ಪೋಸ್ಟಲ್ ಅಸಿಸ್ಟಂಟ, ಬೆಳಗಾವಿ ದೂರವಾಣಿ :
ವಿವರವಾದ ಪರಿಚಯ :
ಜನ್ಮ ದಿನಾಂಕ ಮತ್ತು ಸ್ಥಳ : ೧೪-೭-೧೯೭೪ ರಲ್ಲಿ, ಬೈಲಹೊಂಗಲದಲ್ಲಿ ಹುಟ್ಟಿದ್ದು. ಶಿಕ್ಷಣ : ಟಿಳಕವಾಡಿ-ಬೆಳಗಾವಿಯ ಸ್ವಾಧ್ಯಾಯ ವಿದ್ಯಾಮಂದಿರದಲ್ಲಿ ಮಾಧ್ಯಮಿಕ ಶಿಕ್ಷಣ , ಎಸ್.ಎಸ್.ಎಲ್.ಸಿ ಪರೀಕ್ಷೆ ಪಾಸಾಗಿದ್ದು ೧೯೯೦ರಲ್ಲಿ, ಪಿ.ಯು.ಸಿ ಪಾಸಾದುದು ಟಿಳಕವಾಡಿಯ ಗೋವಿಂದರಾಮ ಸಕ್ಸೇರಿಯ ಕಾಲೇಜ್ಇನಿಂದ ೧೯೯೨ರಲ್ಲಿ, ಮುಂದೆ ಅದೇ ಕಾಲೇಜಿನಿಂದ ಬಿ.ಏಸ್.ಸಿ ಪದವಿ ಪರೀಕ್ಷೆ ಪಾಸಾಗಿದ್ದು೧೯೯೪ರಲ್ಲಿ. ಆ ನಂತರವೂ ಶಿಕ್ಷಣವನ್ನು ಮುಂದುವರೆಸಿ, ಬೆಳಗಾವಿಯಲ್ಲಿಯೆ ಇದ್ದ ಕರ್ನಾಟಕ ವಿಶ್ವವಿದ್ಯಾಲಯದ ರಾಣಿ ಚೆನ್ನಮ್ಮಾ ಕ್ಯಾಂಪಸ ದಲ್ಲಿ ಗಣಿತ ವಿಷ್ಯವನ್ನು ತೆಗೆದುಕೊಂಡು ಎಮ್.ಎಸ್.ಸಿ. ಪದವಿಯನ್ನು೧೯೯೭ರಲ್ಲಿ ಪಡೆದುದು.
ವೃತ್ತಿ ಜೀವನ : ಅಂಚೆ ಇಲಾಖೆಯಲ್ಲಿ- ಪೋಸ್ಟಲ್ ಅಸಿಸ್ಟಂಟ
ವಿವಾಹ : ರಾಘವೇಂದ್ರರಾವ ಹುಡೆದ ಮತ್ತು ಅವರ ಪತ್ನಿ ಕುಮುದಾಬಾಯಿ ದಂಪತಿಗಳ ಪುತ್ರ ವಿಟ್ಠಲ ಅವರೊಂದಿಗೆ, ಬೆಳಗಾವಿಯಲ್ಲಿ. ವಿಟ್ಠಲ ಅವರು ಹುಟ್ಟಿದ್ದು ರಾಣೆಬೆನ್ನೂರಿನಲ್ಲಿ ಮಾರ್ಚ ೨೨, ೧೯೬೮ ರಲ್ಲಿ. ಅವರು ಡಿಪ್ಲೋಮಾ ಇನ್ ಇಂಜಿನೀಯರಿಂಗ ಪಾಸಾಗಿ, ಆರು ವರ್ಷ ಸಿಂಗಾಪುರದಲ್ಲಿ, ವಿವಾಹಾನಂತರ ಎರಡು ವರ್ಷ ಕೆನಡಾದಲ್ಲಿ ಕೆಲಸಮಾಡಿ ಸಧ್ಯ ಸಿ.ಎ.ಸಿ. ಪ್ರೋಗ್ರಾಮರ ಎಂದು ಬೆಳಗಾವಿಯ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದಾರೆ.
ಮಕ್ಕಳು : ಹರೀಶ , ಬೆಳಗಾವಿಯಲ್ಲಿ ಹುಟ್ಟಿದ್ದು, ಸೋಮವಾರ ೨೯-೮-೨೦೦೫ರಂದು. ಮಿಥುನ ರಾಶಿ. ಟಿಳಕವಾಡಿಯಲ್ಲಿನ ಕೆ.ಎಲ್.ಸೊಸಾಯಟಿಯ ಪ್ರಾಥಮಿಕ ಶಾಲೆಯಲ್ಲಿ ೪ನೆ ತರಗತಿಯಲ್ಲಿ ಓದುತ್ತಿದ್ದಾನೆ.
ವ್ಯಕ್ತಿ ವಿಶೇಷ : ಮುರಗೋಡದ ರಾಮಾಚಾರ್ಯರ ನಂತರದ ಪೀಳಿಗೆ – ಅವರ ಮಕ್ಕಳು ಮತ್ತು ಮೊಮ್ಮಕ್ಕಳಲ್ಲಿ ಪೋಸ್ಟ ಗ್ರಾಜುಯೆಟ (ಎಮ್.ಎಸ್.ಸಿ.) ಆದ ಮೊದಲನೆ ಹೆಣ್ಣು ಮಗಳು. ಅದಕ್ಕೂ ಮೊದಲು, ಅವಳ ಕಕ್ಕ – ರಂಗಣ್ಣ ಕಾಕಾ (ರಂಗನಾಥ) ಅವರ ಮಗಳು ವಿಜಯಾಲಕ್ಷ್ಮಿ ಬೆಳಗಾವಿಯ ಲಿಂಗರಾಜ ಕಾಲೇಜಿನಲ್ಲಿ ಕಲಿತು ಆರ್ಟ್ಸ್ ಪದವಿ (ಬಿ.ಎ.) ಪಡೆದು ಹೆಣ್ಣುಮಕ್ಕಳಲ್ಲಿನ ಮೊದಲ ಗ್ರ್ಯಾಜುಯೆಟ ಎನಿಸಿಕೊಂಡಿದ್ದಳು.