ವಿವರವಾದ ಪರಿಚಯ
ಜನ್ಮ ದಿನಾಂಕ ಮತ್ತು ಸ್ಥಳ :೧೧-೫-೧೯೮೨ ಅಂದರೆ ಆ ವರ್ಷದ ವೈಶಾಖ ಕೃಷ್ಣ ತೃತೀಯಾ.
ಶಿಕ್ಷಣ : ಬೆಳಗಾವಿ ಕೇಳಕರ ಬಾಗದಲ್ಲಿನ ೯ನೆ ನಂಬರ ಸರಕಾರಿ ಪ್ರಾಥಮಿಕ ಶಾಲೆಯಲ್ಲಿ ಪ್ರಾಥಮಿಕ ೪ ನೆ ಇಯತ್ತೆಯ ವರೆಗೆ ನಂತರ ೫ ರಿಂದ ೭ನೆ ಇಯತ್ತೆವರೆಗೆ ಟಿಳಕವಾಡಿಯಲ್ಲಿನ (ಬೆಳಗಾವಿ) ಸ್ವಾಧ್ಯಾಯ ವಿದ್ಯಾ ಮಂದಿರ, ಅದರ ಮುಂದಿನ ಮಾಧ್ಯಮಿಕ ಶಿಕ್ಷಣ ಬಿ.ಕೆ.ಮಾಡೆಲ್ ಹಾಯಸ್ಕೂಲಿನಲ್ಲಿ, ಎಸ್.ಎಸ್.ಎಲ್.ಸಿ ಪಾಸಾದುದು – ಎಪ್ರಿಲ್ ೧೯೯೩ ರಲ್ಲಿ, ಗೋಗಟೆ ಕಾಲೇಜ ಆಫ್ ಕಾಮರ್ಸ (ಬೆಳಗಾವಿ) ದಿಂದ ೨೦೦೨ ರಲ್ಲಿ ಬಿ.ಕಾಮ್ ಪದವಿ, ಮುಂದೆ ಇದೇ ಉರಿನ ಆಯ್.ಎಮ್.ಈ.ಆರ್ ದಿಂದ ೨೦೦೪ ರಲ್ಲಿ ಎಮ್.ಬಿ.ಎ ಪಾಸಾದುದು.
ಉಪನಯನ : ಅಣ್ಣ ಕೃಷ್ಣ ಮತ್ತು ತಮ್ಮ ವಿನಾಯಕ ಇವರಿಬ್ಬರ ಉಪನಯನ ಒಂದೇ ದಿನ -ರವಿವಾರ, ೨೮-೧-೧೯೯೦ರಂದು ಅಂದರೆ ಶಾಲಿವಾಹನ ಶಕೆ ೧೯೧೧, ಶುಕ್ಲನಾಮ ಸಂವತ್ಸರ, ಮಾಘ ಶುದ್ಧ ದ್ವಿತೀಯಾ ೧೧.೪೫ ಗಂಟೆಗೆ, ಟಿಳಕವಾಡಿಯ, ವ್ಯಾಕ್ಸಿ ನ್ ಡಿಪೋದಲ್ಲಿನ ಶ್ರೀ ರಾಘವೇಂದ್ರಸ್ವಾಮಿ ಮಠದಲ್ಲಿ ನೆರವೇರಿತ್ತು.
ವೃತ್ತಿ ಜೀವನ : ಸ್ವತಂತ್ರವಾಗಿ ನಡೆಸುತ್ತಿರುವ Event Management ಉದ್ಯೋಗ.
ವಿವಾಹ : ೨೫ ನೆ ವಯಸ್ಸಿನಲ್ಲಿ, ೬-೨-೨೦೦೭ ರಂದು ಅಂದರೆ ಮಾಘ ಕೃಷ್ಣ ಚತುರ್ಥಿಯಂದು, ಬೆಳಗಾವಿಯ ಮಾರುತಿರಾವ ಬಿ. ಮೋರೆ ಮತ್ತು ಜಯಮಾಲಾ ಮೋರೆ ಇವರ ಪುತ್ರಿ – ದೀಪಾಳೊಂದಿಗೆ, ಬೆಳಗಾವಿಯಲ್ಲಿಯೆ ನೆರವೇರಿತು.
ಮಕ್ಕಳು : ಅಥರ್ವ ಹುಟ್ಟಿದ್ದು – ಸಪ್ಟೆಂಬರ ೯, ೨೦೦೮ ರಂದು (ಭಾದ್ರಪದ ಶುದ್ಧ ನವಮಿ – ಜಗನ್ನಾಥದಾಸರ ಆರಾಧನೆಯ ದಿವಸ), ಬೆಳಗಾವಿಯಲ್ಲಿ.