬೆಹರೆ ಚಾಳಿನಲ್ಲಿದ್ದ ತನ್ನ ಸ್ವಂತ ಮನೆಯಲ್ಲಿ ಹೃದಯಾಘಾತದಿಂದ ಎಪ್ರಿಲ ೧೯೯೩ ರಲ್ಲಿ ತೀರಿಕೊಂಡದ್ದು. ಅಂದು ಚೈತ್ರ ಬಹುಳ ತೃತೀಯಾ ತಿಥಿ ಇದ್ದಿತು. ಕೊನೆಯ ಕ್ಷಣಗಳಲ್ಲಿ ಹತ್ತಿರ ಇದ್ದವ ಕೊನೆಯ ಮಗ ಜನಾರ್ಧನ. ಉಳಿದವರು ನೌಕರಿಯ ನಿಮಿತ್ತ ಬೇರೆ ಸ್ಥಳಗಳಲ್ಲಿ ಇದ್ದರು.
ಶಿಕ್ಷಣ : ಹುಟ್ಟಿದ ಊರು ಮುರಗೋಡ ಮತ್ತು ನಂತರ ಬೆಳಗಾವಿಯಲ್ಲಿನ ಪೇಟೆಯಲ್ಲಿ ವೆಂಕಟೇಶ ದೇವರ ಗುಡಿಯ ಹತ್ತಿರದ ಪ್ರಾಥಮಿಕ ಶಾಲೆಯಲ್ಲಿ ಏಳನೆ ಇಯತ್ತೆಯ ವರೆಗೆ ಕಲಿತು, ನಂತರ ಬೆಳಗಾವಿಯ ಗಿಲಗಂಚಿ ಅರಟಾಳ (ಜಿ.ಎ.) ಹಾಯಸ್ಕೂಲಿನಲ್ಲಿ ಮಾಧ್ಯಮಿಕ ಶಿಕ್ಷಣ ಪಡೆದುದು. ಕೇವಲ ಮ್ಯಾಟ್ರಿಕ್ ಕ್ಲಾಸಿನ ವರೆಗೆ ಕಲಿತಿದ್ದರೋ ಅಥವಾ ಮ್ಯಾಟ್ರಿಕ್ ಪರೀಕ್ಷೆಯನ್ನೂ ಪಾಸಾಗಿದ್ದರೊ – ಆ ಬಗ್ಗೆ ಈಗ ಹೇಳುವವರು ಯಾರೂ ಇಲ್ಲ.
ವೃತ್ತಿ ಜೀವನ :
ಒಳ್ಳೇ ಎತ್ತರವಾಗಿ (೫ ಫೂಟು ೧೧ ಇಂಚು) ಮತ್ತು ಚೆನ್ನಾದ ಮೈಕಟ್ಟು ಹೊಂದಿದ್ದ ಅವರಿಗೆ ಪೋಲೀಸ್ ಇಲಾಖೆಯಲ್ಲಿ ಕೆಲಸಸಿಗಲು ಕಷ್ಟವಾಗಿರಲಿಕ್ಕಿಲ್ಲ. ಅಣ್ಣ ಗೋವಿಂದಣ್ಣ ಮತ್ತು ಅನಂತಣ್ಣ ಅವರು ಬಹುಶಃ ಅದಾಗಲೇ ಇದೇ ಪೋಲಿಸು ಖಾತೆಯಲ್ಲಿ ಕೆಲಸ ಹೊಂದಿದ್ದರೆಂದು ಕಾಣುತ್ತದೆ. ಇಬ್ಬರು ಅಣ್ಣಂದಿರು ಇದ್ದ ಅದೇ ಖಾತೆಯಲ್ಲಿ ಮೂರನೆಯವರಾಗಿ ೧೯೩೫ ರಲ್ಲಿ – ತಮ್ಮ ೨೬ನೆ ವಯಸ್ಸಿನಲ್ಲಿ, ಇವರೂ ಸೇರಿಕೊಂಡರು. ಮುಂದೆ ತಮ್ಮ ಸರ್ವೀಸಿನಲ್ಲಿ, ಬೆಳಗಾವಿ, ಯಮಕನಮರಡಿ, ಚಿಕ್ಕೋದಿ, ಅಥಣಿ, ಮತ್ತೆ ಬೆಳಗಾವಿ, ಗೋಗಿ, ಗುರುಮಿಟಕಲ್ಲ (ಎರಡೂ ಕಲಬುರಗಿ ಜಿಲ್ಲೆ), ಕೊನೆಯಲ್ಲಿ ಬೈಲಹೊಂಗಲ – ಈ ಸ್ಥಳಗಳಲ್ಲಿ ಕೆಲಸ ಮಾಡಿದರು.
ಬಹುಶಃ ಕಾನ್ಸಟೆಬಲ್ ಆಗಿ ಸೇರಿರಬೇಕು. ಕೊನೆಯಲ್ಲಿ ಅಸಿಸ್ಟಂಟ ಸಬ್-ಇನ್ ಸ್ಪೆಕ್ಟರ (ಏ.ಎಸ್.ಆಯ್) ಎಂದು ೫-೧೦-೧೯೬೭ರಲ್ಲಿ, ಬೈಲಹೊಂಗಲ ದಲ್ಲಿ, ೩೪ ವರ್ಷ ೨ ತಿಂಗಳು ೪ ದಿವಸ ಸೇವೆಸಲ್ಲಿಸಿ ನಿವೃತ್ತಿಯಾದರು.
ವಿವಾಹ: ಚಿಕ್ಕೋಡಿಯ ಕಟ್ಟಿ ಮನೆತನದ ಗೋಪಾಳಾಚಾರ್ಯ ಮತ್ತು ಸಾವಿತ್ರಿಬಾಯಿ ಈ ದಂಪತಿಗಳ ಕಡೆಯ ಮಗಳು ವನಮಾಲಾ ಜೊತೆ ಚಿಕ್ಕೋಡಿಯಲ್ಲಿ ಪಾಂಡುಕಾಕಾ ಅವರ ಮದುವೆ ನಡೆಯಿತು.
ಅದು ಬಹುಶಃ ೧೯೩೭ ರಲ್ಲಿ. ಮದುವೆಯ ಈ ವರ್ಷದ ಬಗ್ಗೆ ಯಾವ ದಾಖಲೆ ಇರದಿದ್ದರೂ ಹೆಚ್ಚುಕಡಿಮೆ ಇದು ಸರಿಯಾದುದೆ ಇರಬೇಕು ಎನ್ನಲು ಆಧಾರ – ಪಾಂಡೂಕಾಕಾ- ವನಮಾಲಕಾಕೂ ಅವರಿಗೆ ಹಿರಿಯ ಮಗ ರಮೇಶ ಹುಟ್ಟಿದ್ದು ೧೯೪೪ ರಲ್ಲಿ, ಅವನ ಜನ್ಮ ತಮ್ಮ ಮದುವೆಯಾದ ಏಳು ವರ್ಷಗಳ ನಂತರವಾಯಿತೆಂದು ಸ್ವತಃ ತಮ್ಮ ತಾಯಿಯೆ ಹೇಳುತ್ತಿದ್ದರೆಂದು ರಮೇಶ ನೆನಪಿಸಿಕೊಳ್ಳುವದು. ಅದನ್ನು ಸಮರ್ಥಿಸುವ ಮತ್ತೊಂದು ನೆನಪು -ನಮ್ಮ ಇನ್ನೊಬ್ಬ ಕಾಕೂ – ಗೋವಿಂದಕಾಕಾ ಅವರ ಎರಡನೆ ಹೆಂಡತಿ ಗೊಕಾವಿ ಸುಬ್ಬಾ ಅವರದು. ಆ ನೆನಪಿನಂತೆ- ಅವರ ಮದುವೆ ಮಾಘದಲ್ಲಿ, ಅಂದರೆ ಫೆಬ್ರುವರಿ ೧೯೪೧ ರಲ್ಲಿ ಆಗಿದ್ದಿತಂತೆ. “ಅಷ್ಟು ಹೊತ್ತಿಗೆ ಪಾಂಡೂಕಾಕಾನದೂ ಮದುವೆಯಾಗಿತ್ತಲ್ಲದೆ ಅದಾಗಲೆ ವನಮಾಲಕಾಕೂ ನಾಕೋ ಅಥವಾ ಐದೋ ಮಂಗಳಾಗೌರಿ ಮಾಡಿದ್ದರು – ಅವರ ಮದುವೆಯಾಗಿ ನಾಕು ವರ್ಷ ಅಗಿದ್ದಿತು”.
ಇನ್ನು ಪಾಂಡೂಕಾಕಾ ಅವರಿಗೆ ಹೆಣ್ಣು ಕೊಟ್ಟ ಮಾವ ಗೋಪಾಳಾಚಾರ್ಯರ ಕಟ್ಟಿಯವರ ಬಗ್ಗೆ : ಅವರ ತಂದೆ ಬಾಳಾಚಾರ್ಯರೊ ಅಥವಾ ಅವರ ಹಿರಿಯರೊ ಒಬ್ಬರು ಉತ್ತರಾದಿ ಮಠದ ದಿವಾನರಾಗಿದ್ದರಂತೆ. ಗೋಪಾಳಾಚಾರ್ಯರು ಚಿಕ್ಕೋಡಿಯ ವೆಂಕಟೇಶ ಗುಡಿ ಓಣಿಯಲ್ಲಿನ ವೆಂಕಟೇಶ ದೇವಾಲಯದ ಅರ್ಚಕರಾಗಿದ್ದರು. ಬಹುಶಃ ಅವರು ೧೮೮೫ರ ಆಸುಪಾಸಿನಲ್ಲಿ ಹುಟ್ಟಿದವರಾಗಿರಬೇಕು. ಇವರಿಗೆ ಇಬ್ಬರು ಹೆಂಡಂದಿರು.
ಆಚಾರ್ಯರಿಗೆ ಒಟ್ಟು ಐದು ಮಕ್ಕಳು- ಎರಡು ಗಂಡು, ಮೂರು ಹೆಣ್ಣು. ಮೊದಲ ಹೆಂಡತಿಯ ಹೊಟ್ಟೆಯಿಂದ ಹುಟ್ಟಿದ ಏಕಮಾತ್ರ ಸಂತಾನ ರಾಮಾಚಾರ್ಯ, ಎರಡನೆ ಹೆಂಡತಿಯಿಂದ ಹುಟ್ಟಿದವರು- ೧) ಅಕ್ಕವ್ವ ೨) ಅಣ್ಣಾಚಾರ್ಯ ೩) ಸಣ್ಣಕ್ಕ ೪) ವನಮಾಲಾ.
ಹೀಗಾಗಿ ರಮೇಶ ಅವರನ್ನು ಒಳಗೊಂಡು, ಪಾಂಡುಕಾಕಾ ಅವರ ಎಲ್ಲ ಮಕ್ಕಳಿ,ಗೆ ಇಬ್ಬರು ಸೋದರ ಮಾವಂದಿರು – ಹಿರಿಯವರು ರಾಮಾಚಾರ್ಯ, ಕಿರಿಯವರು ಅಣ್ಣಾಚಾರ್ಯ, ಹಾಗೆಯೆ ಇಬ್ಬರು ಮಾವಶಿಯಂದಿರು – ಹಿರಿಯವರು ಅಕ್ಕವ್ವ ಮತ್ತು ಕಿರಿಯವರು ಸಣ್ಣಕ್ಕ.
ಗೋಪಾಳಾಚಾರ್ಯರಿಗೆ ಚಿಕ್ಕೋಡಿಯಲ್ಲಿ ಎರಡು ಮನೆಗಳೂ ಎರಡು ತೋಟಗಳೂ ಇದ್ದವು. ಆ ಊರಿನಲ್ಲಿ ಕಟ್ಟಿ ಮನೆತನದ ಬೇರೆ ಕೆಲ ಜನ ಬಹುಶಃ ಈಗಲೂ ಇದ್ದು, ಅವರವರ ಸ್ವಂತ ಮನೆಗಳು ಅಲ್ಲಿ ಇವೆ. ಗೋಪಾಳಾಚಾರ್ಯರ ಆ ಮನೆಗಳು ಆ ಕಾಲದಲ್ಲಿಯೆ ಹಳೆಯವಿದ್ದು, ತಕ್ಕ ಮಟ್ಟಿಗೆ ದೊಡ್ಡವೂ ಕೂಡ. ಒಂದು ಮನೆ ಜೋಶಿ ಗಲ್ಲಿಯಲ್ಲಿ ಇದ್ದಿತು. ಅವರು ಕಾಲವಾದ ನಂತರ ಒಂದೊಂದು ಮನೆ ಹಾಗೂ ತೋಟ ಅವರ ಇಬ್ಬರು ಗಂಡು ಮಕ್ಕಳು – ರಾಮಾಚಾರ್ಯ ಮತ್ತು ಅಣ್ಣಾಚಾರ್ಯರ ಪಾಲಿಗೆ ಬಂದವು.
ಕಾಲಾಂತರದಲ್ಲಿ ಅಣ್ಣಾಚಾರ್ಯರು (ರಮೇಶ ಅವರ ಕಿರಿಯ ಸೋದರ ಮಾವ) ತಮ್ಮ ಪಾಲಿನ ಮನೆಯನ್ನು ಮಾರುವ ನಿರ್ಧಾರ ಮಾಡಿದಾಗ, ಅವರ ತಾಯಿ ಸಾವಿತ್ರಿಬಾಯಿ ತಾವು ಬಾಳಿಬದುಕಿದ, ಸಂಸಾರ ಮಾಡಿ ಮಕ್ಕಳನ್ನು ಹೆತ್ತು ಬೆಳೆಸಿ ಮದುವೆ ಮಾಡಿಕೊಟ್ಟ ಆ ಮನೆ ಬೇರೆಯವರ ಪಾಲಾಗುವ ಸಂಭವವನ್ನು ನೆನೆದು ಬಹಲ ದುಃಖ ಪಡುತ್ತ, ಹೇಗಾದರೂ ಆ ಮನೆ ತಮ್ಮ ಬಳಗದಲ್ಲಿಯೆ ಉಳಿಯಲೆಂದು ಮಗಳು ಅಕ್ಕವ್ವ ಮತ್ತು ಅಳಿಯ ಮಧ್ವಾಚಾರ್ಯ ಗೋಕಾಕ ಅವರಿಗೆ- ಹಾಗೆ ಕೇಳಿಕೊಂಡರಂತೆ. ಅವರ ಇಚ್ಛೆಯಂತೆ ಮಗಳು, ಅಳಿಯ ಆ ಮನೆಯನ್ನು ತಾವೇ ಖರೀದಿಸಿ – ಬೇಕೆನಿಸಿದಾಗಲೆಲ್ಲ ತಮ್ಮ ಅತ್ತೆಗೆ ಅಲ್ಲಿ ಬಂದು ಇರಲು ಅನುಕೂಲ ಮಾಡಿಕೊಟ್ಟರಂತೆ. ಇದು ನಡೆದದ್ದು ೧೯೪೭ ರ ಸುಮಾರಿಗೆ.
ಆ ನಂತರ ೧೯೪೮ ರಲ್ಲಿ ತಾವು ಆ ಮನೆಗೆ ಇರಲು ಹೊಗಿದ್ದು – ಸ್ವಲ್ಪ ನೆನಪಿದೆಯೆಂದು, ಆ ಹಳೆಯ ಕತೆಯನ್ನೆಲ್ಲ ಧಾರವಾಡ ಮಾಳಮಡ್ಡಿಯಲ್ಲಿ ವಾಸವಾಗಿರುವ ಪುಷ್ಪಾ ವಾಳ್ವೇಕರ ಅವರು ನೆನೆಸಿಕೊಳ್ಳುತ್ತಾರೆ. ಇವರು ಸಾವಿತ್ರಿಬಾಯಿಯ ಮೊಮ್ಮಗಳು (ಅಕ್ಕವ್ವ ಮತ್ತು ಮಧ್ವಾಚಾರ್ಯ ಗೋಕಾಕ ಅವರ ಮಗಳು), ರಮೇಶ ಅವರ ಮಾವಶಿಯ ಮಗಳು. ಮುಂದೆ ಕಾಲಾಂತರದಲ್ಲಿ ಪುಷ್ಪಾ ವಾಳ್ವೇಕರ ಅವರ ಕೊನೆಯ ತಮ್ಮ ಪ್ರಹ್ಲಾದ ಮಧ್ವಾಚಾರ್ಯ ಗೋಕಾಕ (ರಮೇಶ ಅವರ ಮಾವಶಿಯ ಮಗ) ಅವರು ಕೆಲ ಕಾಲ ಚಿಕ್ಕೋಡಿಯ, ಹಿರಿಯರ ಆ ಮನೆಯಲ್ಲಿ ಇದ್ದು ೧೯೯೩ ಅಥವಾ ೯೪ ರ ಆಸುಪಾಸಿನಲ್ಲಿ ಅದನ್ನು ಮಾರಿದರು. ಈಗ ಪ್ರಹ್ಲಾದ ಅವರು ಟಿಳಕವಾಡಿ- ಬೆಳಗಾವಿಯ ಲೇಲೆ ಗ್ರೌಂಡಿನ ಹತ್ತಿರ, ನೆಹರೂ ರೋಡಿನ ಮೇಲೆ ಇರುವ ಅಯೋಧ್ಯಾ ಅಪಾರ್ಟಮೆಂಟ ದಲ್ಲಿ ಇರುತ್ತಾರೆ.
ಚಿಕ್ಕೋಡಿಯಲ್ಲಿ ಮನೆಗಳಲ್ಲದೆ ತೋಟಗಳೂ ಇದ್ದವಲ್ಲವೆ! ಅಲ್ಲಿಯೆ ಹತ್ತಿರದ ಹಾಲಟ್ಟಿಯಲ್ಲಿನದು ರಾಮಾಚಾರ್ಯರ ಪಾಲಿಗೆ ಬಂದದ್ದು, ಹಾಗೆಯೆ ಅಣ್ಣಾಚಾರ್ಯರ ಪಾಲಿಗೆ ಬಂದಿದ್ದ ಎಕ್ಸಂಬಾದಲ್ಲಿನದು ಈ ಎರಡನ್ನೂ, ಇಬ್ಬರೂ ಮಾರಿದ್ದಾರೆ.
ರಮೇಶ ಅವರ ಹಿರಿಯ ಸೋದರ ಮಾವ ರಾಮಾಚಾರ್ಯ ಗೋಪಾಳಾಚಾರ್ಯ ಕಟ್ಟಿಯವರಿಗೆ ಇಬ್ಬರು ಮಕ್ಕಳು.
ಹಿರಿಯ ಮಗ – ಧೀರೇಂದ್ರ ರಾಮಾಚಾರ್ಯ ಕಟ್ಟಿ. ಇವರಿಗೆ ಟ್ರೆಜರಿಯಲ್ಲಿ ಕೆಲಸ- ಧಾರವಾಡದ ವಿಕಾಸ ನಗರದಲ್ಲಿ ವಾಸವಾಗಿದ್ದಾರೆ. ಕಿರಿಯ ಮಗ ಗೋಪಾಳ, ಪಶುಸಂಗೋಪನಾ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದರು. ಧಾರವಾದದಲ್ಲಿಯೆ ಇದ್ದ ಇವರು ಈಗ ತೀರಿಕೊಂಡಿದ್ದಾರೆ.
ರಮೇಶ ಅವರ ಕಿರಿಯ ಸೋದರ ಮಾವ – ಅಣ್ಣಾಚಾರ್ಯ ಗೋಪಾಳಾಚಾರ್ಯ ಕಟ್ಟಿ, ಪ್ರಾಥಮಿಕ ಶಾಲಾ ಶಿಕ್ಷಕರಾಗಿ ಇದ್ದರು. ೨೦೦೦ ನೆ ಇಸವಿಯಲ್ಲಿ (?) ತೀರಿಕೊಂಡರು. ಹೆಂಡತಿ – ಇಂದಿರಾಬಾಯಿ ಅವರೂ ತೀರಿಕೊಂಡಿದ್ದಾರೆ.
ಈ ದಂಪತಿಗಳಿಗೆ ೪ ಗಂಡು, ೨ ಹೆಣ್ಣು ಮಕ್ಕಳು- ಆ ಇಬ್ಬರೂ ತೀರಿಕೊಂಡಿದ್ದಾರೆ. ಗಂಡು ಮಕ್ಕಳು – ೧) ಕಾಂತೇಶ ಅಣ್ಣಾಚಾರ್ಯ ಕಟ್ಟಿ. ಎಲ್.ಆಯ್.ಸಿ ಯಲ್ಲಿ ಕೆಲಸ – ಧಾರವಾಡದ ವಿಕಾಸನಗರದಲ್ಲಿ ಇದ್ದಾರೆ. ೨) ಅಶೋಕ ಅ.ಕಟ್ಟಿ -ಆಯ್.ಟಿ.ಆಆಯ್ ದಲ್ಲಿ ಕೆಲಸ – ಬೆಳಗಾವಿಯ ಹೊರವಲಯದ ಕಾಕತಿಯಲ್ಲಿದ್ದಾರೆ. ೩) ಆನಂದ – ಎಮ್.ಕಾಮ್. ಆಗಿದ್ದಾರೆ. ಕೆಲವು ವರ್ಷ ಬ್ಯಾಂಕಿನ ಕೆಲಸ ಮಾಡಿ, ಈಗ ಸಾಫ್ಟವೇರ ಕಂಪನಿಯೊಂದರಲ್ಲಿ, ಪುಣೆಯಲ್ಲಿದ್ದಾರೆ. ೪) ರಾಘವೇಂದ್ರ ಅ. ಕಟ್ಟಿ – ಬಿ.ಕಾಮ್. ಸಾಫ್ಟವೇರ ಕಂಪನಿಯಲ್ಲಿ ಕೆಲಸ, ಬೆಂಗಳೂರಿನಲ್ಲಿ ಇದ್ದಾರೆ.
ಗೋಪಾಳಾಚಾರ್ಯರು, ತಮ್ಮ ಹಿರಿಯ ಮಗಳು ಅಕ್ಕವ್ವನ ಮದುವೆ ಮತ್ತು ಮಗ ಅಣ್ಣಾಚಾರ್ಯರ ಮುಂಜಿವೆಯನ್ನು ಆ ಲಗ್ನದ ಹೊತ್ತಿಗೇ ಮಾಡಿಕೊಟ್ಟ ಮೇಲೆ ಕೆಲವೆ ತಿಂಗಳುಗಳ ನಂತರ ತೀರಿಕೊಂಡರು. ಈಲಗ್ನ ಮತ್ತು ಮುಂಜಿವೆಗಳು ನಡೆದದ್ದು ೧೯೨೩ ರ ಸುಮಾರಿಗೆ, ಎಂದಮೇಲೆ ಅವರು ತೀರಿಕೊಂಡಿದ್ದು ೧೯೨೩-೨೪ರ ಹೊತ್ತಿಗೆ ಇರಬಹುದು. ಅಕ್ಕವ್ವ ಅವರ ಮದುವೆ ಅವರ ೧೩ನೆ ವಯಸ್ಸಿಗೆ ಆಗಿದ್ದಿತಂತೆ. ಅಂದರೆ ಅವರು ಹುಟ್ಟಿದ್ದು ೧೯೧೦ ನೆ ಇಸವಿ ಇರಬಹುದು. ಗೋಪಾಳಾಚಾರ್ಯರ ಪತ್ನಿ ಸಾವಿತ್ರಿಬಾಯಿ ತೀರಿಕೊಂಡದ್ದು ೧೯೬೯ ರಲ್ಲಿ, ಸಂಕೇಶ್ವರದಲ್ಲಿ. ಆಗ ಅವರಿಗೆ ಸುಮಾರು ೭೫ ವರ್ಷ ವಯಸ್ಸಾಗಿದ್ದಿತು.
ಇನ್ನು, ರಮೇಶ ಅವರ ಇಬ್ಬರು ಮಾವಶಿಯಂದಿರು – ಹಿರಿಯ ಮಾವಶಿ ಅಕ್ಕವ್ವ ಮತ್ತು ಕಿರಿಯ ಮಾವಶಿ ಸಣ್ಣಕ್ಕ.
ಅಕ್ಕವ್ವ ಅವರ ಬಗ್ಗೆ : ಜನ್ಮ -ಬಹುಶಃ ೧೯೧೦ನೆ ಇಸವಿ ಇರಬಹುದಾಗಿದೆ. ಮದುವೆ ಇವರ ಹದಿಮೂರನೆ ವಯಸ್ಸಿನಲ್ಲಿ, ಚಿಕ್ಕೋಡಿಯವರೆ ಆದ ಮಧ್ವಾಚಾರ್ಯ ಶೇಷಾಚಾರ್ಯ ಗೋಕಾಕ ಅವರೊಡನೆ ೧೯೨೩ ರಲ್ಲಿಯೊ, ತಪ್ಪಿದ್ದರೆ ೧೯೨೪ ರಲ್ಲಿ ನಡೆಯಿತು. ಮಧ್ವಾಚಾರ್ಯರರ ಹಿರಿಯರು ಯಾವಾಗಲೊ ಗೋಕಾಕದಲ್ಲಿ ಇದ್ದರೇನೋ, ಆ ಊರ ಹೆಸರು ಇವರ ಅಡ್ಡ ಹೆಸರಾಗಿದ್ದಿತು. ಒಂದುಕಾಲಕ್ಕೆ ಇವರ ಅಡ್ದ ಹೆಸರು ಕರವೀರ ಎಂದಿ ಇದ್ದಿತಂತೆ.
ಇವರು ಸ್ವಾತಂತ್ರ್ಯ ಯೋಧರು. ಜೈಲು ವಾಸವೂ ಆಗಿತ್ತು. ಉಪ್ಪಿನ ಸತ್ಯಾಗ್ರಹದಲ್ಲಿ ಭಾಗವಹಿಸಿದ್ದರು. ಲೋ. ಟಿಳಕರು ಆ ರಾಷ್ಟ್ರೀಯ ಶಾಲೆಯಲ್ಲಿ ಶಿಕ್ಷಕರಾಗಿ ಕೆಲಸ ಮಾದಿದ್ದರಿಂದ ’ಮದ್ಧೂ ಮಾಸ್ತರ’ ಎಂದು ಜನರಿಂದ ಗುರುತಿಸಲ್ಪಡುತ್ತಿದ್ದರು.೧೯೨೩ ರಲ್ಲಿ ನಾಗಪುರ್ ಬೈತೂರ ಕಾರಾಗ್ರಹಗಳಲ್ಲಿ ಜೈಲುವಾಸ ಅನುಭವಿಸಿದ್ದರು. ೧೯೩೦ರಲ್ಲಿ ಅಂಕೋಲಾದಲ್ಲಿ ನಡೆದ ಉಪ್ಪಿನ ಸತ್ಯಾಗ್ರಹದಲ್ಲಿ ಪ್ರಥಮ ದಿವಸವೆ ಉಪ್ಪು ತಯಾರಿಸಿ ಕಾಯದೆ ಭಂಗ, ಆಮೇಲೆ ಕುಮಟಾದಲ್ಲಿ ಉಪ್ಪಿನ ಸತ್ಯಾಗ್ರಹಮಾಡಿ ಹಿಂಡಲಗಾ ದಲ್ಲಿ ಜೈಲುವಾಸ ಶಿಕ್ಷೆಯನ್ನು ಅನುಭವಿಸಿದ್ದರು. ಕಾಯಂ ಖಾದೀಧಾರಿ, ಚಹದ ಚಟವೂ ಇರಲಿಲ್ಲ. ಆದರೆ ಸ್ವಾತಂತ್ರ್ಯಾನಂತರ ತಮ್ಮ ಹೋರಾಟದ ಲಾಭವವನ್ನು ಅಪೇಕ್ಷಿಸದೆ ಹೋಗಿದ್ದರಿಂದ, ಕೇಂದ್ರ ಸರಕಾರದಿಂದ ಉಲಿದ ಅನೇಕರಿಗೆ ಸಿಕ್ಕ ಪಿಂಚಣಿ ಇವರಿಗೆ ಮಾತ್ರ ಸಿಗಲಿಲ್ಲ. ಸ್ವಾತಂತ್ರ್ಯ ಸಿಕ್ಕ ನಂತರ ಶೇತಕಿ ಸೊಸಾಯಟಿ ಎಂದು ಕರೆಯಲ್ಪಡುತ್ತಿದ್ದ ಸಹಕಾರಿ ಸಂಘದಲ್ಲಿ ಕೆಲಸ ಮಾದುತ್ತ ೧೯೬೬-೬೭ರ ಸುಮಾರಿನಲ್ಲಿ ನಿವೃತ್ತರಾದರು. ತೀರಿಕೊಂಡದ್ದು ೧೯೮೦ ಅಥವಾ ೮೧ ರಲ್ಲಿ ತಮ್ಮ ೮೨ನೆ ವಯಸ್ಸಿನಲ್ಲಿ ತೀರಿಕೊಂಡರು. (ಆಧಾರ : ೧೩-೫-೨೦೦೫ ರಲ್ಲಿ ಸಂಯುಕ್ತ ಕರ್ನಾಟಕದಲ್ಲಿ ಬಂದ ಅಂಕೋಲಾ ಉಪ್ಪಿನ ಸತ್ಯಾಗ್ರಹದಲ್ಲಿ ಮಧು ಮಾಸ್ತರರ ಪಾತ್ರ, ಎಂಬ ವಿ.ಕೆ.ರೇವಣಕರ ಅವರ ’ಮಧೂ ಮಾಸ್ತರ” ಎಂಬ ಫೋಟೋ ಸಹಿತ ಲೇಖ).
ಇವರ ಮಕ್ಕಳು : ೧) ಬದರಿ ನಾರಾಯಣ ಮ ಗೋಕಾಕ – ಈಗ ಸುಮಾರು ೮೬ -೮೭ ವರ್ಷ ವಯಸ್ಸಿನವರಿರಬೇಕು. ಮೈಸೂರಿನಲ್ಲಿ, ಬಹಳ ಹಿಂದೆಯೆ ಒಬ್ಬ ಶಾಲಾ ಶಿಕ್ಷಕಿಯನ್ನು ಮದುವೆಯಾಗಿ, ವಾಸವಾಗಿದ್ದಾರೆ. ೨) ಶಿಲಾ – ಪ್ರಹ್ಲಾದ ಕಡ್ನಿ ಎಂಬುವರೊಡನೆ ಮದುವೆಯಾಗಿ ಚೆನ್ನೈ ಇದ್ದಾರೆ. ಕಡ್ನಿ ಅವರಿಗೆ ರೇಲ್ವೆಯಲ್ಲಿ ಕೆಲಸವಿದ್ದಿತು. ಈಗ ನಿವೃತ್ತರು. ೩) ಪುಷ್ಪಾ (ಅತ್ತೆ ಮನೆಯ ಹೆಸರು – ಪ್ರೇಮಾ). ರೇಲ್ವೆಯಲ್ಲಿ ಪಬ್ಲಿಕ್ ಪ್ರೊಸೆಕ್ಯುಟರ ಆಗಿದ್ದು, ಈಗ ನಿವೃತ್ತ ರಾದನಂತರ ಅಡ್ವೋಕೇಟೆಂದು ಕೆಲಸ ಮಾದುತ್ತಿರುವ ಗೋವಿಂದ ವೆಂಕಟೇಶ ವಾಳ್ವೇಕರ ಅವರ ಪತ್ನಿ. ಮಾಳಮಡ್ಡಿ- ಧಾರವಾಡದಲ್ಲಿ ವಾಸವಾಗಿದ್ದಾರೆ. ೪) ಧ್ರುವ – ಸಹಕಾರಿ ಇಲಾಖೆಯಲ್ಲಿ ಕೆಲಸ ಮಾಡಿ ನಿವೃತ್ತರಾದಮೇಲೆ ಮತ್ತು ಪತ್ನಿಯ ನಿಧನಾನಂತರ ಚಿಕ್ಕೋಡಿಯಲ್ಲಿ ಮಗನ ಹತ್ತಿರ ಇದ್ದರೆ. ಇನ್ನೊಬ್ಬ ಮಗ ಪುಣೆಯಲ್ಲಿ ಇರುತ್ತಾರೆ. ೫) ಪ್ರಹ್ಲಾದ – ಎಲ್.ಆಯ್.ಸಿಯಲ್ಲಿ ಕೆಲಸಮಾಡಿ ನಿವೃತ್ತರಾಗಿ ಟಿಳಕವಾಡಿ – ಬೆಳಗಾವಿಯ ನೆಹರು ರೋದ ಮೇಲೆ, ಲೇಲೇ ಗ್ರೌಂಡ ಹತ್ತಿರ, ಅಯೋಧ್ಯಾ ಅಪಾರ್ಟಮೆಂಟದಲ್ಲಿ ಇದ್ದಾರೆ. ಮಗ ಡಾಕ್ಟರ, ಮಗಳು ವಕೀಲೆ- ಎಲ್ಲರೂ ಬೆಳಗಾವಿಯಲ್ಲಿಯೆ ಇದ್ದಾರೆ.
ಸಣ್ಣಕ್ಕ ಅವರ ಬಗ್ಗೆ : ಅತ್ತೆ ಮನೆಯಲ್ಲಿ ಸುಶೀಲಾಬಾಯಿಯೆಂದು ಹೆಸರಿದ್ದ ಇವರು ವಾಮನರಾವ ಹುಬಳೀಕರ ವರ ಪತ್ನಿ. ಬಹುಶ: ಪೋಲೀಸ ಖಾತೆಯಲ್ಲಿ ಕೆಲಸ ಮಾಡುತ್ತಿದ್ದ ಇವರು ಸಣ್ಣ ವಯಸ್ಸಿನಲ್ಲಿ ತೀರಿಕೊಂಡಿದ್ದರಿಂದ, ವಿಧವೆಯಾಗಿ ತಮ್ಮ ಏಕ ಮಾತ್ರ ಪುತ್ರ ಅರವಿಂದನನ್ನು ಬೆಳೆಸುವ ಜವಾಬುದಾರಿಯನ್ನು ಹೊರಬೇಕಾಯಿತು. ಅರವಿಂದ ಅವರಿಗೆ ಮನೆಯಲ್ಲಿ ಕರೆಯುತ್ತಿದ್ದ ಪ್ರೀತಿಯ ಹೆಸರು ಬಂಡಾ ಎಂದು. ಶಿಕ್ಷಕರಾಗಿದ್ದ ಸೋದರ ಮಾವ ರಾಮಚಾರ್ಯರು ಬಾಲಕ ಅರವಿಂದನನ್ನು ತಮ್ಮ ಹತ್ತಿರ ಇಟ್ಟುಕೊಂಡು ಸಾಕಿದರು. ಅವರು ನೌಕರಿಯ ನಿಮಿತ್ತವಾಗಿ ಚಿಕ್ಕೋಡಿ ಮತ್ತು ಚಚಡಿಯಲ್ಲಿ ಇದ್ದುದರಿಂದ ಅರವಿಂದ ಅವರ ಶಾಲಾ ಶಿಕ್ಷಣ ಆ ಊರುಗಳಲ್ಲಿ ನಡೆಯಿತು. ಅವರ ಶಿಕ್ಷಣ ಎಲ್ಲಿಯ ವರೆಗೆ ಮುಂದುವರೆಯಿತು ಎಂಬ ಬಗ್ಗೆ ಮಾಹಿತಿ ಇಲ್ಲ. ಆದರೆ ಕಾಲಾಂತರದಲ್ಲಿ ಟೆಲಿಗ್ರಾಫ ಇಲಾಖೆಯಲ್ಲಿ ಕೆಲಸವಾಗಿ ನಿವೃತ್ತಿಯಾದ ಮೇಲೆ ಸಧ್ಯ ಡೊಂಬಿವಲಿಯಲ್ಲಿ ಇರುತ್ತಿದ್ದಾರೆ. ತಾಯಿ ಸಣ್ಣಕ್ಕ (ಸುಶೀಲಾಬಾಯಿ) ಮಗನ ಹತ್ತಿರ ಡೊಂಬಿವಲಿಯಲ್ಲಿದ್ದಾರೆ. ಅರವಿಂದ ಅವರಿಗೆ ಮೂರು ಹೆಣ್ಣು ಮಕ್ಕಳು.
(ಜನಾರ್ಧನನ ಕಡೆಯಿಂದ, ಬೈಲಹೊಂಗಲ ಮನೆಯಿಂದ ನಾನು ತಂದ ಪಾಂಡೂಕಾಕ ಅವರ ಕಾಲದ ಪತ್ರಗಳಲ್ಲಿ, ಡೊಂಬಿವಲಿಯಿಂದ ಅರವಿಂದ ಅವರು ತಮ್ಮ ಹಿರಿಯ ಮಗಳು ಶುಭದಾ ಇವಳ ವಿವಾಹ ೨೩-೫-೧೯೮೯ ರಂದು ಇದೆ. ಇದು ತಮ್ಮ ಮನೆಯಲ್ಲಿನ ಮೊದಲ್ ಮಂಗಲ ಕಾರ್ಯ, ಬರಬೇಕು ಎಂದು ಬಂಡಾ ಎಂಬ ಹೆಸರಿನಲ್ಲಿ ೪-೫- ೧೯೮೯ ರಂದುಬರೆದ ಪೋಸ್ಟ ಕಾರ್ಡ ಇದೆ).
ಬಂಡಾ/ ಅರವಿಂದ ಅವರ ಕುರಿತು ಬರೆಯುತ್ತಿರುವಂತೆಯೆ ಪಾಂಡುಕಾಕಾ ಅವರ ಬಗ್ಗೆ ಮತ್ತೂ ಒಂದು ಸಾಲು ಬರೆಯಬೇಕಿದೆ. ತಂದೆ ತೀರಿಹೋಗಿ ಚಿಕ್ಕ ವಯಸ್ಸಿನಲ್ಲಿ ಅನಾಥರಾದ ಇವರನ್ನು ಸೋದರ ಮಾವ ಸಾಕಿ ಶಿಕ್ಷಣ ಕೊಟ್ಟು ಬೆಳೆಸಿದ ಹಾಗೆ, ಉಪನಯನದ ಜವಾಬುದಾರಿಯನ್ನು ಮಾವಶಿಯ ಗಂಡ ಪಾಂಡೂಕಾಕಾ ವಹಿಸಿಕೊಂಡು (ಬಹುಶಃ ಚಿಕ್ಕೋಡಿಯಲ್ಲಿದ್ದಾಗ) ನೆರವೇರಿಸಿದ್ದ ವಿಶೇಷವನ್ನು ಉಲ್ಲೇಖಿಸಬೇಕಿದೆ. ಈ ಕಾರ್ಯ ನಡೆದದ್ದು ಪಾಂಡೂಕಾಕಾ ಅವರು ತಮ್ಮ ಹಿರಿಯ ಮಗ ರಮೇಶನ ಮುಂಜಿವೆಗಿಂತ ಬಹಳ ಮೊದಲು. (ಈ ವಿಷಯವನ್ನು ವನಮಾಲಾ ಕಾಕೂ ಅವರ ತೌರುಮನೆಯ ಮಾಹಿತಿಯ ಸಂಗ್ರಹಕ್ಕಾಗಿ ಹೋಗಿದ್ದಾಗ ಮಾಳಮಡ್ಡಿ ಧಾರವಾಡದಲ್ಲಿನ ಜಿ.ವಿ. ವಾಳವೇಕರ ಅವರ ಪತ್ನಿ ಪುಷ್ಪಾ ತಿಳಿಸಿದ್ದು).
ಆಸ್ತಿ ಪಾಸ್ತಿ: ತಮ್ಮ ಜೀವಿತಾವಧಿಯಲ್ಲಿ ಪಾಂಡುರಂಗ ಅವರು ಎರಡು ಹಂಚಿನ ಹಳೆಯ ಮನೆಗಳನ್ನು ಕೊಳ್ಳಲು – ಒಂದು, ಈಗ ಬೆಳಗಾವಿಯ ಭಾಗವೇ ಆಗಿರುವ ಅನಗೋಳದಲ್ಲಿ, ಎರಡನೆಯದು ತಾವು ಕೆಲಸದಿಂದ ನಿವೃತ್ತರಾಗುವ ಸರ್ವೀಸಿನ ಆ ಕೊನೆಯ ದಿನಗಳಲ್ಲಿ ವಾಸವಾಗಿದ್ದ ಬೈಲಹೊಂಗಲದ ಬೆಹರೆ ಚಾಳಿನ ಚಿಕ್ಕ ಮನೆ, ಇವುಗಳನ್ನು ಕೊಳ್ಳಲು ಸಾಧ್ಯವಾಯಿತು. ಇವುಗಳಲ್ಲಿ, ಅನಗೋಳದ ಮನೆಯನ್ನು ಅವರು ತಮ್ಮ ಜೀವಿತ ಕಾಲದಲ್ಲಿಯೆ ಮಾರಿಕೊಂಡರು. ಬೈಲಹೊಂಗಲದ ಮನೆಯನ್ನು ಅವರ ಕಡೆಯ ಮಗ ಜನಾರ್ಧನ ತಂದೆಯ ಮರಣಾನಂತರ ಮಾರಿಕೊಂಡುದು ಮತ್ತು ಯರಗಟ್ಟಿಯಲ್ಲಿ ಇರಹತ್ತಿದ್ದು.
ಯಾತ್ರೆ : ಹಿರಿಯ ಮಗ ರಮೇಶನ ಮುಂಜಿವೆಯ (೧೯೫೯) ನಂತರ, ಬಳಗವನ್ನೆಲ್ಲ ಎರಡು ಗಾಡಿ ಮಾಡಿಕೊಂಡು ಪಂಢರಪುರಕ್ಕೆ ಕರೆದುಕೊಂಡು ಹೋಗಿ ಬಂದರು.