ವ್ಯಕ್ತಿ ಪರಿಚಯ
ನಂದಾ ಅವರ ಹುಟ್ಟಿದ ದಿನಾಂಕ ಗೋರೆಬಾಳದ (ಸೌದತ್ತಿ ತಾಲೂಕು) ಶಾಲೆಯಲ್ಲಿ ೧೫-೭-೧೯೫೮ ಎಂದು ತಪ್ಪಾಗಿ ದಾಖಲಾಗಿ ಒಂದು. ವರ್ಷ ದೊಡ್ದವಳಾಗಿ ತೋರಿಸಲ್ಪಟ್ಟಿದ್ದಾರೆ. ಅದು ನಿಜವಾಗಿಯೂ ೭-೨-೧೯೫೯ ಎಂದು ಅವರ ಸಹೋದರ ರಘುರಾಜ ಅವರ ಹೇಳಿಕೆಯಿಂದ ಅವರ ಪರಿಚಯ ಪ್ರಾರಂಭಿಸ ಬೇಕಾಗಿದೆ.
ಶಿಕ್ಷಣ: ಮಾಧ್ಯಮಿಕ ಶಿಕ್ಷಣ ಧಾರವಾಡದಲ್ಲಿ ಅರ್.ಎಸ್.ಎಸ್. ದವರ ಖಾಜಿ ಓಣಿಯಲ್ಲಿನ ಶಾಲೆಯಲ್ಲಿ ಆಗಿ ಅಲ್ಲಿಂದ ಎಸ್.ಎಸ್.ಎಲ್.ಸಿ ಆದರು. ನಂತರ ವನಿತಾ ಸೇವಾ ಸಮಾಜದ ಟ್ರೇನಿಂಗ ಕಾಲೇಜಿನಲ್ಲಿ ಕಲಿತು ಟಿ.ಸಿ.ಎಚ (T.C.H.) ಆದರು.
ವೃತ್ತಿ ಜೀವನ: ವಿವಾಹವಾದ ಮೇಲೆ, ಹುಬ್ಬಳ್ಳಿಯಲ್ಲಿ ದುರ್ಗಾದೇವಿ ಇಂಗ್ಲಿಶ್ ಸ್ಕೂಲಿನಲ್ಲಿ ಶಿಕ್ಷಿಕೆಯೆಂದು ನೇಮಣೂಕಿ ಆಗಿ ವೃತ್ತಿ ಜೀವನದಲ್ಲಿ ಪದಾರ್ಪಣೆಯಾಯಿತು. ನಿವೃತ್ತಿಗೆ ಸಮೀಪಿಸಿದ್ದಾರೆ.
ವಿವಾಹ: ಹುನಗುಂದದ ಕೇಶವ ದೇವರ ಗುಡಿಯ ಅರ್ಚಕರಾದ ಬಿಂದಾಚಾರ್ಯ ಹುನಗುಂದ ಅವರ ಪುತ್ರ ಕೃಷ್ಣ ಅವರೊಂದಿಗೆ ನಂದಾ ಅವರ ವಿವಾಹ ಧಾರವಾಡದಲ್ಲಿ ೧೯೭೮ ರಲ್ಲಿ ಆಯಿತು. ೧೯೫೦ರ ಎಪ್ರಿಲ್ ೧ ರಂದು ಹುಟ್ಟಿದ ಕೃಷ್ಣ ಅವರು ಪದವಿಧರರು. ಹುಬ್ಬಳ್ಳಿಯಲ್ಲಿಯೆ ಖಾಸಗಿ ಕೆಲಸವನ್ನು ಒಪ್ಪಿಕೊಂದು ಸುಂದತ್ತಾ ಫುಡ ಆಂಡ ಫಾಯ್ಬರ ದಲ್ಲಿ ಕ್ಯಾಶಿಯರ ಆಗಿ ೧೯ ವರ್ಷ ಇದ್ದರು. ಕಂಪನಿ ನಿಂತು ಹೋದ ಮೇಲೆ ಅಲ್ಲಿಯೆ ಕೋಆಪರೇಟಿವ ಹಾಸ್ಪಿಟಲ್ಲಿನಲ್ಲಿ ಕೆಲಸವಾಗಿ ೧೪ ವರ್ಷ ಅಲ್ಲಿ ಇದ್ದರು. ಈಗ ಸುಶ್ರುತಾ ಆಸ್ಪತ್ರೆಯಲ್ಲಿ ಕೆಲಸದಲ್ಲಿದ್ದಾರೆ.
ಮಕ್ಕಳು: ಇವರಿಗೆ ಒಬ್ಬಳೆ ಮಗಳು ಗಾಯತ್ರಿ. ಹುಟ್ಟಿದ್ದು ೧೭ ಡಿಸೆಂಬರ ೧೯೮೦ ರಂದು. B.Com. ಮಾಡಿಕೊಂಡಿದ್ದಾರೆ. ಮದುವೆಯಾಗಿ ಗೃಹಿಣಿಯಾಗಿದ್ದಾರೆ. ಗುರುರಾಜ ಶಿರೋಳ (ಹುಟ್ಟಿದ ತಾರೀಖು ೩೧-೧೦-೧೯೭೩) ಎಂಬುವರ ಪತ್ನಿ. ಅವರು ಗೋವಾ, ಮೈಸೂರುಗಳಲ್ಲಿ ಉದ್ಯೋಗದಲ್ಲಿದ್ದು, ಈಗ ನೆಸ್ಲೆ ಕಂಪನಿಯಲ್ಲಿ ಅಹಮದಾಬಾದದಲ್ಲಿ ಇದ್ದಾರೆ.
ಗಾಯತ್ರಿಯವರಿಗೂ ಇಬ್ಬರು ಮಕ್ಕಳು ಹುಟ್ಟಿ ನಂದಾ (ಸೌ. ರಾಧಾ) – ಕೃಷ್ಣ ಈ ದಂಪತಿಗಳು ಮೊಮ್ಮಕ್ಕಳನ್ನೂ ಪಡೆದಿದ್ದಾರೆ. ಹಿರಿಯವಳು ಸುನಿಧಿ, ಹುಬ್ಬಳ್ಳಿಯಲ್ಲಿ ೨೯-೯-೨೦೦೫ ರಂದು ಹುಟ್ಟಿದವಳು. ಎರಡನೆಯವ ಶುಭಾಂಗ. ಹುಟ್ಟಿದ್ದು ೫-೫-೨೦೧೦ ರಂದು, ಹುಬ್ಬಳ್ಳಿಯಲ್ಲಿ.
ಬರೆದವರು ಶ್ರೀಕಾಂತ ರಂ. ಮಂಗಳವೇಢೆ ಮುಗಿದುದು . ಮಂಗಳವಾರ, ಮಾಘ ಕೃಷ್ಣ ಚತುರ್ಥಿ, ೧೪- ಫೆಬ್ರುವರಿ ೨೦೧೭ ಬೆಳಿಗ್ಗೆ ೬.೫೦ ಗಂ. ಆಧಾರ : ನಂದಾ ಅವರ ತಮ್ಮ ರಘುರಾಜ ಅವರಿಂದ ಕೇಳಿ ತಿಳಿದುಕೊಂಡಿದ್ದು.