(ಮುರಗೋಡ ಮೂಲದ, ಬೆಳಗಾವಿಯ) ರಾಮಾಚಾರ್ಯರ ಪ್ರಪೌತ್ರ, ಕೃಷ್ಣಾಜಿ ಅವರ ಪೌತ್ರ, ರಾಘವೇಂದ್ರ ಅವರ ಪುತ್ರ
ವಿವರವಾದ ಪರಿಚಯ
ಜನ್ಮ ದಿನಾಂಕ ಮತ್ತು ಸ್ಥಳ : ೮-೩-೧೯೭೯ – ಫಾಲ್ಗುಣ ಶುದ್ಧ ದಶಮಿ (ನವಮಿಯ ರಾತ್ರಿ) (ಹೋಳಿ ಹುಣ್ಣಿವೆಯ ಮೊದಲು) (ಅಂದು ತಂದೆ ರಾಘವೇಂದ್ರನ ಅತ್ತ್ಯಾ ಸುಬ್ಬಕ್ಕನ ವರ್ಷಾಂತಿಕ ಇದ್ದಿತು).
ಶಿಕ್ಷಣ : ಬೆಳಗಾವಿಯ ಕೋನವಾಳಗಲ್ಲಿಯಲ್ಲಿನ ೬ ನಂಬರಿನ ಸರಕಾರಿ ಕನ್ನಡ ಪ್ರಾಥಮಿಕ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ, ನಂತರ ಬಿ.ಕೆ. ಮಾಡೆಲ್ ಹಾಯಸ್ಕೂಲಿನಲ್ಲಿ ಮಾಧ್ಯಮಿಕ ಶಿಕ್ಷಣ. ೧೯೯೪ ರ ಎಪ್ರಿಲ್ ದಲ್ಲಿ ಎಸ್.ಎಸ್.ಎಲ್.ಸಿ ಪಾಸಾಗಿ, ಪದವಿ ಪೂರ್ವ ಶಿಕ್ಷಣವನ್ನುಬೆಳಗಾವಿ – ಟಿಳಕವಾಡಿಯಲ್ಲಿನ ಜಿ.ಎಸ್.ಎಸ್. (ಗೋವಿಂದರಾಮ ಸಕ್ಸೇರಿಯಾ ಸಾಯನ್ಸ ಕಾಲೇಜ) ಕಾಲೇಜಿನಲ್ಲಿ ಮುಗಿಸಿ, ನೆಹರೂ ನಗ ರದಲ್ಲಿನ (ಬೆಳಗಾವಿ) ಆರ್.ಎನ್. ಶೆಟ್ಟಿ ಪಾಲಿಟೆಕ್ನಿಕ್ ದಲ್ಲಿ ಇಲೆಕ್ಟ್ರೊನಿಕ್ಸ್ ಎಂಡ್ ಟೆಲೆಕಮ್ಯೂನಿಕೇಶನ್ಸ ದಲ್ಲಿ ಡಿಪ್ಲೋಮಾ ಪದವಿಯನ್ನು ೨೦೦೧ ರಲ್ಲಿ ಪಡೆದುದು.
ಉಪನಯನ : ಕೃಷ್ಣ ಮತ್ತು ಅವನ ತಮ್ಮ ವಿನಾಯಕ ಇವರಿಬ್ಬರ ಉಪನಯನ ಒಂದೇದಿನ – ರವಿವಾರ, ೨೮-೧-೧೯೯೦ರಂದು ಅಂದರೆ ಶಾಲಿವಾಹನ ಶಕೆ ೧೯೧೧, ಶುಕ್ಲನಾಮ ಸಂವತ್ಸರ, ಮಾಘ ಶುದ್ಧ ದ್ವಿತೀಯಾ ೧೧.೪೫ ಗಂಟೆಗೆ, ಟಿಳಕವಾಡಿಯ, ವ್ಯಾಕ್ಸಿ ನ್ ಡಿಪೋದಲ್ಲಿನ ಶ್ರೀ ರಾಘವೇಂದ್ರಸ್ವಾಮಿ ಮಠದಲ್ಲಿ ನೆರವೇರಿತ್ತು.
ವೃತ್ತಿ ಜೀವನ : ಪ್ರಾರಂಭದಲ್ಲಿ ಸರ್ವೀಸ್ ಇಂಜಿನೀಯರ ಎಂದು ಬೆಳಗಾವಿಯಲ್ಲಿ —— ಕಂಪನಿಯಲ್ಲಿ —— ವರ್ಷಗಳ ಕಾಲ ಕೆಲಸ ಮಾಡಿದ ನಂತರ ಈಗ ——ರಿಂದ ವಿಡಿಯೊಕಾನ ಟೀವಿ ಕೇಬಲ್ ಸಂಪರ್ಕ- d2h ದ ಬೆಳಗಾವಿ ನಗರದ ವಿತರಕ ಎಂದು ಏಜೆನ್ಸಿ ತೆಗೆದುಕೊಂಡು ಸ್ವತಂತ್ರ ವ್ಯವಸಾಯವನ್ನು ನಿರ್ವಹಿಸುತ್ತಿದ್ದಾರೆ.
ವಿವಾಹ : ೪-೨-೨೦೦೭ ರಂದು (ಮಧ್ಯಾಹ್ನ ೧೨:೧೫ಕ್ಕೆ) ಅಂದರೆ ಮಾಘ ಕೃಷ್ಣ ದ್ವಿತೀಯಾದಂದು ಬ್ಯಾಂಕ ಆಫ ಮಹಾರಾಷ್ಟ್ರದ ಬೆಳಗಾವಿ ಶಾಖೆಯಲ್ಲಿ ಮ್ಯಾನೇಜರ ಆಗಿ ಸ್ವೇಚ್ಛಾ ನಿವೃತ್ತಿ ತೆಗೆದುಕೊಂಡಿದ್ದ ಅಶೋಕ ಅಚ್ಯುತರಾವ ನಾಡಗೌಡಾ ಮತ್ತು ರೇಖಾ ಅವರ ಪುತ್ರಿ ಸುಚೇತಾಳೊಂದಿಗೆ, ಬೆಳಗಾವಿಯಲ್ಲಿಯೆ ಶಾಸ್ತ್ರಿ ನಗರದ ಗುಜರಾತ ಭವನ ಮಂಗಲ ಕಾರ್ಯಾಲಯ, ಜರುಗಿದುದು. ನಂತರ ಸುಚೇತಾಳಿಗೆ ಅತ್ತೆಮನೆಯಲ್ಲಿ ಕಲ್ಪಿತಾ ಎಂದು ಹೆಸರನ್ನಿಡಲಾಯಿತು.
ಮಕ್ಕಳು : ಅವನೀಶ – ಹುಟ್ಟಿದ್ದು ೧೪ ಮಾರ್ಚ೨೦೦೯ ರಂದು – ಫಾಲ್ಗುಣ ಕೃಷ್ಣ ತೃತೀಯಾ (ವಾದಿರಾಜರ ಆರಾಧನಾ ದಿನ).
ಅನೀಶಾ –