ರಾಘವೇಂದ್ರ
ರಾಘವೇಂದ್ರ | ಹುಟ್ಟಿದ ದಿನಾಂಕ: | ||
ತಂದೆ: ಕೃಷ್ಣಾಜಿ | ತಾಯಿ: | ||
ಮಕ್ಕಳು: ಕೃಷ್ಣ, ವಿನಾಯಕ | |||
ಒಡಹುಟ್ಟಿದವರು: ಪ್ರೇಮಾ, ಪ್ರಮೋದ | Branch: 3 | Generation: 8 |
ವ್ಯಕ್ತಿ ಚಿತ್ರ
ದಿ. ರಾಘವೇಂದ್ರ ಕೃಷ್ಣ ಮಂಗಳವೇಢೆ.
ಮುರಗೋಡದ ಅನಂತಾಚಾರ್ಯ ರ ಪ್ರಪೌತ್ರ, ಮುರಗೋಡದ ಮತ್ತು ಕೊನೆಯ ದಿನಗಳನ್ನು ಬೆಳಗಾವಿಯಲ್ಲಿ ಕಳೆದ ರಾಮಾಚಾರ್ಯರ ಪೌತ್ರ, ಬೆಳಗಾವಿಯಲ್ಲಿದ್ದ ಕೃಷ್ಣಾಜಿ ಅವರ ಪುತ್ರ
ಕಿರು ಪರಿಚಯ
ಬೆಳಗಾವಿಯ ಉದ್ಯಮಬಾಗದಲ್ಲಿನ ವಿನ್ಮಾರ್ ಎಂಬ ಕಾರಖಾನೆಯಲ್ಲಿ ಅಕೌಂಟಂಟ ಎಂದು ಕೆಲವರ್ಷ ಕೆಲಸ ಮಾಡಿ ಪಾರ್ಶ್ವವಾಯುವಿನ ಆಘಾತಕ್ಕೊಳಗಾದ ಮೇಲೆ ನಿವೃತ್ತಿ ಪಡೆದು ವಿಶ್ರಾಂತ ಜೀವನ ನಡೆಸುತ್ತಿರುವಾಗ, ನರದೌರ್ಬಲ್ಯ ಉಲ್ಬಣಗೊಂಡು ತೀರಿಕೊಂಡುದು.ಮೂರನೆ ಮಹಡಿ, ದತ್ತ ಕೃಪಾ, ಶ್ರೀ ವಿವೇಕಾನಂದ ನಗರ, ಟಿಳಕವಾಡಿ – ಬೆಳಗಾವಿ ಈ ವಿಳಾಸದಲ್ಲಿ ಇದ್ದರು.
ಪತ್ನಿ : ಮಮತಾ (ಶಾಂತಾ ಎಂಬ ತೌರು ಮನೆಯ ಹೆಸರಿನಿಂದಲೆ ಎಲ್ಲರಿಗೂ ಪರಿಚಿತ)
ಮಕ್ಕಳು :
ಕೃಷ್ಣ – d2h – ವಿಡಿಯೋಕಾನ್ ಟೀವಿ ಕೇಬಲದ ಬೆಳಗಾವಿ ನಗರ ವಿತರಕ, ವಿವಾಹಿತ, ಇರುವದು ಬೆಳಗಾವಿಯಲ್ಲಿ.
ವಿನಾಯಕ – Event management, ವಿವಾಹಿತ, ಇರುವದು ಬೆಳಗಾವಿಯಲ್ಲಿ.
ವಿವರವಾದ ಪರಿಚಯ
ಜನ್ಮ ದಿನಾಂಕ ಮತ್ತು ಸ್ಥಳ : ೨೨ ಸಪ್ಟೆಂಬರ ೧೯೫೨, ಬೆಳಗಾವಿಯಲ್ಲಿ.
ಮರಣ : ೨೧ ಅಗಸ್ಟ ೨೦೧೪ (ಜಯನಾಮ ಸಂವತ್ಸರದ ಶ್ರಾವಣ ಕೃಷ್ಣ ಪಕ್ಷ ಏಕಾದಶಿ-ಬೆಳಗು ಹರಿಯುವ ಸುಮಾರು ಎರಡು ತಾಸು ಮೊದಲು)
ಶಿಕ್ಷಣ : ಮಾಧ್ಯಮಿಕ ಶಿಕ್ಷಣ – ಬೆಳಗಾವಿಯ ಬೆನನ್ ಸ್ಮಿಥ್ ಹಾಯಸ್ಕೂಲ್ . ಎಸ್.ಎಸ್.ಎಲ್.ಸಿ ಪರೀಕ್ಷೆಯನ್ನು ಪಾಸಾದುದು ಬೈಲಹೊಂಗಲ ಕೇಂದ್ರದಿಂದ.
ಉಪನಯನ : ತಿರುಪತಿ ಕ್ಷೇತ್ರದಲ್ಲಿ ಮುಂಜಿವೆಯಾಗಿತ್ತು (ಎಂದು ಅತ್ತ್ಯಾ- ಅಂದರೆ ಕೃಷ್ಟಕ್ಕ- ರಾಘವೇಂದ್ರನ ಅಜ್ಜಿ ಅಂದರೆ ತಾಯಿ ಮೈನಕ್ಕನ ತಾಯಿ ಹೇಳುತ್ತಿದ್ದರು ಎಂದು ಹೆಂಡತಿ ಶಾಂತಾ ಹೇಳಿದ್ದು. ಇದು ನಡೆದದ್ದು ಯಾವ ವರ್ಷ ಎಂಬುದು ನೆನಪು ಇಲ್ಲ.
ವೃತ್ತಿ ಜೀವನ ಮತ್ತು ಕೊನೆಯ ದಿನಗಳು : ಬೆಳಗಾವಿಯಲ್ಲಿ ಒಂದೆರಡು ಖಾಸಗಿ ಉದ್ಯಮಿಗಳ ಹತ್ತಿರ, ಅದರಲ್ಲಿಯೂ ಹೆಚ್ಚಿನ ಅವಧಿ – ಉದ್ಯಮ ಬಾಗದಲ್ಲಿನ ವಿನ್ ಮಾರ ಕಂಪನಿಯಲ್ಲಿ ಅಕೌಂಟಂಟ ಎಂದು ಕೆಲಸ ಮಾಡಿ ಪಾರ್ಶ್ವವಾಯುವಿನ ಆಘಾತಕ್ಕೆ ಒಳಗಾದಮೇಲೆ, ಅನಿವಾರ್ಯವಾಗಿ ಕೆಲಸವನ್ನು ಬಿಡಬೇಕಾಗಿ ಬಂದು, ವಿಶ್ರಾಂತ ಜೀವನವನ್ನು ನಡೆಸುತ್ತ ಇರುವಾಗಲೆ, ದಿನಗಳೆದಂತೆ ನರದೌರ್ಬಲ್ಯ ಉಲ್ಬಣಗೊಳ್ಳುತ್ತ ಹೋದುದು. ಕೊನೆಕೊನೆಗೆ ಹೊರಗಿನ ಅಡ್ಡಾಟ ನಿಂತುಹೋಗಿ, ಹಸಿವು ಊಟ ಕಡಿಮೆಯಾಗಿ, ಮಾತನಾಡುವ ಶಕ್ತಿಯನ್ನೂ ಕಳೆದುಕೊಂಡು – ಈ ಸ್ಥಿತಿಯಲ್ಲಿ ಹಾಗೂ ಹೀಗೂ ಮೂರು ನಾಕು ತಿಂಗಳು ಕಳೆದ ಮೇಲೆ ಒಂದುದಿನ ನಿದ್ದೆಯಲ್ಲಿಯೆ ಕೊನೆ ಉಸಿರು ಎಳೆದುದು.
ವಿವಾಹ : ೧೯೭೮ ನೆ ಇಸವಿಯ ಮಾರ್ಚ ತಿಂಗಳ ೩ನೆ ತಾರೀಖು – ಮಾಘ ಶುದ್ಧ ನವಮಿಯ ದಿನದಂದು (ಈ ದಿನ ದಾಸ ನವಮಿ ಎಂದು ಪ್ರಸಿದ್ಧ,- ವಸಂತ ಪಂಚಮಿಯ ನಂತರ ಬರುವ ನವಮಿ) ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ದೊಡ್ಡವಾಡ ಗ್ರಾಮದಲ್ಲಿ, ಆ ಊರಿನ ವೆಂಕಟೇಶ ತ್ರ್ಯಂಬಕ (ಜೋಶಿ) ತೇಗೂರ ಮತ್ತು ಪದ್ಮಾವತಿ ಇವರ ಜ್ಯೇಷ್ಠ ಪುತ್ರಿ ಶಾಂತಾ ಇವಳೊಡನೆ ನಡೆದುದು. ಅತ್ತೆಯ ಮನೆಯಲ್ಲಿ ಮಮತಾ ಎಂದು ಹೆಸರು ಇಟ್ಟುದು. ಆದರೆ, ತೌರುಮನೆಯ ಶಾಂತಾ ಎಂಬ ಹೆಸರಿನಿಂದಲೆ ಎಲ್ಲರಿಗೂ ಪರಿಚಿತ.
ಶಾಂತಾಬಾಯಿ ಹುಟ್ಟಿದ್ದು : ಮೇ ೭, ೧೯೫೮ – ವೈಶಾಖ ಶುದ್ಧ ಪಂಚಮಿ (ಆದರೆ ಶಾಲೆಯಲ್ಲಿ ದಾಖಲಾದಂತೆ ಹುಟ್ಟಿದ ವರ್ಷ – ೧೯೫೮).
ಶಾಂತಾಬಾಯಿಯ ಶಿಕ್ಷಣ ಎ.ಎಸ್.ಎಲ್.ಸಿ ಯ (ಎಪ್ರಿಲ್ ೧೯೭೪) ನಂತರ, ಕರ್ನಾಟಕದ ಬೋರ್ಡ ಆಫ್ ಟೆಕ್ನಿಕಲ್ ಎಕ್ಸಾಮಿನೇಶನ್ದವರ ಕ್ರ್ಯಾಫ್ಟ ಕೋರ್ಸದಲ್ಲಿ ಹೊಲಿಗೆ ವಿಷಯದ ಪರೀಕ್ಷೆ (ಮೇ ೧೯೭೭) ನಂತರ ಟಿ.ಸಿ ಎಚ್ ವರೆಗೆ ನಡೆದಿತ್ತಾದರೂ, ಒಂದೊ ಎರಡೊ ವಿಷಯಗಳು ಉಳಿದಿದ್ದರಿಂದ ಮತ್ತು ಮದುವೆಯ ನಂತರ ಆ ಪರೀಕ್ಷೆಯನ್ನು ಪೂರ್ಣಗೊಳಿಸಲು ಅವಕಾಶ ಮತ್ತು ಅನುಕೂಲವನ್ನು ಯಾರೂ ಒದಗಿಸಿಕೊಡಲಿಲ್ಲವಾಗಿ, ಪ್ರಾಥಮಿಕ ಶಾಲಾ ಶಿಕ್ಷಿಕೆಯಾಗಿ ಕೆಲಸ ಮಾಡುವ ಅವಕಾಶ ತಪ್ಪಿ ಹೋದದ್ದು.
ಆದರೂ ಏನಾದರೂ ಒಂದು ವ್ಯವಸಾಯದಲ್ಲಿ ತೊಡಗಿರಬೇಕೆಂಬ ಮನದಲ್ಲಿನ ಒತ್ತಡ, ಕೆಲ ವಸ್ತುಗಳನ್ನು ಮನೆಯಲ್ಲಿಯೆ ತಂದು ಇಟ್ಟುಕೊಂಡು ಮಾರಾಟ ಮಾಡುವ ಕೆಲಸದಿಂದ ಪ್ರಾರಂಭವಾಗಿ, ಪೋಸ್ಟಲ್ ಏಜೆನ್ಸಿ ಪಡೆದು ಕೆಲವು ದಿವಸ ಆ ಕೆಲಸ ಮಾಡುತ್ತ, ಕಾರಣಾಂತರದಿಂದ ಅದನ್ನೂ ಬಿಟ್ಟು, ಹಿರಿಯ ಮಗ ಕೃಷ್ಣನ ನೆರವಿನಿಂದ, ಅವನ ಗೆಳೆಯ ರಾಘವೇಂದ್ರ ಎನ್. ರಾವ ಅವರ ಜೊತೆ ಪಾಲುದಾರಿಕೆಯಲ್ಲಿ – ಶ್ರೀ ಹರಿ ಪ್ರಾವಿಜನಲ್ ಸ್ಟೋರ್ಸ ಎಂಬ ಹೆಸರಿನ ಒಂದು ಕಿರಾಣಿ ಅಂಗಡಿಯನ್ನು ನಡೆಸ ಹತ್ತಿದರು. ಅದು ಈಗ ತಾವಿರುವ, ಟಿಳಕವಾಡಿಗೆ ಹತ್ತಿರುವ ಶ್ರೀ ವಿವೇಕಾನಂದ ನಗರದಲ್ಲಿನ ಅಪಾರ್ಟಮೆಂಟಿನ ಮನೆಯ ಹತ್ತಿರದ ಸಮರ್ಥ ಅಪಾರ್ಟಮೆಂಟಿನ – ನೆಲ ಮಹಡಿಯ ೪ ನೆ ಕ್ರಮಾಂಕದ ಸ್ಥಳದಲ್ಲಿ ಇದ್ದಿತು, ೨೦೦೩ರ ಅಗಸ್ಟ ೩ ರಂದು ಪ್ರಾರಂಭವಾಗಿದ್ದ ಈ ಅಂಗಡಿ ಮುಂದೆ, ಪಾಲುದಾರ ರಾಘವೇಂದ್ರ ರಾವ ಅದನ್ನು ಬಿಟ್ಟು ಹೋದ ನಂತರ —— ರಲ್ಲಿನಿಂತುಹೋಯಿತು.
ಮಕ್ಕಳು :
ಹಿರಿಯ ಮಗ ಕೃಷ್ಣ ಹುಟ್ಟಿದ್ದು : ೮-೩-೧೯೭೯- ಫಾಲ್ಗುಣ ಶುದ್ಧ ದಶಮಿ (ನವಮಿಯ ರಾತ್ರಿ) (ಹೋಳಿ ಹುಣ್ಣಿವೆಯ ಮೊದಲು) (ಆ ದಿನ, ತಂದೆ ರಾಘವೇಂದ್ರನ ಅತ್ತ್ಯಾ ಸುಬ್ಬಕ್ಕನ ವರ್ಷಾಂತಿಕವಿದ್ದಿತು )
ಕಿರಿಯ ಮಗ ವಿನಾಯಕ ಹುಟ್ಟಿದ್ದು : ೧೧-೫-೧೯೮೨- ವೈಶಾಖ ಕೃಷ್ಣ ತೃತೀಯಾ
ಪತ್ನಿಯ ತೌರು ಮನೆ ಬಗೆಗಿನ ಇನ್ನೂ ಕೆಲ ವಿವರಗಳು : ಶಾಂತಾಬಾಯಿಯ ಅಜ್ಜ ತ್ರ್ಯಂಬಕ ತೇಗೂರ ಅವರಿಗೆ ಇಬ್ಬರು ಮಕ್ಕಳು – ನಾಗೇಶ (ತೀರಿಕೊಂಡದ್ದು ೨೦೦೧ ರಲ್ಲಿ) ಮತ್ತು ವೆಂಕಟೇಶ (ತೀರಿಕೊಂಡದ್ದು ೨೦೦೩ ರಲ್ಲಿ). ಇವರಲ್ಲಿ ಎರಡನೆಯವರಾದ ವೆಂಕಟೇಶ ಮತ್ತು ಅವರ ಪತ್ನಿ ಪದ್ಮಾವತಿ (ತೀರಿಕೊಂದದ್ದು ೨೦೦೧ ರಲ್ಲಿ) ಅವರಿಗೆಮೂವರು ಮಕ್ಕಳು – ೧) ಶಾಂತಾ ೨) ರಮಾ ೩) ತ್ರ್ಯಂಬಕ
ರಾಘವೇಂದ್ರ ಅವರ ಆಸ್ತಿ ಪಾಸ್ತಿಯ ಬಗೆಗೆ : ತಾನು ಹುಟ್ಟಿಬೆಳೆದಿದ್ದ – ರಾಮಲಿಂಗಖಿಂಡ ಗಲ್ಲಿ ಅಶೋಕ ಚೌಕದ ೧೨೭೩ನೆ ನಂಬರ ಮನೆಯನ್ನು, ತನ್ನ ಕಿರಿಯ ಸೋದರ ಪ್ರಮೋದನ ಮರಣಾನಂತರ —-ರಲ್ಲಿ ಶಶಾಂಕ ಮೋಹಿತೆ ಅವರಿಗೆ ಮಾರಿ, ಬಂದುದರಲ್ಲಿ ಪ್ರಮೋದನ ವಿಧವಾ ಪತ್ನಿ ರೋಹಿಣಿಗೆ ಅವಳ ಪಾಲಿನ ಅರ್ಧಕೊಟ್ಟು, ತನ್ನ ಪಾಲಿನ ಹಣದಲ್ಲಿ ಟಿಳಕವಾಡಿಯ ಪ್ರಸಿದ್ಧ ಐತಿಹಾಸಿಕ ಸ್ಥಳ ಕಾಂಗ್ರೆಸ್ ಬಾವಿಯ (ಈಗ ಅದನ್ನು ವೀರ ಸೌಧ ಎಂದು ನಾಮಕರಣ ಮಾಡಿದ್ದಾರೆ) ಹತ್ತಿರದ ವಿವೇಕಾನಂದ ನಗರದ ದತ್ತ ಕೃಪಾ ಅಪಾರ್ಟಮೆಂಟದಲ್ಲಿನ ಮೂರನೆ ಮಹಡಿಯ ಮೇಲಿನ ಒಂದು ಫ್ಲ್ಯಾಟ್ ಖರೀದಿಸಿ ಅಲ್ಲಿಯೆ ಇರುತ್ತಿದ್ದಾರೆ.
ವಿವೇಕಾನಂದ ನಗರದ ಈ ಮನೆಯ ವಾಸ್ತು ಶಾಂತಿ ಮತ್ತು ಗೃಹ ಪ್ರವೇಶ ೧೯೯೮ರ ಫೆಬ್ರುವರಿ ೬ ರಂದು – ಮಾಘ ಶುದ್ಧ ದಶಮಿ (ಮಧ್ವ ನವಮಿಯ ಮರುದಿನ). ಈ ಫ್ಲ್ಯಾಟನ್ನು ತೆಗೆದುಕೊಳ್ಳುವ ಮುಂಚೆ ಆಂಜನೇಯ ನಗರದ ಕೆ.ಎಮ್.ಎಫ್ ಹಾಲಿನ ಡೇರಿ ಹತ್ತಿರದ ಫ್ಲ್ಯಾಟ್ ಒಂದರಲ್ಲಿ ಸುಮಾರು ೬-೭ ತಿಂಗಳಕಾಲ ಬಾಡಿಗೆ ಇದ್ದು ಅಲ್ಲಿ ಗೌರಿ, ಗಣೇಶನ ಹಬ್ಬ ಮತ್ತು ಚಾತುರ್ಮಾಸ್ಯ ಗಳನ್ನೆಲ್ಲ ಕಳೆದಾದ ಮೇಲೆ ಹೊಸ ಮನೆಗೆ ಸ್ಥಳಾಂತರಗೊಂಡುದು.
೧೯೩೦ರಲ್ಲಿ ನನ್ನ ತಂದೆಗೆ ಬೆಳಗಾವಿಯಲ್ಲಿ ಕೆಲಸ ಸಿಕ್ಕನಂತರ, ತಮ್ಮ ಉಳಿದ ಮಕ್ಕಳ ಶಿಕ್ಷಣಕ್ಕಾಗಿ ಅಜ್ಜ ರಾಮಾಚಾರ್ಯರು ಹಿರಿಯ ಮಗನ ಜೊತೆಗೆ ಬೆಳಗಾವಿಗೆ ವಲಸೆ ಬಂದು- ಅಲ್ಲಿ ಇಲ್ಲಿ ಸುಮಾರು ಹತ್ತು ವ₹ರ್ಷಗಳ ಕಾಲ ಬಾಡಿಗೆ ಮನೆಗಳಲ್ಲಿ ಇದ್ದು- ೧೯೪೦ರ ಆಸುಪಾಸಿನಲ್ಲಿ ರಾಮಲಿಂಗ ಖಿಂಡ ಗಲ್ಲಿಯಲ್ಲಿ ಈ ಮನೆಯನ್ನು ಹಿರಿಯ ಮಗನ ನೆರವಿನೊಂದಿಗೆ ಖರೀದಿಸಿದ್ದರು. ಮುಂದೆ ಸುಮಾರು ಐದು ದಶಕಗಳ ಕಾಲ ಇದು ಕಾಯಮ್ಮಾಗಿ ಅವರ ಕೊನೆಯ ಪುತ್ರ ಕೃಷ್ಣಾಜಿ, ನಂತರ ಅವರ ಮಕ್ಕಳು- ಪ್ರೇಮಾ, ರಾಘವೇಂದ್ರ ಮತ್ತು ಪ್ರಮೋದ ಇವರ ಕಾಯಂ ವಾಸಸ್ಥಾನವಾಗಿದ್ದಿತು. ಹಾಗೆಯೆ, ರಾಮಾಚಾರ್ಯರ ಉಳಿದ ಮಕ್ಕಳು, ಗೋವಿಂದ ಕಾಕಾ, ಅನಂತಣ್ಣ, ಪಾಂಡೂಕಾಕಾ ಇವರ ಮನೆಯಾಗಿಯೂ ಇದ್ದಿತು – ಅವರು ತಮ್ಮ ಪೋಲೀಸ ಖಾತೆಯ ನೌಕರಿಯಲ್ಲಿ ಬೆಳಗಾವಿಗೆ ಬದಲಿಯಾಗಿ ಬಂದಾಗಲೆಲ್ಲ.
ಆದರೆ ಹಿರಿಯ ಮಗ ರಂಗನಾಥ ಮಾತ್ರ ಆ ಮನೆಯಲ್ಲಿದ್ದುದು ತೀರ ಅಲ್ಪ ಅವಧಿಗೆ. ಮನೆಯ ಖರೀದಿಯ ನಂತರ ಅವರು ದತ್ತಕ ಹೋಗಿದ್ದರಿಂದ, ಆ ಮನೆಯ ಮೇಲಿನ ತಮ್ಮ ಅಧಿಕಾರವನ್ನು ಕಳೆದುಕೊಂಡು ಪ್ರತ್ಯೇಕ ವಾಗಿ ಇರಹತ್ತಿದರು.
ಯಾತ್ರೆ ಮತ್ತು ಪ್ರವಾಸ : ಮದುವೆಯಂತಹ ಮಂಗಲ ಕಾರ್ಯಗಳು ಮನೆಯಲ್ಲಿ ಆದಾಗ ಹೆಚ್ಚು ತದಮಾದದೆ ಆದಷ್ಟು ಬೇಗ ಕುಟುಂಬ ಸಹಿತ ಪಂಢರಪುರಕ್ಕೆ ಹೋಗಿ ಕುಲದೆವತಾ ದರ್ಶನ ಮಾಡಿಕೊಂಡು ಬರುವದು ಮನೆತನದ ಸಂಪ್ರದಾಯವಾದರೂ ಹಾಗೆ ಮಾಡಲು ಸಾಧ್ಯವಾಗದೆ ಹೋದ ಉದಾಹರಣೆಗಳೂ ಮಂಗಳವೇಢೆ ಬಳಗದಲ್ಲಿ ಸಾಕಷ್ಟು ಇದ್ದೇ ಇವೆ. ಅಂತಹವರ ಯಾದಿಯಲ್ಲಿ ಸೇರಿದವರು ಇವರು. ವಿವಾಹವಾದ (೧೯೭೮) ಮೇಲೆ ಒಂದಿಲ್ಲೊಂದು ಕಾರಣದಿಂದಾಗಿ ಅನೇಕ ವರ್ಷ ಆ ಯೋಗ ಬಂದಿರಲೇ ಇಲ್ಲ. ೧೭ ವರ್ಷಗಳ ಸುದೀರ್ಘ ಕಾಲಾಂತರದ ನಂತರ, ಕೊನೆಗೂ ಪಾಂಡುರಂಗನ ದರ್ಶನದ ಆ ಸುಯೋಗ, ಆ ಅವಕಾಶ – ಕಕ್ಕನ ಮಗ ತಮ್ಮನಾದ ಮಾಧವನ ಮಗ ಪವನನ ಮುಂಜಿವೆಯ ಸಂದರ್ಭದ ರೂಪದಲ್ಲಿ – ಒದಗಿ ಬಂದಿತು.
ಮುಂಜಿವೆ ಇದ್ದುದು ಬಿಜಾಪುರದಲ್ಲಿ, ಮೇ ೭, ೧೯೯೫ (?) ರಂದು. ಬಳಗದವರೆಲ್ಲ ಅಲ್ಲಿ ಸೇರಿಯೆ ಇದ್ದರಲ್ಲದೆ ಹೇಗೂ, ಕಾರ್ಯದ ನಂತರ ಮಾಧವ ಅವರ ಕುಟುಂಬಕ್ಕೂ ಪಂಢರಪುರಕ್ಕೆ ಹೋಗಿಬರಬೇಕಿದ್ದಿತು. ಮತ್ತು ಬೆಳಗಾವಿಯವರಿಗೆ – ಬಿಜಾಪುರದಿಂದ ಅಲ್ಲಿಗೆ ಹೋಗುವದೆಂದರೆ ಅರ್ಧ ದಾರಿಯ ಉಳಿತಾಯ. ಹೀಗಾಗಿ ಅವರ ಜೊತೆಗೇ ರಾಘವೇಂದ್ರ – ಶಾಂತಾ ದಂಪತಿಗಳೂ ಪಂಢರಪುರಕ್ಕೆ ಮೊದಲನೆ ಸಲ ಹೋಗಿ ಬಂದರು.
ಸುದೈವದಿಂದ, ಇಂತಹ ಎರಡನೆ ಅವಕಾಶ ಎರಡೇ ವರ್ಷಗಳ ನಂತರ – ಬಹುಶಃ ೧೯೯೭ ರ ಡಿಸೆಂಬರಿನಲ್ಲಿ ಮತ್ತೆ ಒದಗಿ ಬಂದಿತು. ರಾಘವೇಂದ್ರ ಅವರ ತೀರಿಕೊಂಡ ತಂಗಿ ಪ್ರೇಮಾನ ಗಂಡ – ಚಿಟ್ನೀಸ ಅವರಿಗೆ ತುಳಜಾಪುರ, ಗಾಣಗಾಪುರಗಳಿಗೆ ಹೋಗುವದಿತ್ತು. ಅಲ್ಲಿಂದ ಪಂಢರಪುರ ದೂರವೇನಲ್ಲ. “ಗಾಡಿ ಮಾಡಿಕೊಂಡು ಹೋಗಿ ಬರೋಣ, ಬರುವಿರಾ ನಮ್ಮ ಜೊತೆ” ಎಂದು ಕೇಳಿದಾಗ ಸಕಾರಾತ್ಮಕವಾಗಿ ಉತ್ತರಿಸಲು ಕಷ್ಟವೆನಿಸುವಂತಹದೇನೂ ಇರಲಿಲ್ಲ. ಸರಿ, ಪಂಢರಪುರದ ಎರಡನೆ ಯಾತ್ರೆ ಆಯಿತು.
ಆದರೆ ಅಂತಹ ಮೂರನೆ ಸಂದರ್ಭ ಒದಗಿ ಬರಲು ಮತ್ತೆ ಹತ್ತು ವ₹ರ್ಷ ಕಾಯಬೇಕಾಯಿತು. ಇಬ್ಬರೂ ಮಕ್ಕಳ -( ಕೃಷ್ಣ ಮತ್ತು ವಿನಾಯಕ) ಮದುವೆ ೨೦೦೭ರ ಫೆಬ್ರುವರಿಯ ೪ ಮತ್ತು ೬ನೆ ತಾರೀಖು ನಡೆದ ಮೇಲೆ, ೮ನೆ ತಾರೀಖಿಗೆ – ಹೊಸ ಮದುಮಕ್ಕಳೊಡನೆ ಕುಲದೇವರ ದರ್ಶನಕ್ಕಾಗಿ ಹೋಗಿಬಂದರು.
ನಂತರದ ಅಂದರೆ ನಾಕನೆ ಬಾರಿಯ ಯಾತ್ರೆ – ಕಿಟ್ಟೂ ಮತ್ತು ವಿನೂ ಇಬ್ಬರಿಗೂ ಮಕ್ಕಳಾದಮೇಲೆ (ಆಥರ್ವ ಮತ್ತು ಅವನೀಶ) (ಮೊದಲು ಹುಟ್ಟಿದವ ವಿನಾಯಕನ ಮಗ ಅಥರ್ವ ಮುಂದೆ ಆರು ತಿಂಗಳ ನಂತರ ಹುಟ್ಟಿದವ ಕೃಷ್ಣನ ಮಗ ಅವನೀಶ) – ೨೦೧೦ರ ಜೂನಿನಲ್ಲಿ (?).
ಇದಿಷ್ಟು ಕುಲದೇವರಿಗೆ ಹೋಗಿ ಬಂದ ಕಥೆ.
ರಾಘವೇಂದ್ರ-ಶಾಂತಾ ಇವರ ಭಾಗ್ಯದಲ್ಲಿ ಬದರೀ ಯಾತ್ರೆಯೂ ಇದ್ದಿತಾಗಿ, ಪಂಢರಪುರಕ್ಕೆ ನಾಕನೆಯ ಮತ್ತು ಕೊನೆಯ ಬಾರಿ ಹೋಗಿಬಂದ ವರ್ಷವೇ, ಅಂದರೆ ೨೦೧೦ ರ ಅಕ್ಟೋಬರದಲ್ಲಿ (ಬಹುಶಃ ೧೯ ರಂದು ಬೆಳಗಾವಿಯನ್ನು ಬಿಟ್ಟರೆಂದು ಕಾಣುತ್ತದೆ.) ಬೆಳಗಾವಿಯ ಅನಗೋಳದ ರಾಜೀವ ಜೋಶಿಯವರು ವ್ಯವಸ್ಥೆಗೊಳಿಸಿದ್ದ ಬದರೀ ಯಾತ್ರೆಯಲ್ಲಿ ಸೇರಿ – ಒಟ್ಟು ೬೫ ಜನ – ಹೊಗಿ ಬಂದರು.
ಇವರ ಪಾಲಿಗೆ ೨೦೧೦ ನೆ ಇಸವಿ ಇಂತಹ ದೊಡ್ಡ ಯಾತ್ರೆಗಳಿಗೆ ಮೀಸಲಾಗಿದ್ದಿತೇನೋ ಎನಿಸುತ್ತದೆ. ಏಕೆಂದರೆ ಆ ವರ್ಷದ ಆರಂಭವೇ- ಜನೆವರಿ ೨೮ ರಂದು, ತಿರುಪತಿಯ ಯಾತ್ರೆ ಕೈಗೊಳ್ಳುವ ಮೂಲಕ -ಶುರುವಾಗಿದ್ದಿತು. ಆಗ ವೆಂಕಪ್ಪನ ದರುಶನಕ್ಕೆ ಹೋಗಿ ಬಂದವರು ರಾಘವೇಂದ್ರ – ಶಾಂತಾ, ಕೃಷ್ಣ – ಕಲ್ಪಿತಾ ಮತ್ತು ಅವನೀಶ.
ಬದರೀ ಯಾತ್ರೆಯ ನಂತರ ಅದೇವರ್ಷ ಮೇ ತಿಂಗಳಲ್ಲಿ ಸ್ವಾದಿಗೂ ಹೋಗಿಬರುವ ಯೋಗವಿದ್ದಿತು, ಮಿತ್ರ ಏ.ಆರ್. ಕುಲಕರ್ಣಿಯ ಮೊಮ್ಮಗನ ಮುಂಜಿವೆ ಅಲ್ಲಿ ಇದ್ದಿತಾಗಿ – ರಾಘವೇಂದ್ರ ಮತ್ತು ಶಾಂತಾ ಇಬ್ಬರೂ ಅಲ್ಲಿಗೆ ಹೋಗಿಬಂದರು.
ಈ ದಂಪತಿಗಳು ತಮ್ಮ ಇಬ್ಬರು ಗಂಡುಮಕ್ಕಳು, ಸೊಸೆಯಂದಿರು ಮತ್ತು ಮೊಮ್ಮಕ್ಕಳನ್ನು ಕೂಡಿಕೊಂಡು ಉಡುಪಿ, ಕುಕ್ಕೆ ಸುಬ್ರಹ್ಮಣ್ಯ ಮತ್ತು ಧರ್ಮಸ್ಥಳ ಗಳಿಗೂ ಹೋಗಿಬಂದಿದ್ದಿದೆ. ವರ್ಷ (?). ಈ ಯಾತ್ರೆಯಲ್ಲಿ ಕುಕ್ಕೆ ಸುಬ್ರಹ್ಮಣ್ಯದಲ್ಲಿ ಅಥರ್ವ ಮತ್ತು ಅವನೀಶರ ತುಲಾಭಾರವನ್ನು ಮಾಡಿಸಲಾಗಿತ್ತು.
ಮತ್ತೊಂದು ಸಲ ಶಾಂತಾ ತನ್ನಿಬ್ಬರು ಮೊಮ್ಮಕ್ಕಳೊಡಗೂಡಿ, ಗೆಳತಿ ಲೋಕೂರ ಅವರೊಂದಿಗೆ ಗೋಕರ್ಣ, ಶೃಂಗೇರಿ, ಧರ್ಮಸ್ಥಳ ಮತ್ತು ಹೊರನಾಡು ಗಳಿಗೆ ಹೋಗಿ ಬಂದಳು. ಆಗ ಮಕ್ಕಳಿಬ್ಬರೂ ಚಿಕ್ಕವರಾಗಿದ್ದರು- ಕಿಟ್ಟೂ ೬ನೆ ಇಯತ್ತೆಯಲ್ಲಿ ಮತ್ತು ವಿನೂ ೩ನೆ ಇಯತ್ತೆಯಲ್ಲಿ ಕಲಿಯುತ್ತಿದ್ದರು. ರಾಘವೇಂದ್ರ ಮಾತ್ರ ಹೋಗಿರಲಿಲ್ಲ.
ಕೊಲ್ಲಾಪುರದ ಮಹಾಲಕ್ಷ್ಮಿ ಬೆಳಗಾವಿಗೆ ಹತ್ತಿರ ಇರುವ ಇನ್ನೊಂದು ಪ್ರಸಿದ್ಧ ಯಾತ್ರಾ ಸ್ಥಳ. ಆದರೆ ಅಲ್ಲಿಗೆ ಇವರು ಪ್ರತ್ಯೇಕವಾಗಿ ಹೋಗಿರದಿದ್ದರೂ, ಪಂಢರಪುರಕ್ಕೆ ಹೋದಾಗ, ಅಲ್ಲಿಗೂ ಮೂರು ಸಲ ಹೋಗಿದ್ದರು.