(ಮುರಗೋಡ ಮೂಲದ) ರಾಮಾಚಾರ್ಯರ ಪ್ರಪೌತ್ರ, ಪಾಂಡುರಂಗ ಅವರ ಪೌತ್ರ, ರಮೇಶ ಅವರ ಪುತ್ರ – ಶ್ರೀನಿವಾಸ (ಉರ್ಫ ರಾಜೂ)
ವಿವರವಾದ ಪರಿಚಯ
(ಮುರಗೋಡ ಮೂಲದ) ರಾಮಾಚಾರ್ಯರ ಪ್ರಪೌತ್ರ, ಪಾಂಡುರಂಗ ಅವರ ಪೌತ್ರ, ರಮೇಶ ಅವರ ಪುತ್ರ – ಶ್ರೀನಿವಾಸ (ಉರ್ಫ ರಾಜೂ)
ಜನ್ಮ ದಿನಾಂಕ ಮತ್ತು ಸ್ಥಳ : ಹುಟ್ಟಿದ್ದು ಗದಗಿನಲ್ಲಿ, ಅಲ್ಲಿ ಗ್ರಾಮಸೇವಕರಾಗಿದ್ದ ತನ್ನ ಸೋದರಮಾವ ವಸಂತರಾವ ಕುಲಕರ್ಣಿಯವರ ಮನೆಯಲ್ಲಿ, ೪ ಮಾರ್ಚ ೧೯೭೩ ರಂದು.
ಶಿಕ್ಷಣ : ಸ್ವಾಧ್ಯಾಯ ವಿದ್ಯಾಮಂದಿರ, ಟಿಳಕವಾಡಿ- ಬೆಳಗಾವಿ ಯಲ್ಲಿ ಕಲಿತು ೧೯೮೮ರಲ್ಲಿ ಎಸ್.ಎಸ್.ಎಲ್.ಸಿ ಪರೀಕ್ಷೆಯನ್ನು ಪಾಸಾದುದು. ಪಿ.ಯು.ಸಿ ಮುಗಿಸಿದ್ದು ಗೋವಿಂದರಾಮ ಸಕ್ಸೇರಿಯಾ ಕಾಲೇಜಿನಲ್ಲಿ, ೧೯೯೦ರಲ್ಲಿ ನಂತರ ಇಂಜಿನೀಯರಿಂಗದಲ್ಲಿ ಪದವಿ – ಬಿ.ಇ. ಮುಗಿಸಿದ್ದು ೧೯೯೪ ರಲ್ಲಿ ಬೆಳಗಾವಿಯ ಕೆ.ಎಲ್.ಇ. ಸೊಸಾಯಟಿಯ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಕಲಿತು. ಆ ನಂತರ ವಿಶ್ವೇಶ್ಷ್ವರಯ್ಯಾ ತಾಂತ್ರಿಕ ವಿಶ್ವವಿದ್ಯಾಲಯ, ಬೆಳಗಾವಿ (ವಿ.ಟಿ.ಯು) ದಿಂದ ೨೦೦೬ರಲ್ಲಿ ಎಂ.ಟೆಕ್. ಪದವಿಯನ್ನು ಪಡೆದುದು, ಆ ಮೇಲೆ ಅದೆ ವಿಶ್ವ ವಿದ್ಯಾಲಯದಿಂದ ಡಾಕ್ಟರೇಟ ಪದವಿ ಪಿ.ಎಚ್.ಡಿ) ೨೦೧೨ರಲ್ಲಿ.
ವೃತ್ತಿ ಜೀವನ : ಹುಟ್ಟಿ, ಬೆಳೆದು ಶಿಕ್ಷಣ ಮತ್ತು ಡಾಕ್ಟರೇಟ್ ಪದವಿ ಪಡೆದ ಊರಾದ ಬೆಳಗಾವಿಯಲ್ಲಿಯೆ ಗೋಗಟೆ ಇಂಜಿನೀಯರಿಂಗ ಕಾಲೇಜಿನಲ್ಲಿ (ಜಿ.ಆಯ್.ಟಿ) ಶಿಕ್ಷಕನಾಗಿ ವೃತ್ತಿ ಜಿವನದ ಪ್ರಾರಂಭ. ಈಗ ಅದೆ ಕಾಲೇಜಿನಲ್ಲಿ ಪ್ರಾಧ್ಯಾಪಕ. ಅಲ್ಲದೆ ಸಧ್ಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದಲ್ಲಿ ವಿಶೇಷಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ವಿವಾಹ : ಮಹಾರಾಷ್ಟ್ರದ ವಾಯಿ ಯಲ್ಲಿ ಕೆಲಸ ಮಾಡುತ್ತಿದ್ದ ಶ್ಯಾಮರಾವ (ಬಾಬೂರಾವ) ಬಸಿದೋಣಿ ಮತ್ತು ಅವರ ಪತ್ನಿ ಸರೋಜಿನಿ ದಂಪತಿಗಳ ಪುತ್ರಿ ರೋಹಿಣಿಯೊಂದಿಗೆ ಬೆಳಗಾವಿಯಲ್ಲಿ ವಿವಾಹ. ಅತ್ತೆ ಮನೆಯಲ್ಲಿಯೂ ಅದೇ ಹೆಸರು ಮುಂದುವರೆದುದು. ೨೦-೭-೧೯೭೯ರಲ್ಲಿ ವಾಯಿಯಲ್ಲಿ ಹುಟ್ಟಿದ ರೋಹಿಣಿ ಫಿಸಿಕ್ಸ ವಿಷಯದಲ್ಲಿ ಪುಣೆ ವಿಶ್ವ ವಿದ್ಯಾಲಯದ ಎಂ.ಟೆಕ್ ಪದವೀಧರೆ. ಸಧ್ಯ ಬೆಳಗಾವಿಯ ಜೈನ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಸಹಪ್ರಾಧ್ಯಾಪಕರಾಗಿದ್ದಾರೆ.
ಮಕ್ಕಳು : ರಜತ್, ಹುಟ್ಟಿದ್ದು ಬೆಳಗಾವಿಯಲ್ಲಿ, ಶನಿವಾರ ೨೦ ಆಗಸ್ಟ ೨೦೦೫ ರಂದು .ಶತತಾರಾ ನಕ್ಷತ್ರ, ಕುಂಭ ರಾಶಿ. ಸಧ್ಯ, ೪ನೆವರ್ಗದ ವಿದ್ಯಾರ್ಥಿ, ಕೆ.ಎಲ್.ಸೊಸಾಯಟಿಯ ಪ್ರಾಥಮಿಕ ಶಾಲೆ, ಟಿಳಕವಾಡಿ- ಬೆಳಗಾವಿಯಲ್ಲಿ.
ವಿಶೇಷ ಸಾಧನೆ : ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಎಮ್.ಟೆಕ್ ಪದವಿ ಪರೀಕ್ಷೆಯಲ್ಲಿ ವಿಶ್ವವಿದ್ಯಾಲಯಕ್ಕೇ ಪ್ರಥಮ ಸ್ಥಾನ ಪಡೆದು ರಾಜ್ಯಪಾಲರಿಂದ ಸುವರ್ಣ ಪದಕವನ್ನು ಪಡೆದುದು. ಹಲವು ಸಂಸ್ಥೆಗಳಲ್ಲಿ ಆಹ್ವಾನಿತ ಭಾಷಣಗಳನ್ನು ಕೊಟ್ಟಿದ್ದಾರೆ.