ವಿವರವಾದ ಪರಿಚಯ
ಜನ್ಮ ದಿನಾಂಕ ಮತ್ತು ಸ್ಥಳ : ೧೫ ಜನೆವರಿ ೧೯೭೬ರಂದು ಹುಟ್ಟಿದ್ದು. ಆಗ ತಂದೆ ಕೆಲಸ ಮಾಡುತ್ತಿದ್ದ ಸ್ಥಳವಾದ ಯರಗಟ್ಟಿಯಲ್ಲಿ (ಬೆಳಗಾವಿ ಜಿಲ್ಲೆ) ಶಿಕ್ಷಣ : ಸ್ವಾಧ್ಯಾಯ ವಿದ್ಯಾಮಂದಿರ, ಟಿಳಕವಾಡಿ- ಬೆಳಗಾವಿಯಲ್ಲಿ ಕಲಿತು, ೧೯೯೨ರಲ್ಲಿ ಎಸ್.ಎಸ್.ಎಲ್.ಸಿ ಪರೀಕ್ಷೆಯನ್ನು ಪಾಸಾದುದು. ಪಿ.ಯು.ಸಿ ಮುಗಿಸಿದ್ದು ಗೋವಿಂದರಾಮ ಸಕ್ಸೇರಿಯಾ ಕಾಲೇಜಿನಲ್ಲಿ, ೧೯೯೪ರಲ್ಲಿ, ನಂತರ ಅದೇ ಕಾಲೇಜಿನಿಂದ ಬಿ.ಎಸ್.ಸಿ ಪದವಿಯನ್ನು ೧೯೯೭ ರಲ್ಲಿ ಪಡೆದುದು. ಅದಾದ ಮೇಲೆ ೨೦೦೨ರಲ್ಲಿ ಎಮ್.ಸಿ.ಎ ಪದವಿ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವ ವಿದ್ಯಾಲಯದಿಂದ ಪಡೆದು ಈಗ ಪಿ.ಎಚ್.ಡಿಗಾಗಿ ರಜಿಸ್ಟರ ಮಾಡಿದ್ದಾರೆ.
ಮರಣ ೧೬ ಜನೆವರಿ ೨೦೧೯ ಬೆಳಗಾವಿಯಲ್ಲಿ.
ವೃತ್ತಿ ಜೀವನ : ಸಹಪ್ರಾಧ್ಯಾಪಕ, ಗೋಗಟೆ ತಾಂತ್ರಿಕ ಮಹಾವಿದ್ಯಾಲಯ, ಬೆಳಗಾವಿ
ವಿವಾಹ : ಹರಿಹರದ ಮನೋಹರ ಸವಣೂರ ಮತ್ತು ಸುಮಾ ದಂಪತಿಗಳ ಪುತ್ರಿ ಸುಹಾಸಿನಿಯೊಂದಿಗೆ. ಮದುವೆಯ ನಂತರವೂ ಅದೇ ಹೆಸರು ಮುಂದುವರೆದುದು. ಸುಹಾಸಿನಿ ಹುಟ್ಟಿದ್ದು ೩೧ ಜನೆವರಿ ೧೯೮೫ರಲ್ಲಿ, ಹುಬ್ಬಳ್ಳಿಯಲ್ಲಿ. ಕುವೆಂಪು ವಿಶ್ವ ವಿದ್ಯಾಲಯದ ಬಿ.ಕಾಂ. ಪದವೀಧರೆ.
ಮಕ್ಕಳು :
೧) ಶ್ರೀಯಾ – ಶನಿವಾರ, ಜನೆವರಿ ೧೨, ೨೦೦೮ರಂದು ಬೆಳಿಗ್ಗೆ ೭.೨೦ ಕ್ಕೆ, ಧಾರವಾಡದಲ್ಲಿ. ಶತತಾರಾ ನಕ್ಷತ್ರ, ಕುಂಭ ರಾಶಿ. ಬೆಳಗಾವಿ-ಟಿಳಕವಾಡಿಯಲ್ಲಿನ ಕೆ.ಎಲ್.ಸೊಸಾಯಟಿಯ ಪ್ರಾಥಮಿಕ ಶಾಲೆಯಲ್ಲಿ ಒಂದನೆ ತಗತಿಯಲ್ಲಿದ್ದಾಳೆ
೨) ಸ್ಮೃತಿ – ೧೯ ಜುಲೈ, ೨೦೧೩ ರಲ್ಲಿ, ಸಂಜೆ ೪.೧೫ ಕ್ಕೆ, ಬೆಳಗಾವಿಯಲ್ಲಿ. ಶತತಾರ ನಕ್ಷತ್ರ, ಕುಂಭ ರಾಶಿ.
ಈ ಮಕ್ಕಳ ವಿಶೇಷ ; ಆಣ್ಣ ಶ್ರೀನಿವಾಸ ಅವರ ಪುತ್ರ ರಜತ ಮತ್ತು ತಮ್ಮ ದೀಪಕರಾಜ ಅವರ ಪುತ್ರಿಯರಾದ ಶ್ರೀಯಾ ಮತ್ತು ಸ್ಮೃತಿ – ಈ ಮೂರೂ ಮಕ್ಕಳು ಶತತಾರಾ ನಕ್ಷತ್ರ, ಕುಂಭ ರಾಶಿಯಲ್ಲಿಯೆ ಹುಟ್ಟಿದ್ದು.