೧. ಶ್ರೀನಿವಾಸ ಉರ್ಫ್ ರಾಜೂ – ಪ್ರಾಧ್ಯಾಪಕ, ಗೋಗಟೆ ತಾಂತ್ರಿಕ ಮಹಾವಿದ್ಯಾಲಯ ; ವಿವಾಹಿತ ; ಇರುವದು ಬೆಳಗಾವಿಯಲ್ಲಿ
೨. ಅನುರಾಧಾ – ಪೋಸ್ಟಲ್ ಅಸಿಸ್ಟಂಟ್, ವಿವಾಹಿತೆ (ವಿಟ್ಠಲ ಹುಡೆದ ಅವರ ಪತ್ನಿ), ಇರುವದು ಬೆಳಗಾವಿಯಲ್ಲಿ
೩. ದೀಪಕ ರಾಜ – ಸಹಪ್ರಾಧ್ಯಾಪಕ, ಗೋಗಟೆ ತಾಂತ್ರಿಕ ಮಹಾವಿದ್ಯಾಲಯ ; ವಿವಾಹಿತ ; ಇರುವದು ಬೆಳಗಾವಿಯಲ್ಲಿ.
ವಿವರವಾದ ಪರಿಚಯ :
(ಮುರಗೋಡದ) ಅನಂತಾಚಾರ್ಯರ ಪ್ರಪೌತ್ರ, ರಾಮಾಚಾರ್ಯರ ಪೌತ್ರ, ಪಾಂಡುರಂಗ ಅವರ ಪುತ್ರ – ರಮೇಶ
ಜನ್ಮ ದಿನಾಂಕ ಮತ್ತು ಸ್ಥಳ : ೨೩ ಅಗಸ್ಟ ೧೯೪೪ (ಋಷಿ ಪಂಚಮಿ ದಿವಸ), ಬೆಳಗಾವಿಯಲ್ಲಿ.
ಶಿಕ್ಷಣ : ಚಿಕ್ಕೋಡಿ ಮತ್ತು ಬೆಳಗಾವಿಯಲ್ಲಿ ಪ್ರಾಥಮಿಕ ಶಿಕ್ಷಣ, ಬೆಳಗಾವಿ, ಅಥಣಿ ಹಾಗೂ ಮತ್ತೆ ಬೆಳಗಾವಿಯಲ್ಲಿ ಮಾಧ್ಯಮಿಕ ಶಿಕ್ಷಣ, ಬಿ.ಕೆ.ಮಾಡೆಲ ಹಾಯಸ್ಕೂಲಿನಿಂದ ೧೯೬೧ರಲ್ಲಿ ಎಸ್.ಎಸ್.ಎಲ್.ಸಿ ಪರೀಕ್ಷೆ ಪಾಸಾದುದು. ಪದವಿ ಪೂರ್ವ ಶಿಕ್ಷಣ (ಪಿ.ಯು.ಸಿ) – ರಾಜಾ ಲಖಮನಗೌಡಾ ಸಾಯನ್ಸ ಕಾಲೇಜ, ಬೆಳಗಾವಿ.
ವೃತ್ತಿ ಜೀವನ : ಅಂಚೆ ಮತ್ತು ತಂತಿ ಇಲಾಖೆಯಲ್ಲಿ ಕ್ಲರ್ಕ ಎಂದು ಆಳಂದ (ಗುಲಬರ್ಗಾ – ಈಗಿನ ಕಲಬುರಗಿ ಜಿಲ್ಲೆ) ದಲ್ಲಿ ವೃತ್ತಿ ಜೀವನ ಶುರುವಾಗಿ ಕಾಲಕ್ರಮದಲ್ಲಿ ಈ ಮುಂದಿನ ಸ್ಥಳಗಳಲ್ಲಿ- ಗುಲಬರ್ಗಾ, ಯಾದಗಿರಿ, ರಾಯಚೂರ, ಕೊಪ್ಪಳ, ಕಾಗವಾದ, ಬೈಲಹೊಂಗಲ, ಯರಗಟ್ಟಿ, ಗೋಕಾಕ, ನೇಸರಗಿ, ರಾಮದುರ್ಗ ಕೆಲಸಮಾಡಿ, ಬೆಳಗಾವಿಯ ಟಿಳಕವಾಡಿ ಮುಖ್ಯಶಾಖೆಯ ಪೋಸ್ಟ ಮಾಸ್ತರ ಎಂದು, ೨೦೦೪ರ ಜನೆವರಿಯಲ್ಲಿ (ಒಂದು ವರ್ಷ ಮೊದಲೇ) ಸ್ವೇಚ್ಛಾ ನಿವೃತ್ತಿ ಪಡೆದುದು.
ವಿವಾಹ : ನಿಡಗುಂದಿಯಲ್ಲಿ ಹೊಲ-ಮನೆಗಳನ್ನು ಹೊಂದಿದ್ದ ತಿರುಮಲರಾವ ವ್ಯಂಕಟರಾವ ಕುಲಕರ್ಣಿಯವರ ಪುತ್ರಿ ಸುಭದ್ರಾ ಇವಳೊಡನೆ ನಿಡಗುಂದಿಯಲ್ಲಿಯೆ (ರೋಣ ತಾಲೂಕು, ಧಾರವಾಡ ಜಿಲ್ಲೆ), ಜನೆವರಿ ೨೨, ೧೯೭೨ ರಂದು ನೆರವೇರಿತು. ನಂತರ ಸುಭದ್ರಾ ಇವರಿಗೆ ಅತ್ತೆಮನೆಯಲ್ಲಿ ಗೀತಾ ಎಂದು ಹೆಸರಿಡಲಾಯಿತು. ತಮ್ಮ ತಂದೆಯ ಏಳು ಮಕ್ಕಳಲ್ಲಿ ಇವರು, ಇಬ್ಬರು ಅಣ್ಣಂದಿರ ನಂತರ ಮೂರನೆಯವರು. ನಂತರ ಒಬ್ಬ ತಂಗಿ, ಇಬ್ಬರು ತಮ್ಮಂದಿರು. ಮಾಧ್ಯಮಿಕ ಶ್ಹಿಕ್ಷಣ ಗದಗದಲ್ಲಿನ ವಿದ್ಯಾದಾನ ಸಮಿತಿ ಹಾಯಸ್ಕೂಲಿನಲ್ಲಿ ನಡೆದು ಅಲ್ಲಿಂದಲೆ ಎಸ್.ಎಸ್.ಎಲ್.ಸಿ ಪರೀಕ್ಷೆಯನ್ನು ಪಾಸಾದುದು.
ಮಕ್ಕಳು : ಹಿರಿಯ ಮಗ ಶ್ರೀನಿವಾಸ ಉರ್ಫ ರಾಜೂ ಹುಟ್ಟಿದ್ದು ಗದಗಿನಲ್ಲಿ, ಅಲ್ಲಿ ಗ್ರಾಮಸೇವಕರಾಗಿದ್ದ ತನ್ನ ಸೋದರಮಾವ ವಸಂತರಾವ ಕುಲಕರ್ಣಿಯವರ ಮನೆಯಲ್ಲಿ, ೪ ಮಾರ್ಚ ೧೯೭೩ ರಂದು. ನಂತರ ಹುಟ್ಟಿದವಳು ಅನುರಾಧಾ, ಬೈಲಹೊಂಗಲದಲ್ಲಿ, ಅಜ್ಜ (ತಂದೆಯ ತಂದೆ), ಅಜ್ಜಿಯ ಮನೆಯಲ್ಲಿ, ೧೪ ಜುಲೈ ೧೯೭೪ ರಲ್ಲಿ. ಕಿರಿಯ ಮಗ ದೀಪಕರಾಜ ಹುಟ್ಟಿದ್ದು ಯರಗಟ್ಟಿ (ಬೆಳಗಾವಿ ಜಿಲ್ಲೆ) ಯಲ್ಲಿ, ಆಗ ತಂದೆ ಅಲ್ಲಿ ಕೆಲಸ ಮಾಡುತ್ತಿದ್ದರಿಂದ. ಅವನ ಜನ್ಮ ದಿನಾಂಕ – ೧೫ ಜನೆವರಿ ೧೯೭೬.