ವ್ಯಕ್ತಿ ಪರಿಚಯ
ಈ ಕಾಲದಲ್ಲಿಯೂ ಚಹಾ ಕುಡಿಯುವ ಅಭ್ಯಾಸಕೂಡ ಇಲ್ಲದಿರುವ ವಿಶೇಷ ವ್ಯಕ್ತಿತ್ವ ಹೊಂದಿರುವ ವ್ಯಕ್ತಿ ಶ್ರೀ ಸುಧೀರ ಅವರು. ಜೊತೆಗೇ ಸಂಗೀತ ಕೇಳಿ ಸುಖಿಸುವ ರಸಿಕ ಕಿವಿಗಳು ಇವೆ. ಹಾರ್ಮೋನಿಯಮ ಮೇಲೆ ಕೈಯಾಡಿಸಿ ಮಧುರ ಸ್ವರ – ರಾಗಗಳನ್ನು ನುಡಿಸಬಲ್ಲರು . ಮಿರಜ ಸಂಗೀತದ ಕ್ಷೇತ್ರವೇ ಅಲ್ಲವೆ! ಅಲ್ಲಿಯೆ ಸ್ವಲ್ಪ ಸಂಗೀತ ಶಿಕ್ಷಣವೂ ಆಗಿದೆ, ಡೊಂಬಿವಲಿಯಲ್ಲಿದ್ದಾಗಲೂ ಆಗಾಗ ಮಿರಜಿಗೆ ಹೋಗು ಇರುವ ಆಸೆ ಕಾಡ ತೊಡಗುತ್ತದೆ. ಅಲ್ಲಿರುವ ಸಂಗೀತದ ವಾತಾವರಣ ಅದಕ್ಕೆ ಕಾರಣ. ಕಾದು ನೋಡಬೇಕು ಏನಾಗುತ್ತದೋ ಎಂದು.
ರೇಲ್ವೆಯಲ್ಲಿ ಸ್ಟೇಶನ ಮಾಸ್ಟರ ಆಗಿ ಕೆಲಸ ಮಾಡುತ್ತಿದ್ದ ಆದರೆ ಅತ್ಯಂತ ಸಂಪ್ರದಾಯರೂಢ ಆಗಿದ್ದ ವಾಸುದೇವಾಚಾರ್ಯ ಮತ್ತು ಕೃಷ್ಣಾಬಾಯಿ ದಂಪತಿಗಳ ಐದು ಮಕ್ಕಳಲ್ಲಿ – ಒಂದು ಗಂಡು ಮತ್ತು ನಾಲ್ಕು ಹೆಣ್ಣು – ಹಿರಿಯಯವನಾಗಿ ಹುಟ್ಟಿದವರು. ಜನ್ಮ ದಿನಾಂಕ ೨೬ ನವೆಂಬರ ೧೯೫೪ – ಮಾರ್ಗಶೀರ್ಷ ಶುದ್ಧ ಪ್ರತಿಪದೆಯ ದಿನ.ಅವರದು ಅನುರಾಧಾ ನಕ್ಷತ್ರ ೨ನೆ ಚರಣ, ವೃಶ್ಚಿಕ ರಾಶಿ. (ಆದರೆ ದಾಖಲೆಗಳಲ್ಲಿ ೨೨ ಮೇ ೧೯೫೪ ಎಂದು ನಮೂದಾಗಿದೆ).
ನೌಕರಿಯಿಂದಾಗಿ ತಂದೆ ಆಗೀಗ ಒಂದರಿಂದ ಇನ್ನೊಂದು ಸ್ಥಳಕ್ಕೆ ವರ್ಗಾವಣೆಯಾಗಿ ಬೇರೆ ಬೇರೆ ಊರುಗಳಿಗೆ ಹೋಗಬೇಕಾದ ಅನಿವಾರ್ಯ ಸ್ಥಿತಿ. ಆದರೆ ಮಕ್ಕಳ ಶಿಕ್ಷಣಕ್ಕೆ ತೊಂದರೆಯಾಗುವದು ಬೇಡವೆಂದು ಮಹಾರಾಷ್ಟ್ರದ ಮಿರಜಿಯಲ್ಲಿಯೆ ಮನೆಯೊಂದನ್ನು ಖರೀದಿಸಿ ಕುಟುಂಬವನ್ನು ಅಲ್ಲಿಯೆ ನೆಲೆಸುವಂತೆ ವ್ಯವಸ್ಥೆ ಮಾಡಿದ್ದರು.
ಬರೀ ಶಾಲಾ ಶಿಕ್ಷಣದಿಂದ ಮನೆತನದ ಧರ್ಮ- ಸಂಪ್ರದಾಯ, ವೈದಿಕ ಸಂಪ್ರದಾಯಗಳ ಅರ್ಥವಾಗಲು ಸಾಕಾಗದು ಎಂಬುದನ್ನು ಅವರು ಚೆನ್ನಾಗಿ ತಿಳಿದಿದ್ದರು. ಅಂತೆಯೆ ತಮ್ಮ ಮಗ ಸುಧೀರನಿಗೆ ಚಿಕ್ಕವನಿರುವಾಗಲೆ ಶಬ್ದರೂಪಾವಳಿ, ಧಾತು ರೂಪಾವಳಿ ಮೊದಲಾಗಿ ಸಂಸ್ಕೃತ ಭಾಷೆಯ ತಿಳಿವಳಿಕೆ ಮಾಡಿಕೊಟ್ಟಿದ್ದರು. ಹಾಗೆಯೆ ಭಗವದ್ಗೀತೆ, ವಿಷ್ಣು ಸಹಸ್ರನಾಮ, ವಾಯುಸ್ತುತಿ, ದ್ವಾದಶ ಸ್ತೋತ್ರಗಳನ್ನೂ ಹೇಳಿಕೊಟ್ಟಿದ್ದರು.
ಸುಧೀರ ಅವರ ಪ್ರಾಥಮಿಕ ಶಿಕ್ಷಣ ಅಲ್ಲಿಯೆ ಭಾರತ ಭೂಷಣ ವಿದ್ಯಾಲಯದಲ್ಲಿ, ಮಾಧ್ಯಮಿಕ ಶಿಕ್ಷಣ ಮಿರಜ ಹಾಯಸ್ಕೂಲಿನಲ್ಲಿ (ಎಸ್.ಎಸ್.ಸಿ – ೧೯೭೦) ಮರಾಠಿ ಮಾಧ್ಯಮದಲ್ಲಿ ಆಯಿತು. ನಂತರದ ಪದವಿ ಶಿಕ್ಷಣ ತಮ್ಮ ಊರಿನ ಪಕ್ಕದ ಊರಾದ ಸಾಂಗಲಿಯಲ್ಲಿನ ಪ್ರಸಿದ್ಧ ವಿಲಿಂಗ್ಡನ ಕಾಲೇಜಿನಲ್ಲಿ ನಡೆದು ೧೯೭೪ ರಲ್ಲಿ ಬಿ.ಎಸ್.ಸಿ (B.Sc.) ಪದವಿ ಪಡೆದರು.
ಆದರೆ, ಮರಾಠಿ ಮಾಧ್ಯಮದಲ್ಲಿ ಕಲಿತದ್ದಕ್ಕೆ ಸುಧೀರ ಅವರಿಗೆ ಕನ್ನಡ ಅಪರಿಚಿತವೆಂದು ತಿಳಿದರೆ ತಪ್ಪಾದೀತು. ಈಗಲೂ ಅವರ ಮನೆ ಮಾತು ಕನ್ನಡವೆ ಆಗಿದೆ. ಆದರೆ ಇಷ್ಟೇ! ಅದರಲ್ಲಿ ಬರೆದುದನ್ನು ಓದಲು ಬರುವದಿಲ್ಲ.
ವೃತ್ತಿ ಜೀವನ: ಸ್ಟೇಟ ಬ್ಯಾಂಕ ಆಫ಼್ ಇಂಡಿಯಾದಲ್ಲಿ ಕೆಲಸ ಸಿಕ್ಕು ಕೃಷ್ಣಾ ತೀರದ ಪ್ರಸಿದ್ದ ಕ್ಷೇತ್ರ ವಾಯಿ ಶಾಖೆಯಲ್ಲಿ ೧೯೭೭ ಅಕ್ಟೋಬರ ೧೩ ರಂದು ವೃತ್ತಿ ಜೀವನದ ಪ್ರಾರಂಭ ಆಯಿತು. ಕಾಲಕ್ರಮದಲ್ಲಿ ವರ್ಗಾವಣೆ ಆಗುತ್ತ ಮಿರಜ, ಸಾಂಗಲಿ, ಉದಗೀರ ಮತ್ತು ಮುಂಬಯಿಗಳಲ್ಲಿ ಬೇರೆ ಬೇರೆ ಹುದ್ದೆಗಳನ್ನು, ಪದೋನ್ನತಿಯನ್ನು ವಹಿಸಿ ಕೆಲಸ ಮಾಡಿದರು. ೨೦೧೪ ರ ಮೇ ತಿಂಗಳಲ್ಲಿ ನಿವೃತ್ತಿ ಹೊಂದಿದಾಗ ಮುಂಬಯಿಯ ಚರ್ನಿ ರೋಡ ಮೇಲಿದ್ದ ಆಪೇರಾ ಹೌಸ ಶಾಖೆಯ ಪಿ.ಬಿ.ಒ ವಿಭಾಗದಲ್ಲಿ ಮ್ಯಾನೇಜರ ಆಗಿ ಇದ್ದರು.
ವಿವಾಹ: ಆಗ ಬ್ಯಾಂಕ ಆಫ ಇಂಡಿಯಾದ ಚಿಕ್ಕೋಡಿ ಶಾಖೆಯಲ್ಲಿ ಮ್ಯಾನೇಜರ ಆಗಿದ್ದ ಶ್ರೀ ವಸಂತರಾವ ಹನುಮಂತರಾವ ಕುಲಕರ್ಣಿ ಮತ್ತು ಶ್ರೀಮತಿ.ಸುಶೀಲಾ ಅವರ ದ್ವಿತೀಯ ಕನ್ಯೆ ಶೋಭಾ ಅವರೊಂದಿಗೆ ಬೆಳಗಾವಿಯಲ್ಲಿ ಜನೆವರಿ ೭, ೧೯೮೩ ರಲ್ಲಿ ಮದುವೆ ಆಯಿತು. ಆಗ ಸುಧೀರ ಅವರಿಗೆ ೨೯ ವರ್ಷ ವಯಸ್ಸು. ಮದುವೆಯಾಗಿ ಅತ್ತೆಮನೆಗೆ ಬಂದಾಗ ಶೋಭಾ ಅವರ ಹೆಸರು ಸೌ.ರಮಾ ಎಂದಾಯಿತು.
ಸುಧೀರ ಮತ್ತು ರಮಾ ಅವರ ಮದುವೆಯಲ್ಲಿ ತೆಗೆದ ಫೊಟೊ (೭-೧-೧೯೮೩) ಕುಳಿತವರು (ಎಡದಿಂದ ಬಲಕ್ಕೆ): ಇಂದಿರಾಬಾಯಿ ಬಾಗಲಕೋಟೆ (ಸುಧೀರ ಅವರ ತಾಯಿಯ ತಾಯಿ), ರಮಾ (ವಧು), ಕೃಷ್ಣಾಬಾಯಿ (ತಾಯಿ), ವಾಸುದೇವಾಚಾರ್ಯ (ತಂದೆ), ಸುಧೀರ (ವರ), ನರಹರ ಬಾಗಲಕೋಟೆ (ಸುಧೀರ ಅವರ ತಾಯಿಯ ತಂದೆ)
ಅವರು ಕಾಮರ್ಸ ಪದವಿಧರೆ (B.Com.). ಅವರ ಪ್ರಾಥಮಿಕ ಮತ್ತು ಮಾಧ್ಯಮಿಕ ಶಿಕ್ಷಣ ಬೀದರ, ಬೆಳಗಾವಿ, ಹುಬ್ಬಳ್ಳಿಗಳಲ್ಲಿ ನಡೆದು ನಂತರ ಪದವಿ ಶಿಕ್ಷಣ ಗೋಗಟೆ ಕಾಲೇಜ ಆಫ ಕಾಮರ್ಸ, ಬೆಳಗಾವಿಯಲ್ಲಿ ಆಯಿತು. ಸೌ.ರಮಾ ಅವರು ಮಾಧ್ಯಮಿಕ ಶಾಲಾ ಶಿಕ್ಷಿಕೆಯಾಗಿಯೂ ಮಿರಜಿಯಲ್ಲಿ (ಒಂದು ವರ್ಷ), ಅಂಧೇರಿ – ಮುಂಬಯಿಯಲ್ಲಿ (ಮೂರು ವರ್ಷ) ಮತ್ತು ಡೊಂಬಿವಲಿಯಲ್ಲಿ (ಎರಡು ವರ್ಷ) ಹೀಗೆ ವೃತ್ತಿ ಜೀವನದಲ್ಲಿ ನಿರತರಾಗಿದ್ದರು.
ಇನ್ನು ಅವರ ತಂದೆ ಶ್ರೀ ವಸಂತರಾವ ಕುಲಕರ್ಣಿಯವರ ಬಗೆಗೆ ಇನ್ನಷ್ಟು ಹೇಳಬೇಕೆಂದರೆ ಅವರಿಗೆ ಐದು ಮಕ್ಕಳು – ನಾಲ್ಕು ಹೆಣ್ಣು ಮತ್ತು ಕೊನೆಯವ ಗಂಡು. ೧) ಭಾರತಿ ೨) ಶೋಭಾ ೩) ಶ್ರೀದೇವಿ ೪) ಅರುಣಾ ೫) ಗುರುರಾಜ. ತಮ್ಮ ಸೇವಾ ನಿವೃತ್ತಿಯ ನಂತರ ಶ್ರೀ. ವಸಂತರಾವ ಅವರು ಸೇಫ್ಟಿ ಆಡಿಟರ (Safty Auditor) ಆಗಿರುವ ತಮ್ಮ ಮಗ ಶ್ರೀ ಗುರುರಾಜ ಅವರ ಹತ್ತಿರ ಬೆಳಗಾವಿಯಲ್ಲಿ ವಾಸವಾಗಿದ್ದಾರೆ.
ಮಕ್ಕಳು:
೧) ಸಮೀರ. ಜನ್ಮ ದಿನಾಂಕ ಮತ್ತು ಸ್ಥಳ : ೧೧ ಎಪ್ರಿಲ ೧೯೮೪ ರಂದು ಬೆಳಗಾವಿಯಲ್ಲಿ. B.E. (Mech). BVB College of Engineering, ಹುಬ್ಬಳ್ಳಿ ನಂತರ M.S. (USA), Grand Rapids, Michigan State (Steel Case Company) ಅಲ್ಲಿ Sr.analytic Officer. ಮದುವೆ ಆಗಿದೆ.
ಪತ್ನಿ : ಶಾಲಿನಿ. ಮೈಸೂರಿನ ಇವರೂ B.E. ಅವರಿಗೂ Grand Rapids Company ಯಲ್ಲಿ ಕೆಲಸ. ಈ ದಂಪತಿಗಳಿಗೆ ೧೯ ಡಿಸೆಂಬರ ೨೦೧೬ ರಲ್ಲಿ ಗಂಡು ಮಗು ಹುಟ್ಟಿದೆ. ಚಿ.ಶ್ಲೋಕ ಎಂದು ಹೆಸರಿಟ್ಟಿದ್ದಾರೆ.
೨) ಸಂಪ್ರೀತ. ಜನ್ಮ ದಿನಾಂಕ ಮತ್ತು ಸ್ಥಳ : ೨೯ ಸಪ್ಟೆಂಬರ ೧೯೯೦ ರಂದು ಮಿರಜದಲ್ಲಿ. B.E. (Mech) from Rajiv GandhiCollege of Engineering, Varsova – Andheri ನಂತರ M.S. (U.S.A). OklandState University. ಇವರಿಗೂ Grand Rapids Companyy ಯಲ್ಲಿಯೆ ಕೆಲಸವಾಗಿದೆ.
ಯಾತ್ರೆ – ಪ್ರವಾಸ: ತಂದೆ ವಾಸುದೇವಾಚಾರ್ಯರು ಬದುಕಿ ಇದ್ದಾಗಲೆ ಅವರು ಅವರು ತಮ್ಮ ಕುಟುಂಬ, ಮಕ್ಕಳು ಎಲ್ಲರನ್ನು ಸೇರಿಸಿಯೆ ಎರಡು ಸಲ ಬದರೀ ಯಾತ್ರೆ, ಮೂರು ಸಲ ರಾಮೇಶ್ವರ ಯಾತ್ರೆ, ಬದರಿಗೆ ಹೋಗಿದ್ದ ಒಂದು ಸಲ ಕಾಶಿ, ಪ್ರಯಾಗ, ಗಯಾಗಳಿಗೂ ಹೋಗಿಬಂದಿದ್ದರಷ್ಟೆ! ಹಾಗೆಯೆ ಪಂಢರಪುರ, ತಿರುಪತಿ ಮತ್ತು ಮಂತ್ರಾಲಯಗಳಿಗೆ ಹೆಚ್ಚು ಕಡಿಮೆ ಪ್ರತಿ ವರ್ಷ ಯಾತ್ರೆ ಮಾಡುತ್ತಿದ್ದರು,
ಆ ನಂತರವೂ ಸಾಧ್ಯವಾದಾಗಲೆಲ್ಲ ಯಾತ್ರಾ ಸ್ಥಳಗಳಿಗೆ ಹೋಗಿ ಬರುವ ರೂಢಿಯನ್ನು ಶ್ರೀ ಸುಧೀರ ಅವರೂ ಇಟ್ಟುಕೊಂಡರು ಬದರೀ ಯಾತ್ರೆ ೧೯೯೬ ರಲ್ಲಿ ಮತ್ತೊಮ್ಮೆ ಸಾಧಿಸಿತು, ಹೆಂಡತಿ ಮಕ್ಕಳ ಸಮೇತ. ಹಾಗೆಯೆ ಮಂತ್ರಾಲಯ, ತಿರುಪತಿ, ಉದುಪಿ ಈ ಕ್ಷೇತ್ರಗಳಿಗೂ ಕೆಲವು ಸಲ ಹೋಗಿ ಬಂದುದಾಗಿದೆ.
ಈ ಕ್ಷೇತ್ರ ಯಾತ್ರೆಗಳಲ್ಲದೆ ಸುಧೀರರಿಗೆ ಇನ್ನೂ ಹೆಚ್ಚಿನ ಪ್ರವಾಸ ಯೋಗ ಇದೆ. ಇದ್ದ ಇಬ್ಬರು ಮಕ್ಕಳೂ ಮತ್ತು ಸೊಸೆಯು ಅಮೇರಿಕೆಯಲ್ಲಿ. ಈಗಂತೂ ಮೊಮ್ಮಗನ ಸೆಳೆತ ಬೇರೆ! ಹೀಗಾಗಿ ವಿದೇಶ ಪ್ರಯಾಣ ಯೋಗ. ಆಗಲೆ ಎರಡುಸಲ, ಒಮ್ಮೆ ಜೂನ ೨೦೧೪ ರಲ್ಲಿ ಮತ್ತೊಮ್ಮೆ ಡಿಸೆಂಬರ ೨೦೧೪ ರಲ್ಲಿ ಅಮೇರಿಕೆಗೆ ಹೋಗಿ ಬಂದಾಗಿದೆ.
ಇದಕ್ಕೂ ಮೊದಲು ೨೦೧೩ ರಲ್ಲಿ ಯುರೋಪ ನೋಡಲೆಂದು ಗಂಡ ಹೆಂಡತಿ ಇಬ್ಬರೂ ಹೋಗಿ ಬಂದಿದ್ದರು. ಅದರ ಹಿಂದಿನ ವರ್ಷ ೨೦೧೨ರಲ್ಲಿ ಇಬ್ಬರೂ ದುಬೈಗೆ ಹೋಗಿದ್ದರು.
ಸುಧೀರ ಅವರು ಶ್ರೀಮತಿಯವರೊಡನೆ ಮತ್ತು ಲೋಧಾ ಹೆವನದಲ್ಲಿರುವ ರವೀಶ ವೆಂಕಟೇಶ ಮಂಗಳವೇಢೆಯವರ ಜೊತೆ ಈ ಲೇಖಕರ ಮಗಳು ಶ್ರೀಮತಿ ಆರತಿಯ (ಪ್ರೀತಿ ಪ್ರಶಾಂತ ಕುಲಕರ್ಣಿ) ಮನೆಗೆ ಮಾ.೧೮, ೨೦೧೭ ರಂದು ಬಂದಿದ್ದರು.
ಬರೆದವರು : ಶ್ರೀಕಾಂತ ರಂ.ಮಂಗಳವೇಢೆ. ಬರೆಯಲು ಶುರು ಮಾಡಿ ಮುಗಿಸಿದ್ದು : ೧ ಡಿಸೆಂಬರ ೨೦೧೯ (ರವಿವಾರ), ಪುಣೆ ಮುಕ್ಕಾಮಿನಲ್ಲಿ ; ಆಧಾರ : ಸುಧೀರ ವಾಸುದೇವ ಮಂಗಳವೇಢೆ ಇವರೊಡನೆ ನಡೆಸಿದ ಸಂದರ್ಶನ. ಮಾರ್ಚ ೨೦೦೧೭ ರಲ್ಲಿ ಡೊಂಬಿವಲಿಯ ಅವರ ಮನೆಗೆ ಹೋಗಿದ್ದೆ. ಹಾಗೆಯೆ ಅವರೂ ತಮ್ಮ ಶ್ರೀಮತಿಯವರೊಡನೆ ಮತ್ತು ಲೋಧಾ ಹೆವನದಲ್ಲಿರುವ ರವೀಶ ವೆಂಕಟೇಶ ಮಂಗಳವೇಢೆಯವರ ಜೊತೆ ಆರತಿಯ ಮನೆಗೆ ಮಾ.೧೮ರಂದು ಬಂದಿದ್ದರು.