ಯಕ್ಕುಂಡಿಯ ಬಾಳಾಚಾರ್ಯರ ಪ್ರಪೌತ್ರ, ಬಂಡಾಚಾರ್ಯರ ಪೌತ್ರ, ಪಾಂಡುರಂಗಾಚಾರ್ಯರ ಪುತ್ರ ಧಾರವಾಡ ನಿವಾಸಿಯಾಗಿದ್ದವರು.
ವ್ಯಕ್ತಿ ಪರಿಚಯ
ಪಾಂಡುರಂಗಾಚಾರ್ಯರ ಏಳು ಮಕ್ಕಳಲ್ಲಿ ವೇದವ್ಯಾಸ ಅವರು ಮೂರನೆಯವರು. ಇವರಿಗಿಂತ ಮೊದಲು ಹುಟ್ಟಿದವರು – ಪ್ರಭಾವತಿ ಮತ್ತು ವಾಸುದೇವಾಚಾರ್ಯ ಅವರು. ೧೯೨೯ರಲ್ಲಿ ಧಾರವಾಡದಲ್ಲಿ ವೇದವ್ಯಾಸ ಅವರ ಜನ್ಮವಾಯಿತು. ಇವರ ನಂತರ ಹುಟ್ಟಿದವರು ವಿಜಯಾವತಿ, ಮಾಧವಾಚಾರ್ಯ (೧೯೩೨), ವೆಂಕಟೇಶ ಮತ್ತು ಅನಂತ (೧೯೪೦).
ಎಸ್.ಎಸ್. ಸಿ ಆಗಿದ್ದ ವೇದವ್ಯಾಸ ಅವರಿಗೆ ವೈದ್ಯಕೀಯ ವೃತ್ತಿಯ ಒಲವಿದ್ದಿತೇನೋ, ತಕ್ಕ ಮಟ್ಟಿಗೆ ಅದರಲ್ಲಿ ಶಿಕ್ಷಣ ಪಡೆದಿದ್ದ ಅವರು ಹುಬ್ಬಳ್ಳಿ ನಗರಪಾಲಿಕೆಯ ಹೋಮಿಯೋಪತಿ ಆಸ್ಪತ್ರೆಯಲ್ಲಿ ಕಂಪೌಂಡರ ಎಂದು ಕೆಲಸವಾಯಿತು. ೧೯೮೪ರಲ್ಲಿ ಆ ಸೇವೆಯಿಂದ ನಿವೃತ್ತಿಯಾಯಿತು. ಆಸ್ಪತ್ರೆಯಲ್ಲಿ ಸಿಕ್ಕಿದ್ದ ಅನುಭವ ಆನಂತರ R.M.P ( Registered Medical Practitioner) ಎಂದು ಅವರಿಗೆ ಸ್ವತಂತ್ರವಾಗಿ ವೈದ್ಯಕೀಯ ವ್ಯವಸಾಯ ಮಾಡಲು ಅನುಕೂಲವಾಯಿತು. ಮಂಗಳವಾರ ಪೇಟೆ ಯಲ್ಲಿ ಜಾನಕ್ಕಿ ಅವರ ಔಷಧದ ಅಂಗಡಿಯ ಎದುರಿಗೆ ತಮ್ಮ ದವಾಖಾನೆಯನ್ನು ತೆರೆದರು. ೧೯೬೨ ರ ಮೊದಲೂ, ನೌಕರಿ ಸೇರುವ ಮುನ್ನವೂ ಕೆಲ ಕಾಲ ಹೀಗೆ R.M.P. ಎಂದು ಖಾಸಗಿಯಾಗಿ ಪ್ರ್ಯಾಕ್ಟೀಸು ಮಾಡಿದ್ದ ಅನುಭವವೂ ಇದ್ದಿತು.
ಪೆನ್ಶನ್ ಕಾಲಕ್ಕೆ ತೆಗೆದ ಫೋಟೊ (೧೯೮೪)
ವಿವಾಹ: ಮುನವಳ್ಳಿಯ ಗಂಗಾಧರಭಟ್ಟ ಜೋಶಿ ಎಂಬುವರ ಮಗಳ ಜೊತೆ ಮದುವೆ ಆಯಿತು. ಇವರ ತೌರುಮನೆಯಹೊಲ ಮನೆ ಗೋರೆಬಾಳದಲ್ಲಿದ್ದವು. ಮನೆತುಂಬಿದ ವಧುವಿಗೆ ಲಕ್ಷ್ಮೀಬಾಯಿ ಎಂದು ಅತ್ತೆಮನೆಯಲ್ಲಿ ಹೆಸರು ಆಯಿತು.
ಮುಂದೆ ಈ ದಂಪತಿಗಳಿಗೆ ನಂದಾ (೧೯೫೨), ರಘುರಾಜ (೧೯೬೨), ಚಂಪಾ (೧೯೬೫) ಮತ್ತು ವಿದ್ಯಾವತಿ (೧೯೬೮) ಎಂದು- ಮೂರು ಹೆಣ್ಣು ಮತ್ತು ಒಂದು ಗಂಡು, ಹೀಗೆ ನಾಕು ಮಕ್ಕಳಾದವು.
ಇವರಲ್ಲಿ ಹಿರಿಯ ಮಗಳು ನಂದಾ ಅವರ ಮದುವೆ ೧೯೭೮ ರಲ್ಲಿ ಧಾರವಾಡದಲ್ಲಿ ಆಯಿತು. ಮದುವೆಯಾದಮೇಲೆ ಹೆಸರು ಸೌ.ರಾಧಾ ಎಂದಾಯಿತು. ಪತಿ ಕೃಷ್ಣ ಬಿಂದಾಚಾರ್ಯ ಹುನಗುಂದ, ಪದವಿಧರರು. ಹುಬ್ಬಳ್ಳಿಯಲ್ಲಿ ಸುಂದತ್ತಾ ಫುಡ್ ಆಂಡ ಫಾಯ್ಬರ ದಲ್ಲಿ ಕ್ಯಾಶಿಯರ ಆಗಿ ೧೯ ವರ್ಷ ಅಲ್ಲಿ ಸೇವೆ ಸಲ್ಲಿಸಿದರು. ಕಾರಣಾಂತರಗಳಿಂದ ಕಂಪನಿ ನಿಂತು ಹೋಯಿತು. ಆಮೆಲೆ ಪದ್ಮಾ ಟಾಕೀಸಿನ ಎದುರಿಗೆ ಇದ್ದ ಸಹಕಾರಿ ಆಸ್ಪತ್ರೆಯೊಂದರಲ್ಲಿ ೧೪ ವರ್ಷ ಕೆಲಸ ಮಾಡಿದರು ಈಗ ಸುಶ್ರುತಾ ಆಸ್ಪತ್ರೆಯಲ್ಲಿ ಕೆಲಸದಲ್ಲಿದ್ದಾರೆ. ನಂದಾ ಅವರು T.C.H. ಆಗಿದ್ದು ಮದುವೆಯ ನಂತರ ಅವರಿಗೂ ಹುಬ್ಬಳ್ಳಿಯಲ್ಲಿಯೆ ದುರ್ಗಾದೇವಿ ಇಂಗ್ಲಿಶ ಸ್ಕೂಲಿನಲ್ಲಿ ಶಿಕ್ಷಿಕೆಯ ಕೆಲಸ ಸಿಕ್ಕಿತು. ಈಗ ನಿವೃತ್ತಿಗೆ ಸಮೀಪದಲ್ಲಿದ್ದಾರೆ. ಇವರ ಏಕಮಾತ್ರ ಪುತ್ರಿ ಗಾಯತ್ರಿ ಗುರುರಾಜ ಶಿರೋಳ ಎಂಬುವರ ಪತ್ನಿ. ಅವರಿಗೆ ನೆಸ್ಲೆ ಕಂಪನಿಯಲ್ಲಿ ಕೆಲಸ. ಅಹಮದಾಬಾದದಲ್ಲಿ ಇದ್ದಾರೆ.
ಎರಡನೆಯ ಮತ್ತು ಏಕ ಮಾತ್ರ ಪುತ್ರ ರಘುರಾಜ B.Com. ೧೯೯೬ರಿಂದ ೨೦೦೮ರ ವರೆಗೆ ೧೨ ವರ್ಷ ಲಕಮನಹಳ್ಳಿಯ ಔದ್ಯಮಿಕ ಕ್ಷೇತ್ರದಲ್ಲಿದ್ದ ಕ್ರೀಸೆಂಟ ಇಂಜಿನೀಯರಿಂಗ ಇಂಡಸ್ಟ್ರೀಸ ದಲ್ಲ್ ಕೆಲಸ ಮಾಡಿ, ನಂತರ ಈಗ L.I.C. ಮತ್ತು Postal Agency ಪಡೆದು ಸ್ವತಂತ್ರವಾಗಿ ಕೆಲಸದಲ್ಲಿದ್ದಾರೆ. ಮದುವೆ ರಘುನಾಥ ಕೊಪ್ಪ ಎಂಬುವರ ಮಗಳು ಪುಷ್ಪಾ (ನಂತರ ಸೌ.ರೋಹಿಣಿ) ಅವರೊಡನೆ ಧಾರವಾಡದಲ್ಲಿ ೧೯೯೯ರಲ್ಲಿ ನಡೆಯಿತು. ಸೌ.ರೋಹಿಣಿಯವರು ಮನೆಯಲ್ಲಿಯೆ ಇದ್ದುಕೊಂಡು ತಾವೂ ಪೋಸ್ಟಲ ಏಜನ್ಸಿ ನೋಡಿಕೊಳ್ಳುತ್ತಿದ್ದಾರೆ. ಅವರಿಗೆ ಎರಡು ಮಕ್ಕಳು – ವೇದವ್ಯಾಸ ಮತ್ತು ಗಿರೀಶ – ಹುಟ್ಟಿದ್ದಾರೆ.
ಮೂರನೆಯವರು ಚಂಪಾ. ಇವರನ್ನು ಕಿತ್ತೂರಿನ ಕೃಷ್ಟಾಚಾರ್ಯ ಮಠದ ಅವರ ಮಗ ಗೋಪಾಲಅವರಿಗೆ ಕೊಟ್ಟಿದೆ. ಮದುವೆಯ ನಂತರ ಚಂಪಾ ಅವರು ಸೌ.ಸರಳಾ ಅಗಿದ್ದಾರೆ. ಪತಿಗೆ ಅಂಚೆ ಇಲಾಖೆಯಲ್ಲಿ ಕೆಲಸ. ಮನೆ ಗುರುವಾರ ಪೇಟೆಯಲ್ಲಿ ಇದೆ. ಇವರಿಗೂ ಇಬ್ಬರು ಮಕ್ಕಳು -ವಾಣಿ ಮತ್ತು ಪವನ.
ನಾಕನೆಯವರು ವಿದ್ಯಾವತಿ, ದಾವಣಗೆರೆಯ ಸುಧೀಂದ್ರ ಶ್ರೀನಿವಾಸಾಚಾರ್ಯ ಯಜುರ್ವೇದಿಯವರ ಪತ್ನಿ. ಅತ್ತೆ ಮನೆ ಹೆಸರು ಸುಜಾತಾ. ಸುಧೀಂದ್ರ ಅಅರು ವೈದಿಕಿ ವೃತ್ತಿಯಲ್ಲಿ ದ್ದಾರೆ. ಇವರಿಗೂ ಇಬ್ಬರು ಮಕ್ಕಳು- ಸಹನಾ ಮತ್ತು ಶ್ರೀಕರ.
ಅಸ್ಥಮಾ ಪೀಡಿತರಾಗಿದ್ದ ವೇದವ್ಯಾಸ ಅವರು ತಮ್ಮ ೫೬ನೆ ವಯಸ್ಸಿನಲ್ಲಿ ಧಾರವಾಡದಲ್ಲಿ ತೀರಿಕೊಂಡರು. ಪತ್ನಿ ಲಕ್ಷ್ಮೀಬಾಯಿಗೆಈಗ ೮೦ ವರ್ಷಗಳು ದಾಟಿ ಹೋಗಿವೆ. ಮಗ ರಘುರಾಜ ಅವರ ಹತ್ತಿರ ಧಾರವಾಡದಲ್ಲಿ ಇದ್ದಾರೆ.
ತಮ್ಮ ಜೀವಿತದಲ್ಲಿ ವೇದವ್ಯಾಸ ಅವರಿಗೆ ಯಾತ್ರೆ ಪ್ರವಾಸಗಳನ್ನು ಮಾಡಲು ಅನುಕೂಲವಿರಲಿಲ್ಲ. ರಘುರಾಜ ಇನ್ನೂ ಹತ್ತು ತಿಂಗಳ ಮಗುವಿದ್ದಾಗ ಒಮ್ಮೆ ಕುಲದೇವರು ಪಾಂಡುರಂಗನ ಕ್ಷೇತ್ರ ಪಂಢರಪುರಕ್ಕೆ ಹೋಗಲು ಸಾಧ್ಯವಾಗಿತ್ತು.
ಬರೆದವರು : ಶ್ರೀಕಾಂತ ರಂ. ಮಂಗಳವೇಢೆ ಮುಗಿದುದು : ಪುಣೆ ಮುಕ್ಕಾಮಿನಲ್ಲಿ, ಮಂಗಳವಾರ, ಮಾಘ ಕೃಷ್ಣ ಚತುರ್ಥಿ, ೧೪ ಫೆಬ್ರುವರಿ ೨೦೧೭ ರಾತ್ರಿ ೧೦.೪೫ ಗಂಟೆ. ಆಧಾರ : ವೇದವ್ಯಾಸ ಅವರ ಪುತ್ರ ರಘುರಾಜರಿಂದ ಕೇಳಿ ಮಾಹಿತಿ ಪಡೆದದ್ದು.