ಜನ್ಮ ದಿನಾಂಕ, ಸ್ಥಳ: ೧೫-೧೧-೧೯೫೭ರಂದು ಹುಬ್ಬಳ್ಳಿಯಲ್ಲಿ.
ತಂದೆ ತಾಯಿ: ನಾರಾಯಣ ಮತ್ತು ಸೌ. ಲೀಲಾಬಾಯಿ
ಇವರ ಆರು ಮಕ್ಕಳಲ್ಲಿ ನಾಕನೆಯವರು.
ಒಡಹುಟ್ಟಿದವರು: ಅಕ್ಕ ಶೊಭಾ (ಧಾರವಾಡದ ಲಕ್ಷ್ಮಣ ವೆಂ.ತಲವಾಯಿಯವರ ಪತ್ನಿ); ಅಣ್ಣ ವಾದಿರಾಜ (ಹುಬ್ಬಳ್ಳಿ) ; ಅಕ್ಕ ಗೀತಾ (ಅಜಿತ ವ. ಬೆಳ್ಳುಬ್ಬಿಯವರ ಪತ್ನಿ) ; ತಮ್ಮ ಕೇಶವ (ಬೆಂಗಳೂರು) ; ಕಡೆಯ ತಮ್ಮ ರಂಗನಾಥ (ಧಾರವಾಡ).
ಲಾಯಿಫ ಇನ್ಸುರನ್ಸ ಕಾರ್ಪೊರೇಶನ ಆಫ ಇಂಡಿಯಾದಲ್ಲಿ ಅಧಿಕಾರಿ, ಶ್ರೀರಂಗ ಪಟ್ಟಣದಲ್ಲಿ.
ಪತ್ನಿ: ಸೌ.ಸವಿತಾ, ಲಾಯಿಫ ಇನ್ಸುರನ್ಸ ಕಾರ್ಪೊರೇಶನ ಆಫ ಇಂಡಿಯಾ ದಲ್ಲಿ ಅಧಿಕಾರಿ, ಮೈಸೂರಿನಲ್ಲಿ.
ಮಕ್ಕಳು: ಒಬ್ಬನೆ ಮಗ. ಪೂರ್ಣಪ್ರಜ್ಞ (ಸಾತ್ವಿಕ)
ವಿಳಾಸ: ಎಲ್.ಆಯ.ಸಿ. ಆಫೀಸರ್ಸ ಕ್ವಾರ್ಟರ್ಸ, ಬನ್ನಿ ಮಂಟಪದ ಹತ್ತಿರ, ಮೈಸೂರು.
ಫೋನ: (ಮೊ) ೯೪೪೯೯ ೨೫೧೭೨ ; ಮನೆ ೦೮೨೧ ೨೪೯೨ ೬೭೭.
ವ್ಯಕ್ತಿ ಪರಿಚಯ
ನಾರಾಯಣ ಮತ್ತು ಸೌ.ಲೀಲಾಬಾಯಿ ಇವರ ಆರು ಮಕ್ಕಳಲ್ಲಿ ನಾಕನೆಯವರಾದ ಇವರ ವಿಶೇಷ – ಇವರೂ ಮತ್ತು ಇವರ ಸೌ.ಸವಿತಾ ಅವರೂ ಇಬ್ಬರೂ ಲಾಯಿಫ ಇನ್ಸುರನ್ಸ ಕಾರ್ಪೊರೇಶನ ಆಫ ಇಂಡಿಯಾದ ಉದ್ಯೋಗಿಗಳಾಗಿರುವದು. ಪತಿ ಶ್ರೀರಂಗ ಪಟ್ಟಣದಲ್ಲಿ, ಪತ್ನಿ ಮೈಸೂರಿನಲ್ಲಿ. ಪುತ್ರ ಪೂರ್ಣಪ್ರಜ್ಞನ (ಸಾತ್ವಿಕ) ಶಿಕ್ಷಣದ ದೃಷ್ಟಿಯಿಂದ ಮೈಸೂರಿನಲ್ಲಿಯೆ ಮನೆ ಮಾಡಿದ್ದಾರೆ. ಇಬ್ಬರೂ ವಾಣಿಜ್ಯ ಶಾಸ್ತ್ರ ಕಲಿತವರು. ಕೃಷ್ಣ ಅವರು B.Com., ಸವಿತಾ ಅವರು M.Com.
ಕೃಷ್ಣ ಅವರ ಸೋದರತ್ತೆ ಸೌ. ಇಂದಿರಾಬಾಯಿ (ಆದರೆ ತೌರು ಮನೆಯ ಹೆಸರು ಹಣಮಕ್ಕ ಎಂದೆ ಹೆಚ್ಚಾಗಿ ಪರಿಚಿತ) ಹಣಮಂತಾಚಾರ್ಯ ಕುರುಬಗಟ್ಟಿ ಇವರಿಗೆ ಮಕ್ಕಳಾಗಿರಲಿಲ್ಲ. ಸಣ್ಣ ವಯಸ್ಸಿನಲ್ಲೆ ತಂದೆ ತಾಯಿಯರನ್ನು ಕಳೆದುಕೊಂಡಿದ್ದ ನಾರಾಯಣ (ಕೃಷ್ಣ ಅವರ ತಂದೆ) ಅವರನ್ನು ಅಕ್ಕ ಹಣಮಕ್ಕ ತನ್ನ ಹತ್ತಿರವೆ ಇಟ್ಟುಕೊಂಡು ಸಲಹಿ, ಕಲಿಸಿ, ಕೆಲಸ ಮದುವೆ ಈ ಎಲ್ಲವನ್ನೂ ಮಾಡಿ ಮುಂದೆ ತಂದ ಹೆಣ್ಣುಮಗಳು.ಅದರೆ ಸ್ವಂತ ಮಕ್ಕಳಿಲ್ಲವೆಂಬ ಕೊರಗು ಇದ್ದೆ ಇದ್ದಿತು. ಹಣಮಂತಾಚಾರ್ಯರು ತಾವು ಸಾಯುವ ಒಂದು ವರ್ಷ ಪೂರ್ವದಲ್ಲಿ ೧೯೬೪ರಲ್ಲಿ, ಏಳು ವರ್ಷದ ಬಾಲಕನಾಗಿದ್ದ – ತಮ್ಮ ಕಣ್ಣೆದುರೆ ಹುಟ್ಟಿ ಬೆಳೆದಿದ್ದ ಕೃಷ್ಣ ಅವರನ್ನು ದತ್ತಕ ತೆಗೆದು ಕೊಂಡರು.
ಒಳ್ಳೆ ಕರ್ತೃತ್ವ ಶಾಲಿ ಆಗಿದ್ದ ಹಣಮಕ್ಕ (ಇಂದಿರಾಬಾಯಿ) ಪತಿಯ ಮರಣಾ ನಂತರ ತಮ್ಮ ಆಸ್ತಿಪಾಸ್ತಿಯ ವ್ಯವಹಾರವನ್ನು ತಾವೆ ಸಂಭಾಳಿಸಿದರು. ದತ್ತಕ ಮಗ ಇನ್ನೂ ಬಹಳ ಸಣ್ಣವ. ತೀರಿಕೊಂಡಿದ್ದ ಭಾವ ಹಣಮಂತಾಚಾರ್ಯರಿಗೆ ಮಗನಾಗಿ ಮಾಡಬೇಕಾದುದನ್ನು ನಾರಾಯಣ ಅವರೆ ಮಾಡುವದು ಅನಿವಾರ್ಯವಾಗಿತ್ತು. ಹಾಗೆ ತಪ್ಪದೆ ಮಾಡುತ್ತಲೆ ಹೋದರು, ಕೃಷ್ಣ ಅವರು ಗೃಹಸ್ಥಿಕೆಯ ಎಲ್ಲ ಕರ್ತವ್ಯಗಳನ್ನು ಮಾಡುವಷ್ಟು ದೊಡ್ದವರಾಗುವವರೆಗೆ. ಈ ಸನ್ನಿವೇಶದಲ್ಲಿ ಈ ಮೊದಲು ಶಾಲೆಯ ದಾಖಲೆಗಳಲ್ಲಿ ನಮೂದು ಆಗಿದ್ದ ಮಂಗಳವೇಡಿ ಎಂಬ ಅಡ್ಡಹೆಸರು ಆಗ ಬದಲಾಗದೆ ಹಾಗೆಯೆ ಉಳಿದು ಬಿಟ್ಟದ್ದು ಇಲ್ಲಿನವರೆಗೂ ಉಳಿದೆ ಹೋಗಿದೆ. ಇದ್ದ ಹೊಲಗಳು ಟೆನನ್ಸಿ ಆಕ್ಟದಲ್ಲಿ ರೈತರ ಪಾಲಾದವು.
ಕೃಷ್ಣ ಅವರು ಹುಟ್ಟಿದ್ದು ೧೫-೧೧-೧೯೫೭ರಂದು ಹುಬ್ಬಳ್ಳಿಯಲ್ಲಿ. ಅವರದು ಆಶ್ಲೇಷಾ ನಕ್ಷತ್ರ ೪ನೆ ಚರಣ, ಕರ್ಕ ರಾಶಿ. ಪ್ರಾಥಮಿಕ ಶಿಕ್ಷಣ ಹುಬ್ಬಳ್ಳಿಯಲ್ಲಿಯೆ ಗಣೇಶ ಪೇಟೆಯ ಸರಕಾರಿ ಶಾಲೆ ನಂ. ೮ ರಲ್ಲಿ ನಡೆಯಿತು. ನಂತರ ಲ್ಯಾಮಿಂಗಟನ ಹಾಯಸ್ಕೂಲಿನಲ್ಲಿ ಕಲಿತು ಎಸ್.ಎಸ್.ಎಲ್.ಸಿ ಆದಮೇಲೆ ಜಗದ್ಗುರು ಗಂಗಾಧರ ಕಾಲೇಜ ಆಫ ಕಾಮರ್ಸ ಸೇರಿ B.Com. ಪದವಿ ಪಡೆದರು.
ವೃತ್ತಿ ಜೀವನ ಎಲ್.ಆಯ್. ಸಿ ಯಲ್ಲಿನ ಸೇವೆಯಿಂದ ಹುಬ್ಬಳ್ಳಿಯಲ್ಲಿ ೧೯೮೦ ರಲ್ಲಿ ಶುರುವಾದುದು ಈಗ ಶ್ರೀರಂಗ ಪಟ್ಟಣದಲ್ಲಿ ಸ್ಪೇಶಿಯಲ ಅಸಿಸ್ಟಂಟ ಆಫಿಸರ ಆಗಿ ಮುಂದುವರೆದಿದೆ.
ವಿವಾಹ: ಬಿಜಾಪುರದಲ್ಲಿನ ಪಿ.ಡಿ.ಜೆ. ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿದ್ದ ಗುರುರಾವ ಪಿ. ಕುಲಕರ್ಣಿ ಮತ್ತು ಅವರ ಸೌಭಾಗ್ಯವತಿ ಸುಧಾಬಾಯಿ ಇವರ ಪುತ್ರಿ ಸವಿತಾ ಅವರ ಜೊತೆ ೧೧ ಫೆಬ್ರುವರಿ ೧೯೮೮ ರಂದು ಬಿಜಾಪುರದಲ್ಲಿ ವಧುವಿನ ಮನೆಯಲ್ಲಿ ನಡೆಯಿತು. ಅತ್ತೆ ಮನೆಯಲ್ಲಿ ಸೊಸೆಗೆ ಕೃತ್ತಿಕಾ ಎಂದು ಹೆಸರಿಡಲಾಯಿತು.
ಸವಿತಾ ಅವರು ಹುಟ್ಟಿದ್ದು ೧೦-೧೦-೧೯೬೬ ರಂದು, ಬಿಜಾಪುರದಲ್ಲಿ. ತಂದೆ ಗುರುರಾವ ಕುಲಕರ್ಣಿ ಸಿರೂರಿನವರು. ಹರಿತ ಗೋತ್ರ ಅವರದು. ಈಗ ನಿವೃತ್ತ ರಾಗಿದ್ದಾರೆ. ಮಗಳು ಸವಿತಾ ಅವರಶಿಕ್ಷಣ ಪ್ರಾಥಮಿಕ ದಿಂದ ಹಿಡಿದು ಕಾಲೇಜ ವರೆಗೆ ಎಲ್ಲವೂ ಅಲ್ಲಿನ ಪಿ.ಡಿ.ಜೆ ಯ ಶಾಲೆ ಮತ್ತು ಮಹಾ ವಿದ್ಯಾಲಯದಲ್ಲಿ ನಡೆಯಿತು. B.Com. ಪದವಿ ಪಡೆದ ಮೇಲೆ ತಮ್ಮ ಊರಿನಲ್ಲೆ ಎಲ್.ಐ.ಸಿಯಲ್ಲಿಯೆ ಕೆಲಸ ಸಿಕ್ಕಿತು. ಮದುವೆಯ ಮರುವ₹ರ್ಷ ಹುಬ್ಬಳ್ಳಿಗೆ ವರ್ಗವಾಯಿತು. ಈ ಮಧ್ಯೆ ಕರ್ನಾಟಕ ವಿ.ವಿ ಯಿಂದ M.Com. (ಬಾಹ್ಯ) ಪದವಿಯನ್ನು ಕೂಡ ಪಡೆದರು
ಮುಂದೆ ೧೯೯೮ರಲ್ಲಿ ಪದೋನ್ನತಿ ಪಡೆದು ಗದಗಿಗೆ ಬದಲಿಯಾಯಿತು. ಒಂದು ವರ್ಷದ ನಂತರ ಮತ್ತೆ ಹುಬ್ಬಳಿಗೆ ಬರುವದಾಯಿತು. ೨೦೦೭ ರಲ್ಲಿ ಮತ್ತೊಂದು ಪದೋನ್ನತಿ ಸಿಕ್ಕಿತು. ಕೊಪ್ಪಳಕ್ಕೆ ಬದಲಿಯಾಯಿತು. ಎರಡು ಮೂರು ವರ್ಷಗಳಾದ ಮೇಲೆ ಮತ್ತೆ ಹುಬ್ಬಳಿಗೆ ಬದಲಿ ಆಯಿತು. ೨೦೧೩ ರಲ್ಲಿ ಮತ್ತೂ ಒಂದು ಪದೋನ್ನತಿ ಬಂದಿತು. ದರೊಂದಿಗೆ ಮೈಸೂರಿಗೆ ವರ್ಗವೂ ಆಯಿತು. ಅಲ್ಲಿ ಈಗ ಅವರು ಆಡ್ಮಿನಿಸ್ಟ್ರೇಟಿವ ಆಫೀಸರ ಆಗಿ ಇದ್ದಾರೆ.
ಮಕ್ಕಳು: ಕೃಷ್ಣ -ಸವಿತಾ (ಕೃತಿಕಾ) ಇವರ ಏಕ ಮಾತ್ರ ಪುತ್ರ ಪೂರ್ಣಪ್ರಜ್ಞ(ಸಾತ್ವಿಕ) ಹುಟ್ಟಿದ್ದು ಕಾರ್ತಿಕ ಮಾಸದಲ್ಲಿ. ವೈಕುಂಠ ಚತುರ್ದಶಿಯಂದು. ಅವನದು ಭರಣಿ ನಕ್ಷತ್ರ, ಮೇಷ ರಾಶಿ. ಜನ್ಮ ದಿನಾಂಕ ಮತ್ತು ಸ್ಥಳ : ೨೨-೧೧- ೧೯೯೯ ರಂದು ಹುಬ್ಬಳ್ಳಿಯಲ್ಲಿ.
ಸೌ. ಸವಿತಾ ಅವರ ಒಡಹುಟ್ಟಿದವರು: ಸಂಜೀವ, B.E. ಇಂಜಿನೀಯರ ಆಗಿರುವ ಇವರು ಮುಂಬಯಿಯಲ್ಲಿರುವ ಬಹು ದೇಶೀಯ ಕಂಪನಿಯೊಂದರಲ್ಲಿ ಇದ್ದಾರೆ. ವಿವಾಹಿತ. ಇಬ್ಬರು ಹೆಣ್ಣು ಮಕ್ಕಳು. ಡೊಂಬಿವಲಿ (ಪೂರ್ವ) (ಮಹಾರಾಷ್ಟ್ರ) ದಲ್ಲಿದ್ದಾರೆ. ಸಹೋದರಿಯರಲ್ಲಿ ಸುನೀತಾ ವಿನಯಕುಮಾರ ಕುಲಕರ್ಣಿ ಎಂಬ ಟೆಕಸ್ಟಾಯಲ ಇಂಜಿನೀಯರ ಅವರ ಪತ್ನಿ. ಪತಿಗೆ ಹುಬ್ಬಳ್ಳಿಯಲ್ಲಿ ‘ಪ್ರಿಯದರ್ಶಿನಿ’ ಯಲ್ಲಿ ಕೆಲಸ. ಒಬ್ಬ ಮಗಳು, ಒಬ್ಬ ಮಗ, ಹೀಗೆ ಇಬ್ಬರು ಮಕ್ಕಳು. ನವನಗರ- ಹುಬ್ಬಯಲ್ಲಿ ವಾಸವಾಗಿದ್ದಾರೆ. ಇನ್ನೊಬ್ಬ ಸಹೋದರಿ ಶ್ರೀದೇವಿ ಇವರು ಬಬಲೇಶ್ವರ ದ ಮುರಲೀಧರ ಕುಲಕರ್ಣಿ ಎಂಬುವರ ಪತ್ನಿ. ಪತಿ, B.E. ಇಂಜಿನೀಯರ (ಬಾಗಲಕೋಟೆಯ ಕಾಲೇಜು). ಬೆಂಗಳೂರಿನಲ್ಲಿ L & T ದಲ್ಲಿ ಅಸಿಸ್ಟಂಟ ಮ್ಯಾನೆಜರ ಆಗಿದ್ದಾರೆ. ಒಬ್ಬ ಮಗ, ಒಬ್ಬ ಮಗಳು ಹೀಗೆ ಇಬ್ಬರು ಮಕ್ಕಳು. ಮತ್ತಿಕೆರೆಯಲ್ಲಿ ವಾಸವಾಗಿದ್ದಾರೆ.
ಆಸ್ತಿ ಪಾಸ್ತಿ: ಹುಬ್ಬಳ್ಳಿಯ ಪಾರಸವಾಡಿ – ಕೇಶವಾಪುರದಲ್ಲಿ ಒಂದು ಮನೆ(೮೦೦ ಚದುರಡಿ ಗ್ರೌಂಡ ಫ್ಲೋರ + ೯೦೦ ಚದುರಡಿ ಮೊದಲ ಅಂತಸ್ತು) , ಬೆಂಗಳೂರಿನ ಮೈಸೂರು ರೋಡಿನ ಮೇಲೆ ಸುಮಾರು ೧೩೦೦ ಚದುರು ಅಡಿಯ ಒಂದು ಫ್ಲ್ಯಾಟು ಇದೆ.
ಪ್ರವಾಸ, ತೀರ್ಥ ಕ್ಷೇತ್ರ ದರ್ಶನ, ಯಾತ್ರೆ: ಹೆಚ್ಚೂ ಕಡಿಮೆ ಅರ್ಧ ಭಾರತವನ್ನು ನೋಡಿದ್ದಾಗಿದೆ. ಪ್ರತಿ ವರ್ಷ ಪತ್ನಿ ಪುತ್ರರೊಂದಿಗೆ ಮಂತ್ರಾಲಯ ಪಾದಯಾತ್ರಾ ಸಂಘ, ಲಕ್ಷ್ಮೇಶ್ವರದ ಸದಸ್ಯರೊಡನೆ ಮಂತ್ರಾಲಯಕ್ಕೆ ಪಾದಯಾತ್ರೆ ಹೋಗುವ ಪರಿಪಾಠ ಇಟ್ಟುಕೊಂಡಿದ್ದಾರೆ.
ಬರೆದವರು : ಶ್ರೀಕಾಂತ ರಂ. ಮಂಗಳವೇಢೆ ಮುಗಿದುದು : ಶುಕ್ರವಾರ, ಮಾಘ ಶುದ್ಧ ಚತುರ್ದಶಿಮತ್ತು ಭಾರತ ಹುಣ್ಣಿವೆ, ೧೦ ಫ಼ೆಬ್ರುವರಿ ೨೦೧೭, ಬೆಳಗಿನ ೯.೩೦ ಗಂಟೆ. ಆಧಾರ : ಕೃಷ್ಣಾ ಅವರ ಕಡೆಯ ತಮ್ಮ ರಂಗನಾಥ ಅವರು ಕೊಟ್ಟ ಲಿಖಿತ ಮಾಹಿತಿ ಮತ್ತು ಕೇಳಿ ತಿಳಿದುಕೊಂಡುದು.