ಜನ್ಮ ದಿನಾಂಕ, ಸ್ಥಳ: ೧೪ ಜೂನ ೧೯೫೬ ರಂದು ಹುಬ್ಬಳ್ಳಿಯಲ್ಲಿ.
ತಂದೆ – ತಾಯಿ: ನಾರಾಯಣ – ಸೌ. ಲೀಲಾಬಾಯಿ
ಒಡಹುಟ್ಟಿದವರು: ಅಕ್ಕ ಶೋಭಾ (ಧಾರವಾಡದಲ್ಲಿರುವ ಲಕ್ಷ್ಮಣ ವೆಂ. ತಲವಾಯಿಯವರ ಪತ್ನಿ), ಅಣ್ಣ ವಾದಿರಾಜ (ಹುಬ್ಬಳ್ಳಿ), ತಮ್ಮ ಕೃಷ್ಣ (ಮೈಸೂರು), ತಮ್ಮ ಕೇಶವ (ಕರ್ಜತ – ಮಹಾರಾಷ್ಟ್ರ), ಕಡೆಯ ತಮ್ಮ ರಂಗನಾಥ (ಧಾರವಾಡ)
ನಿವೃತ್ತ ಶಿಕ್ಷಿಕೆ
ಪತಿ: ಅಜಿತ ವಸಂತರಾವ ಬೆಳ್ಳುಬ್ಬಿ, ನಿವೃತ್ತ ಅಕೌಂಟಂಟ, ಮರಳಿ ಸಕ್ಕರೆ ಕಾರಖಾನೆ (ಕೊಪ್ಪಳ ಜಿಲ್ಲೆ).
ವಿಳಾಸ: ಶ್ರೀರಾಮ ನಗರ, ಗಂಗಾವತಿ (ತಾಲುಕ – ಗಂಗಾವತಿ, ಕೊಪ್ಪಳ ಜಿಲ್ಲೆ)
ಫೋನ: (ಮೊ) ೯೮೮೬ ೪೦೧೭ ೦೭
ವ್ಯಕ್ತಿ ಪರಿಚಯ
ನಾರಾಯಣ ರಾಮಚಂದ್ರ ಮಂಗಳವೇಡಿ ಮತ್ತು ಸೌ. ಲೀಲಾಬಾಯಿ ಇವರ ಆರು ಮಕ್ಕಳಲ್ಲಿ ಗೀತಾ ಮೂರನೆಯವರು. ಹುಬ್ಬಳ್ಳಿಯಲ್ಲಿ ಜೂನ ೧೪, ೧೯೫೬ರಂದು ಹುಟ್ಟಿದರು. ಹಸ್ತಾ ನಕ್ಷತ್ರ, ಕನ್ಯಾ ರಾಶಿ ಇವರದು. ಮದುವೆಯಾಗಿ, ಭಾರದಾಜ ಗೋತ್ರದ, ಹುಬ್ಬಳ್ಳಿಯವರೆ ಆದ ಅಜಿತ ವಸಂತರಾವ ಬೆಳ್ಳುಬ್ಬಿ ಅವರ ಪತ್ನಿಯಾದರು. ಮದುವೆ ನಡೆದದ್ದು ಹುಬ್ಬಳ್ಳಿಯ ಗುಜರಾತ ಭವನ. ಅತ್ತೆಮನೆಯಲ್ಲಿ ಅವರಿಗಿಟ್ಟ ಹೆಸರು ಅಶ್ವಿನಿ ಎಂದು.
ಅಜಿತ ಅವರು ಹುಟ್ಟಿದ ತಾರೀಖು ೨೬ಸೆಪ್ಟೆಂಬರ ೧೯೫೦ (ಭಾದ್ರಪದ ನಕ್ಷತ್ರ, ಮೀನ ರಾಶಿ). B.Com. ಪದವಿಧರರಾದ ಅವರು ಮರಳಿಯಲ್ಲಿನ ಸಕ್ಕರೆ ಕಾರಖಾನೆಯಲ್ಲಿ ಅಕೌಂಟಂಟ ಎಂದು ಸೇವೆ ಸಲ್ಲಿಸಿ ನಿವೃತ್ತರಾದರು.
ಮಕ್ಕಳು: ಅಮಿತ ಮತ್ತು ಅಖಿಲ ಎಂಬ ಇಬ್ಬರು ಮಕ್ಕಳು. ಅಮಿತ ಹುಟ್ಟಿದ್ದು ೩ ಸೆಪ್ಟೆಂಬರ ೧೯೮೩ ರಂದು (ಆರಿದ್ರಾ ನಕ್ಷತ್ರ ೩ನೆ ಚರಣ, ಮಿಥುನ ರಾಶಿ). ಡಿಪ್ಲೋಮಾ ಇಂಜಿನೀಯರ ಆಗಿರುವ ಇವರು, ಡಿಪ್ಲೋಮಾ ಪರಿಕ್ಷೆಯಲ್ಲಿ ತಾವು ಕುಳಿತ ಗಂಗಾವತಿ ಕೇಂದ್ರಕ್ಕೆ ಪ್ರಥಮ ಸ್ಥಾನ ಪಡೆದಿದ್ದರು. ಕಟ್ಟಡ ನಿರ್ಮಾಣದ ಸ್ವತಂತ್ರ ಕೆಲಸ ಮಾಡಿಕೊಂಡಿದ್ದಾರೆ. ವಿವಾಹಿತ. ಪತ್ನಿಯ ಹೆಸರು ಜಯಶ್ರೀ (ಅನುಶ್ರೀ). ಇವರಿಗೆ ಅಂಕಿತ ಎಂಬ ಮಗನಿದ್ದಾನೆ. ಅವನು ಹುಟ್ಟಿದ್ದು ೧೬-೭-೨೦೨೩ ರಂದು.
ಅಖಿಲ ಹುಟ್ಟಿದ್ದು ತನ್ನ ಅಣ್ಣ ಹುಟ್ಟಿದ ಸರಿಯಾಗಿ ಹತ್ತು ವರ್ಷಗಳ ನಂತರ ೩- ಸೆಪ್ಟೆಂಬರ ೧೯೯೩ ರಂದು. ಅಣ್ಣನದೇ ನಕ್ಷತ್ರ, ಅದೇ ರಾಶಿ. ಗಂಗಾವತಿಯಲ್ಲಿಯೆ ಪ್ರಾಥಮಿಕ ಮತ್ತು ಮಾಧ್ಯಮಿಕ ಶಿಕ್ಷಣವಾಯಿತು. ನಂತರ ಧಾರವಾಡದ ಎನ್.ಟಿ.ಟಿ.ಎಫ್. ದಲ್ಲಿ ಕಲಿಯುವದಾಯಿತು. ನಾಸಿಕದಲ್ಲಿ ಕೆಲಸವಿದೆ.
ಬರೆದವರು : ಶ್ರಿಕಾಂತ ರಂ. ಮಂಗಳವೇಢೆ ಮುಗಿದುದು : ಗುರುವಾರ, ಮಾಘ ಶುದ್ಧ ತ್ರಯೋದಶಿ, ೯ ಫೆಬ್ರುವರಿ ೦೧೭. ಸಂಜೆ ೭.೩೦ ಗಂಟೆ. ಆಧಾರ : ಗೀತಾ ಅವರ ತಮ್ಮ ರಂಗನಾಥ ಅವರು ಕೊಟ್ಟಿರುವ ಲಿಖಿತ ಮಾಹಿತಿ ಮತ್ತು ಕೇಳಿ ತಿಳಿದುಕೊಂಡದ್ದು.