ವ್ಯಕ್ತಿ ಪರಿಚಯ
ಪಾಂಡುರಂಗಾಚಾರ್ಯ ಮತ್ತು ಇಂದಿರಾಬಾಯಿ ಇವರ ಏಳು ಮಕ್ಕಳಲ್ಲಿ ಕೊನೆಯವರು. ಎಲ್ಲರಿಗಿಂತ ಹಿರಿಯವಳು ಪ್ರಭಾವತಿ. ಕೊನೆಯಲ್ಲಿ ಹುಟ್ಟಿದವರು ಅನಂತ. ಈ ಚೊಚ್ಚಲು ಮತ್ತು ಕಡೆಯ ಸಂತಾನದ ನಡುವೆ ಇದ್ದ ಅಂತರ ಅವರು ಎಷ್ಟೆಂದರೆ, ಅನಂತ ಅವರು ೧೯೪೦ರಲ್ಲಿ ಹುಟ್ಟಿದಾಗ ಹಿರಿಯಕ್ಕ ಪ್ರಭಾವತಿ ಅವರ ಮದುವೆಯೂ ೧೯೩೮ ರಲ್ಲಿಯೆ ಆಗಿಹೋಗಿತ್ತು.
ಅನಂತ ಅವರು ಹುಟ್ಟಿದ ದಿನಾಂಕ ೧ ನವೆಂಬರ ೧೯೪೦ ರಂದು ಧಾರವಾಡದಲ್ಲಿ. ಆದರೆ ಶಾಲೆಯಲ್ಲಿ ದಾಖಲಾಗಿರುವ ಪ್ರಕಾರ ೧ ಜುಲೈ ೧೯೪೧. ಮುಂದೆ ಐದೇ ವರ್ಷಗಳ ನಂತರ ೧೯೪೫ ರಲ್ಲಿ ತಾಯಿ ತೀರಿಹೋದರು. ಪತ್ನಿಯ ನಿಧನಾನಂತರ ಪಾಂಡುರಂಗಾಚಾರ್ಯರು ಮತ್ತೊಂದು ಮದುವೆಯೇನೂ ಆಗಲಿಲ್ಲ. ಆದರೆ ಕೇವಲ ಐದು ವರ್ಷದ ಚಿಕ್ಕ ಬಾಲಕ ಅನಂತ ಅವರನ್ನು ಬೆಳೆಸಿ ದೊಡ್ಡವರನ್ನಾಗಿ ಮಾಡುವದು ಗೃಹಿಣಿಯೆ ಇಲ್ಲದ ಮನೆಯಲ್ಲಿ ಬಹಳ ಕಷ್ಟಸಾಧ್ಯದ ಮಾತಾಗಿತ್ತು. ಹೀಗಾಗಿ ಆ ಸಣ್ಣ ಹುಡುಗನನ್ನು ಧಾರವಾಡದಲ್ಲಿಯೆ ನುಚ್ಚಂಬಲಿ ಭಾವಿಯ ಹತ್ತಿರ ಇದ್ದ ಅಜ್ಜಿಯ ಮನೆಗೆ ಸಂರಕ್ಷಣೆಗಾಗಿ ಕಳಿಸಲಾಯಿತು.
ಇನ್ನು, ಅನಂತ ಅವರ ತಾಯಿ ಮತ್ತು ಅಜ್ಜಿಯ ಬಗ್ಗೆ : ತಾಯಿ ಇಂದಿರಾಬಾಯಿ. ಇದು ಅತ್ತೆ ಮನೆ ಹೆಸರು. ತೌರು ಮನೆಯಲ್ಲಿಟ್ಟ ಹೆಸರು ಚಂಪಾವತಿ. ಹೊರಗಿನವರೇನೂ ಅಲ್ಲ. ಪಾಂಡುರಂಗಾಚಾರ್ಯರ ಅಕ್ಕನ ಮಗಳು. ರಾಮದುರ್ಗದ ಕೃಷ್ಟಾಚಾರ್ಯ ತಾಳಿಕೋಟಿ ಮತ್ತು ರುಕ್ಮಿಣಿಬಾಯಿಯವರ ಮಗಳು. ರುಕ್ಮಿಣಿಬಾಯಿ ಇದು ಮದುವೆಯ ನಂತರ ಬಂದ ಹೆಸರು, ತೌರು ಮನೆಯಲ್ಲಿ ಕರೆಯುತ್ತಿದ್ದದ್ದು ಗುಂಡಕ್ಕ ಎಂದು. ಅ ಹೆಸರಿನಿಂದಲೆ ಜನ ಹೆಚ್ಚಾಗಿ ಗುರುತಿಸುತ್ತಿದ್ದರು. ಪತಿ ರಾಮದುರ್ಗದವರಾದರೂ ಧಾರವಾಡದಲ್ಲಿ ಲ್ಯಾಂಡ ರೆಕಾರ್ಡ ಸರ್ವೆಯರ ಆಗಿ ಸರಕಾರಿ ನೌಕರಿಯಲ್ಲಿದ್ದರು. ನುಚ್ಚಂಬಲಿ ಭಾವಿಯ ಹತ್ತಿರ ಮನೆ ಮಾಡಿದ್ದರು.
ಅಂತೂ ಇಂದಿರಾಬಾಯಿ ಹಡೆದ ತಾಯಿಯಾಗಿದ್ದರೂ ಬಾಲಕ ಅನಂತ ಅವರನ್ನು ಸಂರಕ್ಷಣೆ ಮಾಡಿ ಬೆಳೆಸಿದ್ದು₹, ತಾಯಿಯ ತಾಯಿ – ಅಜ್ಜಿ ರುಕ್ಮಿಣಿಬಾಯಿ (ಗುಂಡಕ್ಕ). ಈ ನುಚ್ಚಂಬಲಿ ಭಾವಿ ಸಮೀಪದ ನೆಲಕ್ಕೂ ಅನಂತ ಅವರಿಗೂ ಎಂತಹದೊ ಋಣಾನುಬಂಧ ಇದ್ದಿರಬೇಕು. ಮುಂಬಯಿ ಹತ್ತಿರದ ಅಂಬರನಾಥದಲ್ಲಿ ನಿವೃತ್ತಿಯಾದ ನಂತರ ಧಾರವಾಡಕ್ಕೆ ಮರಳಿ, ತಂದೆಯಿಂದ ಬಂದಿದ್ದ ನೇಕಾರ ಓಣಿಯಲ್ಲಿನ ಮನೆಯಲ್ಲಿ ಇರಹತ್ತಿದರೂ, ಕೆಲ ಕಾಲದ ನಂತರ ಆ ಹಳೆಯ ಮನೆಯನ್ನು ಬಿಚ್ಚಿ ಹೊಸದಾಗಿ ಕಟ್ಟಬೇಕಾಯಿತು. ಆಗ ಮತ್ತೆ ಇವರು ಹೋಗಿದ್ದು ಆ ನುಚ್ಚಂಬಲಿ ಭಾವಿಯ ಹತ್ತಿರದ ಬಾಡಿಗೆ ಮನೆಯೊಂದಕ್ಕೆ. ಅದು ಹೆಂಡತಿಯ ಸೋದರಿಯ ಮನೆ. ಅಲ್ಲಿ ಒಂದೂಕಾಲು ವರ್ಷ ಇದ್ದರು.
ಶಿಕ್ಷಣ: ಇವರ ಶಾಲಾ ಜೀವನ – ನಾಕನೆ ಇಯತ್ತೆಯ ವರೆಗೆ ಪ್ರಾಥಮಿಕ ಶಿಕ್ಷಣ ಧಾರವಾಡದಲ್ಲಿ, ನಂತರ ಮುನವಳ್ಳಿಯಲ್ಲಿ, ೧೦ನೆ ಇಯತ್ತೆಗೆ ಬೈಲಹೊಂಗಲದಲ್ಲಿ – ಹೀಗೆ ಮೂರು ಕಡೆ ನಡೆಯಿತು. S.S.L.C ಪರೀಕ್ಷೆ (ಆಗಿನ ೧೧ ನೆ ಇಯತ್ತೆಯ ಕೊನೆಯಲ್ಲಿ) ಪಾಸಾದದ್ದು ಬೈಲಹೊಂಗಲ ಕೆಂದ್ರದಿಂದ ೧೯೫೯ರ ಎಪ್ರಿಲಿನಲ್ಲಿ. ನಂತರ ಅಣ್ಣನ ಕಡೆಗೆ ಮಹಾರಾಷ್ಟ್ರದ ಮಿರಜಿಗೆ ಹೋದರು. ಅಲ್ಲಿ Typiing Course ಒಂದನ್ನು -ಅದು ಸರಕಾರಿ ಪರೀಕ್ಷೆಯಲ್ಲ- ಮಾಡಿದರು.
ವೃತ್ತಿ ಜೀವನ: ೧೯೬೧ರಲ್ಲಿ ಬೆಳಗಾವಿಯಲ್ಲಿ ಒಂದು ಹಂಗಾಮಿ ಕೆಲಸ ಸಿಕ್ಕು ಮಿರಜಿಯಿಂದ ಮರಳಿ ಕರ್ನಾಟಕಕ್ಕೆ ಬಂದರು. ಮರುವ₹ರ್ಷ೧೯೬೨ ರಲ್ಲಿ ಮತ್ತೊಂದು ಹಂಗಾಮಿ ಕೆಲಸ ಕೊಲ್ಲಾಪುರದಲ್ಲಿ ಸಿಕ್ಕು ಮತ್ತೆ ಮಹಾರಾಷ್ತ್ರಕ್ಕೆ ಹೋದರು. ಅದರ ಮರುವರ್ಷ ೧೯೬೩ರಲ್ಲಿ Telegraph Department ದಲ್ಲಿ ಕೆಲಸ ಸಿಕ್ಕು ಮುಂಬಯಿಗೆ ಹೋಗಿ ಗಿರಗಾಂವದ Lodgimg & Boarding ದಲ್ಲಿದ್ದುದು. ಆಗ Telecom (ಈಗಿನ B.S.N.L.) ಸೇರಿಕೊಂಡು Chief Telegraph Master (Group IV, Gazzetted Officer Grade) ಆಗಿ ಅಂಬರನಾಥದಲ್ಲಿದ್ದಾಗ ೨೦೦೧ ರ ಜುಲೈ ೧ ರಂದು ೬೦ನೆ ವಯಸ್ಸಿಗೆ ನಿವೃತ್ತಿ (Super Annuation) ಹೊಂದಿದರು.
ಮದುವೆ ಗೊತ್ತಾದ ಮೇಲೆ ೧೯೬೬ ರಲ್ಲಿ ಡೊಂಬಿವಲಿಯಲ್ಲಿ ಮನೆ ಮಾಡಿದರು. ಮುಂದಿನ ೩೧ ವರ್ಷ, ಆ ಡೊಂಬಿವಲಿಯೆ ಇವರ ಊರು ಆಯಿತು. ಅಲ್ಲಿಯೆ ಸಂಸಾರ, ಮಕ್ಕಳು ಅವರ ಶಿಕ್ಷಣ ಇತ್ಯಾದಿ ಆಯಿತು. ಹಿರಿಯ ಮಗ ಅಜಿತನಿಗೆ ಕೆಲಸವಾಗಿ ೧೯೯೭ರಲ್ಲಿ ಅಂಬರನಾಥದಲ್ಲಿ ಫ್ಲ್ಯಾಟ ತೆಗೆದುಕೊಂಡ ಮೇಲೆ ಮಗನ ಕಡೆಗೆ ಸ್ಥಳಾಂತರವಾದರು. ತಮ್ಮ ನಿವೃತ್ತಿಯ ನಂತರ ಹುಟ್ಟೂರು ಧಾರವಾಡಕ್ಕೆ ಮರಳಿ ಬಂದರು.
ಮದುವೆ: ಧಾರವಾಡದ ಶುಕ್ರವಾರ ಪೇಟೆಯ ವೆಂಕಟೇಶ ದೇವಾಲಯದ ಅರ್ಚಕ ಮನೆತನದ ಗುರಾಚಾರ್ಯ ಗುಡಿ ಮತ್ತು ಸೌ. ಸುಬ್ಬಕ್ಕ ಇವರ ಮಗಳು ಗೀತಾ ಅವರ ಜೊತೆ ೧೯೬೬ರಲ್ಲಿ ಮದುವೆಯಾಯಿತು. ಗೀತಾ ಅವರಿಗೆ ಅತ್ತೆಮನೆಯಲ್ಲಿಟ್ಟ ಹೆಸರು ಸುಧಾ. ಡೊಂಬಿವಲಿಯಲ್ಲಿ ಸಂಸಾರ ಹೂಡಿದರು. ಅಲ್ಲಿಯೆ ೩೧ ವರ್ಷಕಳೆದರು. ಮಕ್ಕಳಾದವು. ಮಗನಿಗೆ ಕೆಲಸವಾಗಿ ೧೯೯೭ರಲ್ಲಿ ಫ಼್ಲ್ಯಾಟ ತೆಗೆದುಕೊಂಡ ಮೇಲೆ ಅವನ ಹತ್ತಿರ ಅಂಬರನಾಥದಲ್ಲಿ ನಾಕು ವರ್ಷ ಇದ್ದು, ಮತ್ತೆ ಧಾರವಾಡಕ್ಕೆ ಮರಳಿದರು.
ಮಕ್ಕಳು: ಮೂರು ಜನ – ಒಂದು ಗಂಡು, ಎರಡು ಹೆಣ್ಣು : ೧. ಅಜಿತ ೨. ಭಾರತಿ ೩. ವೀಣಾ
೧. ಹಿರಿಯ ಮಗ ಅಜಿತ ಹುಟ್ಟಿದ್ದು ಧಾರವಾಡದಲ್ಲಿ ೨೬ ನವೆಂಬರ ೧೯೬೮ ಅರಂದು. ಶಿಕ್ಷಣ ೧೦ನೆ ಇಯತ್ತೆಯವರೆಗೆ ಡೊಂಬಿವಲಿಯಲ್ಲಿನ ಮಂಜುನಾಥ ವಿದ್ಯಾಲಯದಲ್ಲಿ. ನಂತರ Diploma in Mechanical Engineering (ಹಂಸಭಾವಿ – Bengaluru Board -) ಮಾಡಿದ ಮೇಲೆ Maintenance Manager, ಎಂದು FRANCO ದಲ್ಲಿ (a pharceutical company) ಕೆಲಸ ಸಿಕ್ಕು ಡೊಂಬಿವಲಿಯಲ್ಲಿ ಇದ್ದಾರೆ.
ಇವರ ಪತ್ನಿ ಅನುಪಮಾ. ಭಾರತ ರತ್ನ ಭೀಮಸೇನ ಜೋಶಿಯವರ ಪ್ರಸಿದ್ಧ ಶಿಷ್ಯ ಧಾರವಾಡದ ಮಾಧವ ಗುಡಿಯವರ ಪುತ್ರಿ. ಮದುವೆ ನಡೆದುದು ೧೯೯೬ರ ಮೇ ೧ ರಂದು. ತಂದೆಯಂತೆಯೆ ಅನುಪಮಾ ಅವರೂ ಸಂಗೀತ ಕ್ಷೇತ್ರದಲ್ಲಿ ಪಳಗಿದ್ದಾರೆ ಮತ್ತು ಅಲ್ಲಿ ತಮ್ಮ ಹೆಸರು ಮಾಡಿದ್ದಾರೆ. ತಮ್ಮ ಕಡೆಗೆ ಕಲಿಯಲು ಬಂದವರಿಗೆ ಸಂಗೀತ ಪಾಠವನ್ನು ಹೇಳಿಕೊಡುತ್ತಿದ್ದಾರೆ.
ಇವರಿಗೆ ಇಬ್ಬರು ಮಕ್ಕಳು – ೧. ಶ್ರೀನಿಕೇತನ (ಜನ್ಮ ೧೯೯೭, ಮೇ ೨೭ರಂದು, ಧಾರವಾಡದಲ್ಲಿ), ೨.ಕೃತಿ (ಜನ್ಮ ೨೦೦೫ ಮಾರ್ಚ ೧೭).
೨. ನಡುವಿನವಳು ಭಾರತಿ ಹುಟ್ಟಿದ್ದು ೧೯ ಮಾರ್ಚ ೧೯೭೦ ರಂದು, ಧಾರವಾಡದಲ್ಲಿ. ಮದುವೆ ೧೯೯೫ರ ಮೇ ತಿಂಗಳಲ್ಲಿ, ಧಾರವಾಡದ ಹತ್ತಿರ ಇರುವ ಮುಗದ ಊರಿನ ಸುಧೀಂದ್ರ ಅಷ್ಟಪುತ್ರೆ ಯವರ ಜೊತೆ. ೧೦ ಡಿಸೆಂಬರ ೧೯೬೭ ರಂದು ಹುಟ್ಟಿದ ಇವರು ಅನಂತ ಅವರಿಗೆ ಅಳಿಯನಾಗುವ ಮುಂಚೆ ತಮ್ಮ ಹಿರಿಯ ಅಕ್ಕ ಪ್ರಭಾವತಿಯವರ ಮೊಮ್ಮಗ ಎಂದು- ಮಗಳು ಪ್ರೇಮಾ ಅನಂತಾಚಾರ್ಯ ಅಷ್ಟಪುತ್ರೆಯವರ ಎರಡನೆ ಮಗ- ಸಂಬಂಧ ಇದ್ದೇ ಇದ್ದಿತು. ಸುಧೀಂದ್ರ ಅವರು M.Sc. (Agriculture) (Gold Medalist) ಅಗಿ ಪ್ರೊಫೆಸರ ಆಗಿದ್ದಾರೆ. ಧಾರವಾಡದಲ್ಲಿಯೆ ಗಾಳಿ ಓಣಿ, ಗಾಂಧಿನಗರೆದಲ್ಲಿ ಇದ್ದಾರೆ. ಇಬ್ಬರು ಮಕ್ಕಳು – ಮಧುಶ್ರೀ ಮತ್ತು ? .
೩. ಕೊನೆಯವಳು ವೀಣಾ ಹುಟ್ಟಿದ್ದು ೩೦ ನವೆಂಬರ ೧೯೭೧ ರಂದು, ಧಾರವಾಡದಲ್ಲಿ. ಮದುವೆಯಾಗಿತ್ತು. ಇತ್ತೀಚೆಗೆ ಧಾರವಾಡದಲ್ಲಿ ತೌರು ಮನೆಯಲ್ಲಿಯೆ ಇದ್ದಾಗ ತೀರಿಕೊಂಡರು.
ಅನಂತ (ಅನಂತಾಚಾರ್ಯ ಎಂದು ಹೇಳಿದರೂ ತಪ್ಪಿಲ್ಲ) ಮತ್ತು ಅವರ ಪತ್ನಿ ಸುಧಾಬಾಯಿ ಈಗ ನೇಕಾರ ಓಣಿಯಲ್ಲಿ ಪಿತ್ರಾರ್ಜಿತ ಮನೆಯಲ್ಲಿ ವಾಸವಾಗಿದ್ದಾರೆ. ೧೯೪೬(?)ರಲ್ಲಿ ಖರೀದಿಸಿದ್ದ ಆ ಮನೆ ಬಹಳ ಹಳೆಯದಾಗಿದ್ದರಿಂದ ೨೦೦೮ರಲ್ಲಿ ಬಿಚ್ಚಿಸಿ ಮೂರು ಪ್ರತ್ಯೇಕ ಮನೆಗಳನ್ನು ಒಂದೆ ಸಾಲಿನಲ್ಲಿ ಹೊಸದಾಗಿ ಕಟ್ಟಿಕೊಳ್ಳಲಾಯಿತು. ಗೃಹಪ್ರವೇಶ ನಡೆದದ್ದು ೨೦೦೯ರಲ್ಲಿ. ಇವರ ಮನೆ ಕೊನೆಯದು. ಮೊದಲಿನದರಲ್ಲಿ ಆಣ್ಣ ವೇದವ್ಯಾಸ ಅವರ ಮಗ ರಘುರಾಜ, ನಡುವಿನದರಲ್ಲಿ ಅಣ್ಣ ಮಾಧವಾಚಾರ್ಯರು ಇದ್ದಾರೆ. ಹೀಗೆ ಒಂದೇ ಸೂರಿನಡಿ ಮೂರು ಕುಟುಂಬಗಳು ಇವೆ. ಇವರಿರುವದು ಹೊಸ ಯಲ್ಲಾಪುರದಲ್ಲಿ. ಶುಕ್ರವಾರ ಪೇಟೆ ಮತ್ತು ಅಲ್ಲಿನ ವೆಂಕಟೇಶ ದೇವಸ್ಥಾನ ಸಮೀಪದಲ್ಲಿಯೆ ಇವೆ.
ಬರೆದವರು : ಶ್ರೀಕಾಂತ ರಂ. ಮಂಗಳವೇಢೆ ಮುಗಿದದ್ದು : ಗುರುವಾರ, ಮಾಘ ಕೃಷ್ಣ ಪಂಚಮಿ/ಷಷ್ಠಿ , ೧೬ ಫೆಬ್ರುವರಿ ೨೦೧೭, ಸಂಜೆ ೫.೨೦ ಗಂಟೆ. ಆಧಾರ : ನಾನು ಇನ್ನೂ ಬೆಳಗಾವಿಯಲ್ಲಿದ್ದಾಗ, ಧಾರವಾಡದಲ್ಲಿದ್ದ ಅನಂತ ಅವರ ಜೊತೆ ಬುಧವಾರ, ೧೨ ಮೇ ೨೦೧೦ರಂದು ಫೋನಿನಲ್ಲಿ ಮಾತನಾಡಿ ಬರೆದುಕೊಂಡಿದ್ದ ಮಾಹಿತಿ.