ಭೀಮಾಚಾರ್ಯ ರಂಗಾಚಾರ್ಯ ಮಂಗಳವೇಢೆ (ಜ. ೧೮೫೦ರ ಆಸುಪಾಸಿನಲ್ಲಿ. ಮ. ೧೯೦೫ ಆಸುಪಾಸಿನಲ್ಲಿ) ಇವರ ಕಾಲದ ಕಾಗದ ಪತ್ರಗಳು

ದಾನಪತ್ರ

ಕಿತ್ತೂರಿನ ಗುರುವಾರ ಪೇಟೆಯಲ್ಲಿನ ಗದ್ದಿ ಓಣಿಯ ಆ ಮನೆ ನನ್ನ ಮುತ್ತಜ್ಜ ಭೀಮಸೇನಾಚಾರ್ಯರಿಗೆ ದಾನವಾಗಿ ಬಂದದ್ದು ೧೮೬೪ನೆ ಇಸ್ವಿಯಲ್ಲಿ.

ಅದಕ್ಕೆ ಸಂಬಂಧಿಸಿದ   ಆ ದಾನಪತ್ರ

ಭೂದಾನ ಪತ್ರ

ಶ್ರೀ ಲಕ್ಷ್ಮೀ ವೆಂಕಟೇಶ ಪ್ರ

(ಶ್ಲೋಕ)

ಸ್ವಸ್ತಿ ಶ್ರೀ ಜಯಾಭ್ಯುದಯ ನೃಪಶಾಲಿವಾಹನ ಶಕೆ ೧೭೮೫ನೆ ವಾರುದಿರೋದ್ಗಾರಿ ಸಂವತ್ಸರ ಫಾಲ್ಗುಣ ಶುದ್ಧ ಪಂಚಮಿಯಲ್ಲಿ ಆಶ್ವಿಲಾಯನ ಸೂತ್ರದ ಋಕ್ಶಾಖೀಯ ಕಾಸ್ಯಪ  ಗೋತ್ರೋತ್ಪನ್ನ ಅನಂತಾಚಾರ್ಯ ಪ್ರಪೌತ್ರ ಕೃಷ್ಣಾಚಾರ್ಯರ ಪೌತ್ರ ರಂಗಾಚಾರ್ಯರ ಪುತ್ರ ಚಿರಂಜೀವ ಭೀಮಶೈನಾಚಾರ್ಯ ಮಂಗಳವೇಡಿ ವಾಸ್ತವ್ಯ ಮುರಗೋಡ ಇವರಿಗೆ– ಆಶ್ವಿಲಾಯನ  ಸೂತ್ರದ ಋಕ್ಶಾಖೀಯ ಭಾರದ್ವಾಜ ಗೋತ್ರೋತ್ಪನ್ನ ನರಸಿಂಹಭಟ್ಟರ ಪೌತ್ರ ಗುಂಡಭಟ್ಟರ ಪುತ್ರ ಕೃಷ್ಣಭಟ್ಟರ ಪತ್ನಿ ಸಾವಿತ್ರಿಬಾಯಿಯು ಸೌಭಾಗ್ಯವತಿ ತುಲಸಾಬಾಯಿ ಕನ್ಯಾದಾನ ಕಾಲದಲ್ಲಿ ಸಂಕಲ್ಪ(ದ) ಭೂದಾನ ಗೃಹದಾನ ಪತ್ರ ಬರಕೊಟ್ಟ ಕ್ರಮವೇನೆಂದರೆ ನಾನು ನಮ್ಮ ಪಿತೃಗಳಿಗೆ ಅಕ್ಶಯಲೋಕವಾಸ್ಯರ್ಥ ಕಿತ್ತೂರಲ್ಲಿರುವ ಜೋಯಿಸ ನರಸಿಂಹಭಟ್ಟರಹೊನ್ದಿಗೆ ಇದ್ದ ನಮ್ಮನಿ ಪೈಕಿ ಪಶ್ಚಿಮಕ್ಕೆ ಇದ್ದ ಅರ್ಧವನ್ನು ಹಾಂಗೆ ದೇಗಲವಳ್ಳಿ ತಾಲೂಕ ಬೀಡಿ ಈ ಗ್ರಾಮದಲ್ಲಿ ನಮ್ಮ ಇನಾಮ ಭೂಮಿ ನಂ ೯೮ ಯಕರೆ ೫-೩೮ ಆಕಾರ ರೂಪಾಯಿ ೧೯ (ಹತ್ತೊಂಬತ್ತು) ಈ ಭೂಮಿಯನ್ನು ನೀವು ನಿಮ್ಮ ಪುತ್ರಾದಿ ವಂಶಪರಂಪಾನುಭವ ಮಾಡಿಕೊಂಡು ನಮ್ಮ ವಂಶಕ್ಕೆ ಹಿತಚಿಂತನ ಮಾಡುತ ಇಹೋದು ಇದಕ್ಕೆ ದಾರಾದರೂ ನಮ್ಮವರಾಗಲಿ ಪರಕೀಯರಾಗಲಿ ಅನ್ಯಥಾ ಮಾಡಿದರೆ ಕಾಶಿಯಲ್ಲಿ ಗುರುಹಿರೇರ ವಧಾ ಮಾಡಿದರ ದಾವ ದೋಷವೊ ಆ ದೋಷ ಬರಲಿ ಈ ಭೂಮಿಗೆ ಚತುಶ್ಶೀಮಾ ಪೂರ್ವಕ  ನಂ ಪಶ್ಚಿಮಕ್ಕೆ ನಂ ದಕ್ಷಿಣಕ್ಕೆ ನಂಬರ ೯೯ ಉತ್ತರಕ್ಕೆ ನಂ ೯೭ ಈ ಭೂಮಿಯ ನಂಬರಗಳ ಮಧ್ಯದಲ್ಲಿ ಇದ್ದ ಆಭೂಮಿಯಲ್ಲಿ ತರುಪಾಶಾಂಗ ನಿಧಿನಿಕ್ಷೇಪ ಮೊದಲಾದ್ದು ನೀವೇ ಅನುಭವಿಸತಕ್ಕದ್ದು ಹಾಂಗೆ ಅದರ ಚವಥಾಯಿ ವಾರ್ಷಿಕ ನಜರಾಣಿ ನೀವೇ ಕೊಡತಕ್ಕದ್ದು ಯಂದು ಬರಶಿಕೊಟ್ಟ ಗೃಹದಾನಪತ್ರ  ಸಹಿ–

(ಶ್ಲೋಕ)———-

———–

———–

ತಾ ೧೨ನೆ ಮಾರ್ಚ ೧೮೬೪ ಇಸಿವೀ ಇ ಲಿಖಿತಾಕ್ಷರ ರಾಮಚಂದ್ರ ಕೃಷ್ಣ ಶಾನುಭೋಗ ಗಂದಿಗವಾಡ ತಾಲುಕ

ಈ ಗುರುತು ಸಾವಿತ್ರಿಬಾಯಿಯು ಲೇಖನಿ ಹಿಡಿದು ಮಾಡಿದ್ದು

ಈ ಲಿಖಿತಾಕ್ಷರ ರಾಮಚಂದ್ರ ಕೃಷ್ಣ ಶಾನುಭೋಗ  (ಗಂ)-    

 

ಮೇಲೆ  ಬರಕೊಟ್ಟ ಸಾವಿತ್ರಿಬಾಯಿಯು ಭೂದಾನ ಗೃಹದಾನಕೊಟ್ಟದ್ದು ನಮಗೆ ಮಾನ್ಯ ಅದ ರುಜು ನರಸಿಂಹಭಟ್ಟ ಬಿನ್ನ ವೆಂಕಣ್ಣಭಟ್ಟ ಗುಂಡಭಟ್ಟನವರ ದಸ್ತೂರಖುದ್ದ—

                                       ಸಾಕ್ಷಿ

** ಕೃಷ್ಟಾಚಾರ್ಯ ಉಮರ್ಜಿ ಪತ್ರಪ್ರಮಾಣೆ ಸಾಕ್ಷಿ ದಸ್ತೂರಖುದ್ದ *
    ನರಸಿಂಹ್ವಭಟ್ಟ ಜ್ಯೋತಿಷಿ ಕಿತ್ತೂರ ಪತ್ರ ಬರದ ಪ್ರಮಾಣೆ ಸಾಕ್ಷ್ಯ ದಸ್ತೂರಖುದ್ದ
**       ಪೂರ್ಣಾಚಾರ್ಯ ಬಿನ್ನ ಕೃಷ್ಣಾಚಾರ್ಯ ಶಿಗ್ಗಾವಿ ವಾಸ್ತವ್ಯ ಕಿತ್ತೂರ ಸಾಕ್ಷಿ ದಸ್ತೂರಖುದ್ದ
            ಬಾದರಾಯಣ ತಡಕೋಡ ಬರದ ಪತ್ರಕ್ಕ ಸಾಕ್ಷಿ ದಸ್ತೂರಖುದ್ದ

ಇದರ ಹಿಂದಿನ ಮಗ್ಗಲಿಗೆ ಮೇಲೆ 179401ಎಂಬ ಮುದ್ರಿತ ನಂಬರ್

(ಕೆಳಗೆ ಒಂದು ಸಾಲು ಕನ್ನಡದಲ್ಲಿ) ತಾರೀಖು ೧೨ನೆ ಮಾರ್ಚ ಸಂನ್ನ ೧೮೬೪ ಯಿಸ್ವಿಯಲ್ಲಿ…..ಮತ್ತು ನಾಲ್ಕು  ರೂಪಾಯಿ ಬಾಬತ್ತು ಸಾವಿತ್ರಿಬಾಯಿ ಕೊಮ ಕೃಷ್ಣಭಟ್ಟ ಗುಂಡಭಟ್ಟರ ಸಾಕೀನ ಕಿತ್ತೂರು ದಾನಪತ್ರದ ದಶಿಂದ್ಸಾ (ಲ?) ಕೊಟ್ಟದ್ದು ಹಸ್ತೆ ಖುದ್ದು

ಸಹಿ..

ಮೋಡಿಲಿಪಿಯಲ್ಲಿಬರೆದ ೮ ಸಾಲುಗಳು.

Seal of the Deputy Registrar Kittur


ಎರಡು  ಸನದುಗಳು

ಭೂದಾನ ಮಾಡಿಕೊಟ್ಟ ಜಮೀನು ( ದೇಗಲವಳ್ಳಿ ಜಮೀನು ಮತ್ತು ಬಸರಕೋಡ ಜಮೀನು) ತಮ್ಮ (ಕೃಷ್ಣಭಟ್ಟ) ಹೆಸರಿನಲ್ಲಿದ್ದವು ಎಂದು ತೋರಿಸುವ, George Clerk – ಸೀಲು ಇರುವ, ೨ ಜನೇವರಿ ೧೮೬೨ ತಾರೀಖಿನ, ಎರಡು  ಸನದುಗಳು.

 

 

 

 

 

 

 

 

 


ಸಾವಿತ್ರಿಬಾಯಿ (ಕೃಷ್ಣಭಟ್ಟರ ಪತ್ನಿ) ವಂಶಾವಳಿ

 

 

 

ಅನಂತಾಚಾರ್ಯ ರಾಮಾಚಾರ್ಯ ಮಂಗಳವೇಢೆ ಇವರಿಗೆ ಸಂಬಂಧಿಸಿದ ಕಾಗದ ಪತ್ರಗಳು

ಅನಂತ ರಾಮಚಂದ್ರ ಮಂಗಳವೇಢೆ (೧೯೧೨-೧೯೮೪) ಇವರ ವೃತ್ತಿ ಜೀವನಕ್ಕೆ ಸಂಬಂಧಿಸಿದ ೧೪ ಉತ್ತಮ ಸೇವಾ ದಾಖಲು ಪತ್ರಗಳು (Good  Service Ticket), ೬ ಪ್ರಶಂಸಾ ಪತ್ರಗಳು (Commendatory Note), ಮತ್ತು ನಾಸಿಕದಲ್ಲಿ ದ ಸೇಂಟ  ಜೋನ ಅಂಬ್ಯುಲನ್ಸ ಅಸೋಸಿಯೆಶನದ ಇಂಡಿಯನ ಬ್ರ್ಯಾಂಚಿನವರು ನಡೆಸಿದ ಗಾಯಾಳುಗಳ ಚಿಕಿತ್ಸಾ ತರಬೇತಿ ಪಡೆದ ಸರ್ಟಿಫಿಕೆಟ, ಅಲ್ಲದೆ ಅವರಿಗೆ ಸರಕಾರವು ಕೊಟ್ಟಿದ್ದ ಭರಪಾಯಿಯ ಬಗೆಗಿನ ಪತ್ರಿಕಾ ವರದಿಯ ಆಯ್ದ ಭಾಗ  ಹೀಗೆ ಒಟ್ಟು ೨೨ ಕಾಗದಪತ್ರಗಳು.

 

 

ಗೋವಿಂದ

ಪತ್ರ – Post Card

  • ಜನಕ ತಂದೆ ರಾಮಾಚಾರ್ಯರು ತಮಗೆ ಪುತ್ರೋತ್ಸವ ಆದುದನ್ನು ತಿಳಿಸಿ ಕಿತ್ತೂರಿನ ಕೃಷ್ಟಾಚಾರ್ಯರಿಗೆ ಬರೆದ ಪತ್ರ. ಕಾಲಾಂತರದಲ್ಲಿ ಈ ಕೃಷ್ಟಾಚಾರ್ಯರೇ ಆ ಹುಡುಗನನ್ನು ದತ್ತಕ ತೆಗೆದುಕೊಂಡುದುದು ಒಂದು ವಿಶೇಷ.

 

ಇತರ ಕಾಗದ ಪತ್ರಗಳು

  • ಜನಕ ತಂದೆ ರಾಮಾಚಾರ್ಯರು ತಮ್ಮ ಮೊದಲ ಮೂರು ಮಕ್ಕಳ ಜನ್ಮ ಟಿಪ್ಪಣಿಗಳನ್ನು ಸ್ವ-ಹಸ್ತಾಕ್ಷರದಲ್ಲಿ (?) ಬರೆದ ಕಾಗದ. 

  • ಯರಝರ್ವಿಯವರ ಡೈರಿ (ರೆಜಿಸ್ಟರ)ದಲ್ಲಿ ನಮೂದಿಸಿದ ಜನ್ಮ ತಾರೀಖಿಗೆ ಸಂಬಂಧಿಸಿದ ಉಲ್ಲೇಖ. 

  • ರಂಗನಾಥ  ಅವರೆ ತಮ್ಮ ಸ್ವ-ಹಸ್ತಾಕ್ಷರದಲ್ಲಿ ಬರೆದಿಟ್ಟಿದ್ದ ತಮ್ಮ ಜನ್ಮ ಟಿಪ್ಪಣಿ (೧೯೪೬ ರ ಡೈರಿ).

  • ಧಾರವಾಡದ ಕರ್ನಾಟಕ ಹಾಯಸ್ಕೂಲಿನ ಜನರಲ್ ರಜಿಸ್ಟರದಲ್ಲಿ ನಮೂದಾದ  ಪ್ರವೇಶ ಹಾಗೂ ಜನ್ಮ ತಾರೀಖಿನ ದಾಖಲು. 

  • ರಂಗನಾಥ ಮತ್ತು ಅವರ ಬೆನ್ನ ಮೇಲಿನ ತಮ್ಮ ಗೋವಿಂದ ಇವರ ಮುಂಜಿವೆ – ತಾ: ೨೨-೦೫-೧೯೧೩. ಯರಝರ್ವಿಯವರ ಡೈರಿ.

 

  • ರಂಗನಾಥ ಅವರ Vernacular Final Examination Certificate. 

ಆಗಿನ ಪ್ರಾಥಮಿಕ ಶಿಕ್ಷಣ – ೭ನೆ ಇಯತ್ತೆಯ ಕೊನೆಯಲ್ಲಿ ಮುಲಕಿ ಪರೀಕ್ಷೆಯಲ್ಲಿ ಕೊನೆಗೊಳ್ಳುತ್ತಿದ್ದಿತು. ಆದರೆ, ಹಾಗೆ ಕಲಿಯುತ್ತಿದ್ದ ವಿದ್ಯಾರ್ಥಿಗಳು ವರ್ನ್ಯಾಕ್ಯುಲರ ಸ್ಕೂಲಿನವರಾಗಿದ್ದರೆ, ಆ ಏಳು ವರ್ಷಾವಧಿಯಲ್ಲಿ ಅವರಿಗೆ ಇಂಗ್ಲೀಷ ಭಾಷೆಯನ್ನು ಕಲಿಸುತ್ತಿರಲಿಲ್ಲ. ಅವರು ಮಾಧ್ಯಮಿಕ ಶಾಲೆಯನ್ನು (ಹಾಯ್ ಸ್ಕೂಲ) ಪ್ರವೇಶ ಪಡೆಯ ಬಯಸಿದರೆ ಆ ಮುನ್ನ ಒಂದು ವರ್ಷ ಇಂಗ್ಲೀಷ ಕಲಿಯ ಬೇಕಾಗಿತ್ತು-  ೪, ೫, ೬ನೆ ವರ್ಗದಲ್ಲಿ ಆ ಭಾಷೆಯನ್ನು ಕಲಿತವರು ಯಾವ ಮಟ್ಟಕ್ಕೆ ಬಂದಿರುತ್ತಿದ್ದರೊ ಆ ಮಟ್ಟಕ್ಕೆ ಬರಲು. ಇಲ್ಲಿ, ತಿಳಿದುಕೊಳ್ಲಬೇಕಾದುದು ಇಷ್ಟೆ. ರಂಗನಾಥ ಅವರು ಹೀಗೇ ಮಾಡಿ, ಅಂದರೆ ಒಂದು ವರ್ಷ ಇಂಗ್ಲೀಷಿಗಾಗಿಯೆ ಕಳೆದುಕೊಂಡು, ಎಸ್.ಎಸ್.ಸಿ. ಆಗಿದ್ದರೆ?

 

  •  ಧಾರವಾಡದ ಕರ್ನಾಟಕ ಹಾಯಸ್ಕೂಲಿನ ಫೀ ರಸೀದಿ (ತಾ: ೨೪-೯-೧೯೨೪).  ಆಗ ಅವರು ೬ನೇ ತರಗತಿಯಲ್ಲಿ (ಅಂದರೆ ಈಗಿನ ೧೦ನೇ ತರಗತಿ) ಕಲಿಯುತ್ತಿದ್ದರು. 

ಆ ದಿನಗಳಲ್ಲಿ ಪ್ರಾಥಮಿಕ ೪ನೇ ಇಯತ್ತೆ ಮುಗಿಸಿದ ಮೇಲೆ ಮಾಧ್ಯಮಿಕ ಶಾಲೆಗೆ ಪ್ರವೇಶ ಸಿಗುತ್ತಿತ್ತು. ಅದು ಮಾಧ್ಯಮಿಕ ಶಾಲೆಯ ೧ನೇ ತರಗತಿ. ಹೀಗಾಗಿ ೬ನೆ ತರಗತಿಯಂದರೆ ಈಗಿನ ೧೦ನೇ ತರಗತಿ. ಆ ದಿನಗಳಲ್ಲಿ ಇಂದಿನ SSLC ಪರೀಕ್ಷೆ ೧೧ನೆ ತರಗತಿ ಮುಗಿಸಿದ ಮೇಲೆ ಇರುತ್ತಿತ್ತು.

  • ಅವರು ಹಾಯಸ್ಕೂಲಿನ VII ಕ್ಲಾಸಿನಲ್ಲಿದ್ದಾಗ (ಅಂದರೆ ಈಗಿನ SSLC) ಅವರಿಗೆ ಇದ್ದ ಒಂದು ಪಠ್ಯಪುಸ್ತಕ – ರಾಘವಭಟ್ಟನ ಅರ್ಥದ್ಯೋತನಿಕಾ ವ್ಯಾಖ್ಯಾನ ಸಹಿತವಾದ ಕಾಲಿದಾಸನ ಅಭಿಜ್ಞಾನ ಶಾಕುಂತಲವೆಂಬ ಇಂಗ್ಲಿಷ ಟಿಪ್ಪಣಿಗಳ ಸಹಿತವಾದ ಸಂಸ್ಕೃತ ಪುಸ್ತಕ. ಪುಸ್ತಕವನ್ನು ತೆರೆದಾಗ ವಿದ್ಯಾರ್ಥಿ ದೆಸೆಯಲ್ಲಿದ್ದಾಗಿನ ರಂಗನಾಥ ಬರೆದ ತನ್ನ ಹೆಸರು, ಊರು, ತರಗತಿ ಮತ್ತು ಕಲಿಯಲೆಂದು ಬಂದಿದ್ದ ಊರು ಇದನ್ನೆಲ್ಲ ಅವರ ಕೈಬರಹದಲ್ಲಿರುವದು ಕಾಣುತ್ತದೆ. ಅವರ ಸಹಿಯೂ ಇದೆ Mangalwedhekar ಎಂದು. ಅದು, ಅವರು ಇನ್ನೂ R.R.Mangalwedhe ಆಗಿದ್ದ ಕಾಲ. ದತ್ತಕಹೋಗಿ R.K.Mangalwedhe ಆಗಿರಲಿಲ್ಲ.
    ಈ ಪುಸ್ತಕ ಆಗ ಧಾರವಾಡದಲ್ಲಿ ಲಭ್ಯವಿರಲಿಲ್ಲವೆಂದು ಕಾಣುತ್ತದೆ. ಮುಂಬಯಿಯಿಂದ Secondhand Book Seller ಒಬ್ಬರಿಂದ  ೫ರೂ.೧೧ಆಣೆ ಕೊಟ್ಟು VP Bookpost ತರಿಸಿಕೊಂಡಿದ್ದರು. ಅದಕ್ಕಾಗಿ ಕೊಟ್ಟಿದ್ದ ವಿಳಾಸ : C/O ಆರ್.ಆರ್. ದೇಶಪಾಂಡೆ, ಸಾಧನಕೇರಿ. ಬಹುಶಃ ಅವರಲ್ಲಿನ ಒಂದು ಕೋಣೆಯಲ್ಲಿ ಇರುತ್ತಿದ್ದರೇನೋ! ಇನ್ನು ಆ ಕಾಲದ ಆ ಪಠ್ಯಪುಸ್ತಕವನ್ನು ನೋಡಿದರೆ ಈಗಿನ ಕಾಲೇಜು ವಿದ್ಯಾರ್ಥಿಗಳ ಮಟ್ಟಕ್ಕೂ ಭಾರವೆನಿಸುತ್ತದೆ.

  • ದತ್ತಕ ಪತ್ರ – ವಾವೆಯಲ್ಲಿ ಕಕ್ಕಿಆಗಿದ್ದ ಮುರಗೋಡ ಸೀತಕ್ಕ (ಕಿತ್ತೂರಿನಲ್ಲಿದ್ದ ಮುರಗೋಡ / ಮಂಗಳವೇಢೆ ಕೃಷ್ಟಾಚಾರ್ಯರ ಪತ್ನಿ) ತನ್ನ ಪತಿ ೬-೧೧-೧೯೪೦ರಲ್ಲಿ ಮರಣ ಹೊಂದಿದ ಎರಡು ತಿಂಗಳ ನಂತರ ರಾಮಾಚಾರ್ಯರ ಪುತ್ರ ರಂಗನಾಥ ಅವರನ್ನು ೭-೧-೧೯೪೧ರಂದು ದತ್ತಕ ತೆಗೆದುಕೊಂಡು, ಬೆಳಗಾವಿಯ ಸಬ್ ರಜಿಸ್ಟ್ರಾರರಲ್ಲಿ ನೋಂದಣಿ  ಮಾಡಿಕೊಟ್ಟ ದತ್ತಕ ಪತ್ರ.

  • ಸೆಕೆಂಡರಿ ಟೀಚರ್ಸ ಸರ್ಟಿಫಿಕೇಟನ್ನು – ೧೯೩೦ ರಲ್ಲಿ ಮೆಥೋಡಿಸ್ಟ ಚರ್ಚದವರು ನಡೆಸುತ್ತಿದ್ದ ವನಿತಾ ವಿದ್ಯಾಲಯ ಹೆಣ್ಣುಮಕ್ಕಳ ಮಾಧ್ಯಮಿಕ ಶಾಲೆಯಲ್ಲಿ ರಂಗನಾಥ ಅವರಿಗೆ ಶಿಕ್ಷಕನೆಂದು ೧-೯-೧೯೩೦ ರಂದು ಕೆಲಸವಾದ ನಂತರ ೧೯೩೮ ರ ಜೂನದಲ್ಲಿ ಅವರು ಸೆಕೆಂಡರಿ ಟೀಚರ್ಸ ಸರ್ಟಿಫಿಕೇಟನ್ನು ಪಡೆದರು. ಆಗ ಕೆಲ ಕಾಲತಮ್ಮ ಅಡ್ಡಹೆಸರನ್ನು ಮಂಗಳವೇಢೆಕರ ಎಂದೂ ಅವರು ಬರೆದುಕೊಳ್ಳುತ್ತಿದ್ದರು. ಈ ಸರ್ಟಿಫಿಕೇಟಿನಲ್ಲಿಯೂ ಹಾಗೆಯೆ ಇದೆ.

 

 

  • ವನಿತಾ ವಿದ್ಯಾಲಯದ ಶಿಕ್ಷಕವೃಂದ

ಬಹುಶಃ ಜೂನ ೧೯೫೦ರಲ್ಲಿ, ಆ ಶಾಲೆಯ ರಜತ ಮಹೋತ್ಸವ ವರ್ಷದಲ್ಲಿ, ತೆಗೆದುದು. ಸಧ್ಯ ರಂಗನಾಥ ಅವರ ಎರಡೆ ಫೋಟೊಗಳು ಮಾತ್ರ ಲಭ್ಯ ಇವೆ. ಒಂದನೆಯದು ಈ ಗ್ರುಪ್ ಫೋಟೊ, ಎರಡನೆಯದು ೧೯೫೩ ರಲ್ಲಿ ಬದರೀ ಯಾತ್ರೆಗೆ ಹೋದಾಗ ಬದರೀನಾರಾಯಣನ ಗುಡಿಯ ಹೊರಗೆ ತೆಗೆಸಿಕೊಂಡ ಫೋಟೊ. ಕೆಲಸ ಸಿಕ್ಕ ಹೊಸತಾಗಿ ತೆಗೆದಿದ್ದ ಶಾಲಾ ಸ್ಟಾಫ ಫೋಟೊ ಒಂದು ಇದ್ದಿತಾದರೂ ಅದೀಗ ಉಳಿದಿಲ್ಲ. ಕೆಳಗಿನ ಈ ಫೋಟೊದಲ್ಲಿ ಕುಳಿತವರಲ್ಲಿ ಎಡಗಡೆಯಿಂದ ಆರನೆಯವರು ಶಾಲೆಯ ಪ್ರಿನ್ಸಿಪಾಲರಾದ ಮಿಸ್.ಜಾನಸನ್ ಅವರು. ಅಮೇರಿಕೆಯ ಹೆಣ್ಣುಮಗಳು. ಆಕೆಯೆ ಹಾಗೆ ವಿದೇಶದಿಂದ ಬಂದ ಆ ಶಾಲೆಯ ಕೊನೆಯ ಪ್ರಿನ್ಸಿಪಾಲ.

ಕುಳಿತವರು (ಎಡದಿಂದ ಬಲಕ್ಕೆ) : ೧) E.C. ರೆಡ್ಡಿ ೨) ನೀಲಜಗಿ ೩) ಮಿಸೆಸ್. ಥಿಟೆ (ಇನಸ್ಪೆಕ್ಟರ) ) ೪) ಅಫೆನ್ಸೊ (RPD ಕಾಲೇಜಿನ ಪ್ರಿನ್ಸಿಪಾಲರು) ೫) ?  ೬) ಮಿಸ್. ಜಾನ್ಸನ (ಪ್ರಿನ್ಸಿಪಾಲ) ೭) ಮಿಸೆಸ್. ಅಫೆನ್ಸೊ ೮) ಸೀಮನ್ಡ್ಸ್ ೯) ಮಿಸೆಸ್. ಸ್ಟ್ರೊಮ್
ನಡುವಿನ ಸಾಲು (ಎಡದಿಂದ ಬಲಕ್ಕೆ) : ೧) ಮಿಸೆಸ್. ಪ್ರಭಾಕರ (ಮೋಸೆಸ) ೨) ಮಿಸೆಸ. ಹೀರಾ ಧನವಡೆ ೩) ಮಿಸೆಸ್. ಮ್ಯಾಥ್ಯೂ  ೪) ಮಿಸೆಸ್. ಸೋನ್ಸ  ೫) ಮಿಸೆಸ್. ಗೋರಡೆ  ೬) ಮಿಸೆಸ್. ಕಲಪತ್ರಿ  ೭) ಮಿಸೆಸ್. ನೀಲಜಗಿ ೮) ಮಿಸೆಸ್. ಮೆಕ್ಯಾಡೆನ್  ೯) ಮಿಸೆಸ್. ಸ್ಯಾಮ್ಯುಯೆಲ್  ೧೦) ಹೆಸರು ಗೊತ್ತಿಲ್ಲ. ಒಬ್ಬ ಅಮೇರಿಕನ್.
ಹಿಂದಿನ ಸಾಲು (ಎಡದಿಂದ ಬಲಕ್ಕೆ) : ೧) ಎನ್.ಆರ್. ಸಖದೇವ (ಮರಾಠಿ ಮತ್ತು ಗಣಿತ ಶಿಕ್ಷಕ):  ೨) ಗಂಭೀರ (ಹಿಂದಿ ಶಿಕ್ಷಕ)  ೩) ಜಿ.ಎನ್. ಕುಲಕರ್ಣಿ (ಮರಾಠಿ ಶಿಕ್ಷಕ)  ೪) ವಿ.ಎನ್.ತಗಾರೆ  ೫) ವಿ.ವಿ. ಉತ್ತೂರಕರ (ಸಂಗೀತ ಶಿಕ್ಷಕ)  ೬) ಆರ್.ಕೆ.ಮಂಗಳವೇಢೆಕರ (ಗಣಿತ, ಕನ್ನಡ, ಸಂಸ್ಕೃತ ಶಿಕ್ಷಕ) ೭) ಎಸ್.ಎಸ್. ಗಳತಗೆಕರ  (ಇತಿಹಾಸ ಶಿಕ್ಷಕ) ೮) ಜಿ.ಎಮ್.ಮೆಕ್ಯಾಡೆನ್ (ಇಂಗ್ಲಿಷ ಶಿಕ್ಷಕ- ಮರಾಠಿ ಮತ್ತು ಕನ್ನಡ ಎರಡೂ ವಿಭಾಗ).

ಇವರಲ್ಲಿ ಪ್ರಿನ್ಸಿಪಾಲರಾದ ಮಿಸ್.ಜಾನ್ಸನ್ ಅಮೇರಿಕೆಯ ಹೆಣ್ಣು ಮಗಳಾಗಿದ್ದರೂ ಕನ್ನಡವನ್ನೂ ಮಾತನಾಡಬಲ್ಲವರಾಗಿದ್ದರು. ಇ.ಸಿ.ರೆಡ್ಡಿ ಪಕ್ಕದಲ್ಲಿಯೆ ಇದ್ದ ಬೆನನ್-ಸ್ಮಿಥ ಗಂಡುಮಕ್ಕಳ ಮಾಧ್ಯಮಿಕ  ಶಾಲೆಯ ಪ್ರಿನ್ಸಿಪಾಲರು. ಸಂಗೀತ ಶಿಕ್ಷಕರಾಗಿದ್ದ ವಿನಾಯಕಬುವಾ ಉತ್ತೂರಕರ (೧೯೧೪-೧೯೮೯) ಅವರು ಗ್ವಾಲಿಯರ ಘರಾಣಾ ಶೈಲಿಯ ಖ್ಯಾತ ಪಂಡಿತರು. ತಂದೆ ಅದೇ ಘರಾಣಾದ ಪಂಡಿತರಾದ ವಿಷ್ಣು ಕೇಶವ ಉತ್ತೂರಕರ ಜೋಶಿ ಮಿರಜದಲ್ಲಿದ್ದರು. ವಿನಾಯಕಬುವಾ ಉತ್ತೂರಕರ ಅವರು ಅಕಾಶವಾಣಿ ಧಾರವಾಡ ಕೇಂದ್ರದ ಎ ಗ್ರೇಡ ಕಲಾವಿದರಾಗಿದ್ದರು ಅಲ್ಲದೆ ಕರ್ನಾಟಕ ಸಂಗೀತ ನೃತ್ಯ ಅಕ್ಯಾಡೆಮಿಯ ಪ್ರಶಸ್ತಿ (೧೯೭೯) ಪಡೆದವರು.

  • ರಂಗನಾಥ ಅವರ ಹಿರಿಯ ಮಗ ಶ್ರೀನಿವಾಸ ತೀರಿಕೊಂಡಾಗ ವನಿತಾ ವಿದ್ಯಾಲಯ ಶಾಲೆಯು ಕಳುಹಿಸಿದ ದುಃಖಸೂಚಕ ಪತ್ರ (೮-೦-೧೯೫೫)

  •  ಮರಣದ ಸಮರ್ಥನೆ ಪತ್ರ – Certificate of Death

 

ರಂಗನಾಥ ಕೃಷ್ಟಾಚಾರ್ಯ ಮಂಗಳವೇಢೆ

ಪತ್ರ – Post Card

  • ಜನಕ ತಂದೆ ರಾಮಾಚಾರ್ಯರು ತಮಗೆ ಪುತ್ರೋತ್ಸವ ಆದುದನ್ನು ತಿಳಿಸಿ ಕಿತ್ತೂರಿನ ಕೃಷ್ಟಾಚಾರ್ಯರಿಗೆ ಬರೆದ ಪತ್ರ. ಕಾಲಾಂತರದಲ್ಲಿ ಈ ಕೃಷ್ಟಾಚಾರ್ಯರೇ ಆ ಹುಡುಗನನ್ನು ದತ್ತಕ ತೆಗೆದುಕೊಂಡುದುದು ಒಂದು ವಿಶೇಷ.

 

ಇತರ ಕಾಗದ ಪತ್ರಗಳು

  • ಜನಕ ತಂದೆ ರಾಮಾಚಾರ್ಯರು ತಮ್ಮ ಮೊದಲ ಮೂರು ಮಕ್ಕಳ ಜನ್ಮ ಟಿಪ್ಪಣಿಗಳನ್ನು ಸ್ವ-ಹಸ್ತಾಕ್ಷರದಲ್ಲಿ (?) ಬರೆದ ಕಾಗದ. 

  • ಯರಝರ್ವಿಯವರ ಡೈರಿ (ರೆಜಿಸ್ಟರ)ದಲ್ಲಿ ನಮೂದಿಸಿದ ಜನ್ಮ ತಾರೀಖಿಗೆ ಸಂಬಂಧಿಸಿದ ಉಲ್ಲೇಖ. 

  • ರಂಗನಾಥ  ಅವರೆ ತಮ್ಮ ಸ್ವ-ಹಸ್ತಾಕ್ಷರದಲ್ಲಿ ಬರೆದಿಟ್ಟಿದ್ದ ತಮ್ಮ ಜನ್ಮ ಟಿಪ್ಪಣಿ (೧೯೪೬ ರ ಡೈರಿ).

  • ಧಾರವಾಡದ ಕರ್ನಾಟಕ ಹಾಯಸ್ಕೂಲಿನ ಜನರಲ್ ರಜಿಸ್ಟರದಲ್ಲಿ ನಮೂದಾದ  ಪ್ರವೇಶ ಹಾಗೂ ಜನ್ಮ ತಾರೀಖಿನ ದಾಖಲು. 

  • ರಂಗನಾಥ ಮತ್ತು ಅವರ ಬೆನ್ನ ಮೇಲಿನ ತಮ್ಮ ಗೋವಿಂದ ಇವರ ಮುಂಜಿವೆ – ತಾ: ೨೨-೦೫-೧೯೧೩. ಯರಝರ್ವಿಯವರ ಡೈರಿ.

 

  • ರಂಗನಾಥ ಅವರ Vernacular Final Examination Certificate. 

ಆಗಿನ ಪ್ರಾಥಮಿಕ ಶಿಕ್ಷಣ – ೭ನೆ ಇಯತ್ತೆಯ ಕೊನೆಯಲ್ಲಿ ಮುಲಕಿ ಪರೀಕ್ಷೆಯಲ್ಲಿ ಕೊನೆಗೊಳ್ಳುತ್ತಿದ್ದಿತು. ಆದರೆ, ಹಾಗೆ ಕಲಿಯುತ್ತಿದ್ದ ವಿದ್ಯಾರ್ಥಿಗಳು ವರ್ನ್ಯಾಕ್ಯುಲರ ಸ್ಕೂಲಿನವರಾಗಿದ್ದರೆ, ಆ ಏಳು ವರ್ಷಾವಧಿಯಲ್ಲಿ ಅವರಿಗೆ ಇಂಗ್ಲೀಷ ಭಾಷೆಯನ್ನು ಕಲಿಸುತ್ತಿರಲಿಲ್ಲ. ಅವರು ಮಾಧ್ಯಮಿಕ ಶಾಲೆಯನ್ನು (ಹಾಯ್ ಸ್ಕೂಲ) ಪ್ರವೇಶ ಪಡೆಯ ಬಯಸಿದರೆ ಆ ಮುನ್ನ ಒಂದು ವರ್ಷ ಇಂಗ್ಲೀಷ ಕಲಿಯ ಬೇಕಾಗಿತ್ತು-  ೪, ೫, ೬ನೆ ವರ್ಗದಲ್ಲಿ ಆ ಭಾಷೆಯನ್ನು ಕಲಿತವರು ಯಾವ ಮಟ್ಟಕ್ಕೆ ಬಂದಿರುತ್ತಿದ್ದರೊ ಆ ಮಟ್ಟಕ್ಕೆ ಬರಲು. ಇಲ್ಲಿ, ತಿಳಿದುಕೊಳ್ಲಬೇಕಾದುದು ಇಷ್ಟೆ. ರಂಗನಾಥ ಅವರು ಹೀಗೇ ಮಾಡಿ, ಅಂದರೆ ಒಂದು ವರ್ಷ ಇಂಗ್ಲೀಷಿಗಾಗಿಯೆ ಕಳೆದುಕೊಂಡು, ಎಸ್.ಎಸ್.ಸಿ. ಆಗಿದ್ದರೆ?

 

  •  ಧಾರವಾಡದ ಕರ್ನಾಟಕ ಹಾಯಸ್ಕೂಲಿನ ಫೀ ರಸೀದಿ (ತಾ: ೨೪-೯-೧೯೨೪).  ಆಗ ಅವರು ೬ನೇ ತರಗತಿಯಲ್ಲಿ (ಅಂದರೆ ಈಗಿನ ೧೦ನೇ ತರಗತಿ) ಕಲಿಯುತ್ತಿದ್ದರು. 

ಆ ದಿನಗಳಲ್ಲಿ ಪ್ರಾಥಮಿಕ ೪ನೇ ಇಯತ್ತೆ ಮುಗಿಸಿದ ಮೇಲೆ ಮಾಧ್ಯಮಿಕ ಶಾಲೆಗೆ ಪ್ರವೇಶ ಸಿಗುತ್ತಿತ್ತು. ಅದು ಮಾಧ್ಯಮಿಕ ಶಾಲೆಯ ೧ನೇ ತರಗತಿ. ಹೀಗಾಗಿ ೬ನೆ ತರಗತಿಯಂದರೆ ಈಗಿನ ೧೦ನೇ ತರಗತಿ. ಆ ದಿನಗಳಲ್ಲಿ ಇಂದಿನ SSLC ಪರೀಕ್ಷೆ ೧೧ನೆ ತರಗತಿ ಮುಗಿಸಿದ ಮೇಲೆ ಇರುತ್ತಿತ್ತು.

  • ಅವರು ಹಾಯಸ್ಕೂಲಿನ VII ಕ್ಲಾಸಿನಲ್ಲಿದ್ದಾಗ (ಅಂದರೆ ಈಗಿನ SSLC) ಅವರಿಗೆ ಇದ್ದ ಒಂದು ಪಠ್ಯಪುಸ್ತಕ – ರಾಘವಭಟ್ಟನ ಅರ್ಥದ್ಯೋತನಿಕಾ ವ್ಯಾಖ್ಯಾನ ಸಹಿತವಾದ ಕಾಲಿದಾಸನ ಅಭಿಜ್ಞಾನ ಶಾಕುಂತಲವೆಂಬ ಇಂಗ್ಲಿಷ ಟಿಪ್ಪಣಿಗಳ ಸಹಿತವಾದ ಸಂಸ್ಕೃತ ಪುಸ್ತಕ. ಪುಸ್ತಕವನ್ನು ತೆರೆದಾಗ ವಿದ್ಯಾರ್ಥಿ ದೆಸೆಯಲ್ಲಿದ್ದಾಗಿನ ರಂಗನಾಥ ಬರೆದ ತನ್ನ ಹೆಸರು, ಊರು, ತರಗತಿ ಮತ್ತು ಕಲಿಯಲೆಂದು ಬಂದಿದ್ದ ಊರು ಇದನ್ನೆಲ್ಲ ಅವರ ಕೈಬರಹದಲ್ಲಿರುವದು ಕಾಣುತ್ತದೆ. ಅವರ ಸಹಿಯೂ ಇದೆ Mangalwedhekar ಎಂದು. ಅದು, ಅವರು ಇನ್ನೂ R.R.Mangalwedhe ಆಗಿದ್ದ ಕಾಲ. ದತ್ತಕಹೋಗಿ R.K.Mangalwedhe ಆಗಿರಲಿಲ್ಲ.
    ಈ ಪುಸ್ತಕ ಆಗ ಧಾರವಾಡದಲ್ಲಿ ಲಭ್ಯವಿರಲಿಲ್ಲವೆಂದು ಕಾಣುತ್ತದೆ. ಮುಂಬಯಿಯಿಂದ Secondhand Book Seller ಒಬ್ಬರಿಂದ  ೫ರೂ.೧೧ಆಣೆ ಕೊಟ್ಟು VP Bookpost ತರಿಸಿಕೊಂಡಿದ್ದರು. ಅದಕ್ಕಾಗಿ ಕೊಟ್ಟಿದ್ದ ವಿಳಾಸ : C/O ಆರ್.ಆರ್. ದೇಶಪಾಂಡೆ, ಸಾಧನಕೇರಿ. ಬಹುಶಃ ಅವರಲ್ಲಿನ ಒಂದು ಕೋಣೆಯಲ್ಲಿ ಇರುತ್ತಿದ್ದರೇನೋ! ಇನ್ನು ಆ ಕಾಲದ ಆ ಪಠ್ಯಪುಸ್ತಕವನ್ನು ನೋಡಿದರೆ ಈಗಿನ ಕಾಲೇಜು ವಿದ್ಯಾರ್ಥಿಗಳ ಮಟ್ಟಕ್ಕೂ ಭಾರವೆನಿಸುತ್ತದೆ.

  • ದತ್ತಕ ಪತ್ರ – ವಾವೆಯಲ್ಲಿ ಕಕ್ಕಿಆಗಿದ್ದ ಮುರಗೋಡ ಸೀತಕ್ಕ (ಕಿತ್ತೂರಿನಲ್ಲಿದ್ದ ಮುರಗೋಡ / ಮಂಗಳವೇಢೆ ಕೃಷ್ಟಾಚಾರ್ಯರ ಪತ್ನಿ) ತನ್ನ ಪತಿ ೬-೧೧-೧೯೪೦ರಲ್ಲಿ ಮರಣ ಹೊಂದಿದ ಎರಡು ತಿಂಗಳ ನಂತರ ರಾಮಾಚಾರ್ಯರ ಪುತ್ರ ರಂಗನಾಥ ಅವರನ್ನು ೭-೧-೧೯೪೧ರಂದು ದತ್ತಕ ತೆಗೆದುಕೊಂಡು, ಬೆಳಗಾವಿಯ ಸಬ್ ರಜಿಸ್ಟ್ರಾರರಲ್ಲಿ ನೋಂದಣಿ  ಮಾಡಿಕೊಟ್ಟ ದತ್ತಕ ಪತ್ರ.

  • ಸೆಕೆಂಡರಿ ಟೀಚರ್ಸ ಸರ್ಟಿಫಿಕೇಟನ್ನು – ೧೯೩೦ ರಲ್ಲಿ ಮೆಥೋಡಿಸ್ಟ ಚರ್ಚದವರು ನಡೆಸುತ್ತಿದ್ದ ವನಿತಾ ವಿದ್ಯಾಲಯ ಹೆಣ್ಣುಮಕ್ಕಳ ಮಾಧ್ಯಮಿಕ ಶಾಲೆಯಲ್ಲಿ ರಂಗನಾಥ ಅವರಿಗೆ ಶಿಕ್ಷಕನೆಂದು ೧-೯-೧೯೩೦ ರಂದು ಕೆಲಸವಾದ ನಂತರ ೧೯೩೮ ರ ಜೂನದಲ್ಲಿ ಅವರು ಸೆಕೆಂಡರಿ ಟೀಚರ್ಸ ಸರ್ಟಿಫಿಕೇಟನ್ನು ಪಡೆದರು. ಆಗ ಕೆಲ ಕಾಲತಮ್ಮ ಅಡ್ಡಹೆಸರನ್ನು ಮಂಗಳವೇಢೆಕರ ಎಂದೂ ಅವರು ಬರೆದುಕೊಳ್ಳುತ್ತಿದ್ದರು. ಈ ಸರ್ಟಿಫಿಕೇಟಿನಲ್ಲಿಯೂ ಹಾಗೆಯೆ ಇದೆ.

 

 

  • ವನಿತಾ ವಿದ್ಯಾಲಯದ ಶಿಕ್ಷಕವೃಂದ

ಬಹುಶಃ ಜೂನ ೧೯೫೦ರಲ್ಲಿ, ಆ ಶಾಲೆಯ ರಜತ ಮಹೋತ್ಸವ ವರ್ಷದಲ್ಲಿ, ತೆಗೆದುದು. ಸಧ್ಯ ರಂಗನಾಥ ಅವರ ಎರಡೆ ಫೋಟೊಗಳು ಮಾತ್ರ ಲಭ್ಯ ಇವೆ. ಒಂದನೆಯದು ಈ ಗ್ರುಪ್ ಫೋಟೊ, ಎರಡನೆಯದು ೧೯೫೩ ರಲ್ಲಿ ಬದರೀ ಯಾತ್ರೆಗೆ ಹೋದಾಗ ಬದರೀನಾರಾಯಣನ ಗುಡಿಯ ಹೊರಗೆ ತೆಗೆಸಿಕೊಂಡ ಫೋಟೊ. ಕೆಲಸ ಸಿಕ್ಕ ಹೊಸತಾಗಿ ತೆಗೆದಿದ್ದ ಶಾಲಾ ಸ್ಟಾಫ ಫೋಟೊ ಒಂದು ಇದ್ದಿತಾದರೂ ಅದೀಗ ಉಳಿದಿಲ್ಲ. ಕೆಳಗಿನ ಈ ಫೋಟೊದಲ್ಲಿ ಕುಳಿತವರಲ್ಲಿ ಎಡಗಡೆಯಿಂದ ಆರನೆಯವರು ಶಾಲೆಯ ಪ್ರಿನ್ಸಿಪಾಲರಾದ ಮಿಸ್.ಜಾನಸನ್ ಅವರು. ಅಮೇರಿಕೆಯ ಹೆಣ್ಣುಮಗಳು. ಆಕೆಯೆ ಹಾಗೆ ವಿದೇಶದಿಂದ ಬಂದ ಆ ಶಾಲೆಯ ಕೊನೆಯ ಪ್ರಿನ್ಸಿಪಾಲ.

ಕುಳಿತವರು (ಎಡದಿಂದ ಬಲಕ್ಕೆ) : ೧) E.C. ರೆಡ್ಡಿ ೨) ನೀಲಜಗಿ ೩) ಮಿಸೆಸ್. ಥಿಟೆ (ಇನಸ್ಪೆಕ್ಟರ) ) ೪) ಅಫೆನ್ಸೊ (RPD ಕಾಲೇಜಿನ ಪ್ರಿನ್ಸಿಪಾಲರು) ೫) ?  ೬) ಮಿಸ್. ಜಾನ್ಸನ (ಪ್ರಿನ್ಸಿಪಾಲ) ೭) ಮಿಸೆಸ್. ಅಫೆನ್ಸೊ ೮) ಸೀಮನ್ಡ್ಸ್ ೯) ಮಿಸೆಸ್. ಸ್ಟ್ರೊಮ್
ನಡುವಿನ ಸಾಲು (ಎಡದಿಂದ ಬಲಕ್ಕೆ) : ೧) ಮಿಸೆಸ್. ಪ್ರಭಾಕರ (ಮೋಸೆಸ) ೨) ಮಿಸೆಸ. ಹೀರಾ ಧನವಡೆ ೩) ಮಿಸೆಸ್. ಮ್ಯಾಥ್ಯೂ  ೪) ಮಿಸೆಸ್. ಸೋನ್ಸ  ೫) ಮಿಸೆಸ್. ಗೋರಡೆ  ೬) ಮಿಸೆಸ್. ಕಲಪತ್ರಿ  ೭) ಮಿಸೆಸ್. ನೀಲಜಗಿ ೮) ಮಿಸೆಸ್. ಮೆಕ್ಯಾಡೆನ್  ೯) ಮಿಸೆಸ್. ಸ್ಯಾಮ್ಯುಯೆಲ್  ೧೦) ಹೆಸರು ಗೊತ್ತಿಲ್ಲ. ಒಬ್ಬ ಅಮೇರಿಕನ್.
ಹಿಂದಿನ ಸಾಲು (ಎಡದಿಂದ ಬಲಕ್ಕೆ) : ೧) ಎನ್.ಆರ್. ಸಖದೇವ (ಮರಾಠಿ ಮತ್ತು ಗಣಿತ ಶಿಕ್ಷಕ):  ೨) ಗಂಭೀರ (ಹಿಂದಿ ಶಿಕ್ಷಕ)  ೩) ಜಿ.ಎನ್. ಕುಲಕರ್ಣಿ (ಮರಾಠಿ ಶಿಕ್ಷಕ)  ೪) ವಿ.ಎನ್.ತಗಾರೆ  ೫) ವಿ.ವಿ. ಉತ್ತೂರಕರ (ಸಂಗೀತ ಶಿಕ್ಷಕ)  ೬) ಆರ್.ಕೆ.ಮಂಗಳವೇಢೆಕರ (ಗಣಿತ, ಕನ್ನಡ, ಸಂಸ್ಕೃತ ಶಿಕ್ಷಕ) ೭) ಎಸ್.ಎಸ್. ಗಳತಗೆಕರ  (ಇತಿಹಾಸ ಶಿಕ್ಷಕ) ೮) ಜಿ.ಎಮ್.ಮೆಕ್ಯಾಡೆನ್ (ಇಂಗ್ಲಿಷ ಶಿಕ್ಷಕ- ಮರಾಠಿ ಮತ್ತು ಕನ್ನಡ ಎರಡೂ ವಿಭಾಗ).

ಇವರಲ್ಲಿ ಪ್ರಿನ್ಸಿಪಾಲರಾದ ಮಿಸ್.ಜಾನ್ಸನ್ ಅಮೇರಿಕೆಯ ಹೆಣ್ಣು ಮಗಳಾಗಿದ್ದರೂ ಕನ್ನಡವನ್ನೂ ಮಾತನಾಡಬಲ್ಲವರಾಗಿದ್ದರು. ಇ.ಸಿ.ರೆಡ್ಡಿ ಪಕ್ಕದಲ್ಲಿಯೆ ಇದ್ದ ಬೆನನ್-ಸ್ಮಿಥ ಗಂಡುಮಕ್ಕಳ ಮಾಧ್ಯಮಿಕ  ಶಾಲೆಯ ಪ್ರಿನ್ಸಿಪಾಲರು. ಸಂಗೀತ ಶಿಕ್ಷಕರಾಗಿದ್ದ ವಿನಾಯಕಬುವಾ ಉತ್ತೂರಕರ (೧೯೧೪-೧೯೮೯) ಅವರು ಗ್ವಾಲಿಯರ ಘರಾಣಾ ಶೈಲಿಯ ಖ್ಯಾತ ಪಂಡಿತರು. ತಂದೆ ಅದೇ ಘರಾಣಾದ ಪಂಡಿತರಾದ ವಿಷ್ಣು ಕೇಶವ ಉತ್ತೂರಕರ ಜೋಶಿ ಮಿರಜದಲ್ಲಿದ್ದರು. ವಿನಾಯಕಬುವಾ ಉತ್ತೂರಕರ ಅವರು ಅಕಾಶವಾಣಿ ಧಾರವಾಡ ಕೇಂದ್ರದ ಎ ಗ್ರೇಡ ಕಲಾವಿದರಾಗಿದ್ದರು ಅಲ್ಲದೆ ಕರ್ನಾಟಕ ಸಂಗೀತ ನೃತ್ಯ ಅಕ್ಯಾಡೆಮಿಯ ಪ್ರಶಸ್ತಿ (೧೯೭೯) ಪಡೆದವರು.

  • ರಂಗನಾಥ ಅವರ ಹಿರಿಯ ಮಗ ಶ್ರೀನಿವಾಸ ತೀರಿಕೊಂಡಾಗ ವನಿತಾ ವಿದ್ಯಾಲಯ ಶಾಲೆಯು ಕಳುಹಿಸಿದ ದುಃಖಸೂಚಕ ಪತ್ರ (೮-೦-೧೯೫೫)

  •  ಮರಣದ ಸಮರ್ಥನೆ ಪತ್ರ – Certificate of Death

 

1 2 3 32