ತಂದೆ-ತಾಯಿ: ನಾರಾಯಣ ರಾಮಚಂದ್ರ ಮಂಗಳವೇಡಿ ಮತ್ತು ಲೀಲಾಬಾಯಿ. ಈ ದಂಪತಿಯ ಆರು ಮಕ್ಕಳಲ್ಲಿ ಎರಡನೆಯವರು.
ಜನ್ಮ ದಿನಾಂಕ ಮತ್ತು ಸ್ಥಳ: ೧೯೫೪ ರ ಶ್ರಾವಣ ಅಷ್ಟಮಿ (ಗೋಕುಲಾಷ್ಟಮಿ) ದಿನ. ವೃಷಭ ರಾಶಿ.
ರಾಶಿ: ವೃಷಭ ರಾಶಿ.
ಒಡಹುಟ್ಟಿದವರು: ದೊಡ್ಡವರು – (ಅಕ್ಕ) ಶೋಭಾ. ಲಕ್ಷ್ಮಣ ತಲವಾಯಿಯವರ ಪತ್ನಿ, ಧಾರವಾಡ; ಚಿಕ್ಕವರು – (ತಂಗಿ) ಗೀತಾ. ಅಜಿತ ಬೆಳ್ಳುಬ್ಬಿಯವರ ಪತ್ನಿ, ಶ್ರೀ ರಾಮನಗರ – ಕೊಪ್ಪಳ ಜಿಲ್ಲೆ ; ತಮ್ಮಂದಿರು – ಕೃಷ್ಣ, ಮೈಸೂರು ; ಕೇಶವ, ಪಂಢರಪುರ ; ರಂಗನಾಥ, ಧಾರವಾಡ.
ನಿವೃತ್ತ ಬ್ಯಾಂಕ ಅಧಿಕಾರಿ (ICICI Bank)
ಪತ್ನಿ: ಸೌ. ವೀಣಾ, ಗೃಹಿಣಿ
ಮಕ್ಕಳು: ೧. ವರುಣ Associate at J.P. Morgan, ಬೆಂಗಳೂರಿನಲ್ಲಿದ್ದಾರೆ. ೨. ಡಾ. ವಿಕ್ರಮ ಬಾಗಲಕೋಟ ಮೆಡಿಕಲ ಕಾಲೇಜಿನಲ್ಲಿದ್ದಾರೆ.
ದೂರವಾಣಿ: (M) 099 30 127 136
ವ್ಯಕ್ತಿ ಪರಿಚಯ
ತಂದೆ ನಾರಾಯಣ ರಾಮಚಂದ್ರ ಮಂಗಳವೇಡಿಯವರು ರೇಲ್ವೆಯಲ್ಲಿ ಟಿ.ಟಿ.ಸಿ ಎಂದು ಹುಬ್ಬಳ್ಳಿಯಲ್ಲಿದ್ದರು. ಬಹಳಕಾಲ ಅಲ್ಲಿನ ಸ್ಟೇಶನ ರೋಡಿನ ಮೇಲಿರುವ ಚಿಟಗುಪ್ಪಿ ಚಾಳಿನಲ್ಲಿ ಇರುತ್ತಿದ್ದರು. ತಾಯಿ ಲೀಲಾಬಾಯಿ. ಗೃಹಿಣಿ. ಅವರ ಎರಡು ಹೆಣ್ಣು, ಮೂರು ಗಂಡು ಹೀಗೆ ಆರು ಮಕ್ಕಳಲ್ಲಿ- ವಾದಿರಾಜ ಎರಡನೆಯವರು. ಉಳಿದ ಒಡ ಹುಟ್ಟಿದವರ ಬಗ್ಗೆ ಸಂಕ್ಷಿಪ್ತವಾಗಿ ಕಿರು ಪರಿಚಯದಲ್ಲಿ ಕೊಡಲಾಗಿದೆ.
B.S.c. ಪದವಿಧರರಾದ ಇವರ ಪ್ರಾಥಮಿಕ (ಸರಕಾರಿ ಶಾಲೆ), ಮಾಧ್ಯಮಿಕ (ಲ್ಯಾಮಿಂಗಟನ ಹಾಯಸ್ಕೂಲ) ಮತ್ತು ಕಾಲೇಜು ಶಿಕ್ಷಣವೆಲ್ಲ ಹುಬ್ಬಳ್ಳಿಯಲ್ಲಿ ಆಯಿತು. ವೃತ್ತಿ ಜೀವನ ಹುಬ್ಬಳ್ಳಿಯಲ್ಲಿ ಕಿರ್ಲೋಸ್ಕರದಲ್ಲಿ ಕ್ವಾಲಿಟಿ ಕಂಟ್ರೋಲರ ಆಗಿ ೧೯೭೫ರಲ್ಲಿ ಪ್ರಾರಂಭವಾಯಿತು. ಎರಡು ವರ್ಷಗಳ ನಂತರ ೧೯೭೭ ರಲ್ಲಿ ಸಾಂಗಲಿ ಬ್ಯಾಂಕಿನಲ್ಲಿ ಸೇರಿಕೊಂಡರು. ಬೇರೆ ಬೇರೆ ಹುದ್ದೆಗಳಲ್ಲಿ ಬೆಂಗಳೂರಿನಲ್ಲಿ ೧೩ ವರ್ಷ, ಗದಗದಲ್ಲಿ ೫ ವರ್ಷ, ಮಹಾರಾಷ್ಟ್ರದ ಜತ್ತ ದಲ್ಲಿ ೧ ವರ್ಷ ಕೆಲಸ ಮಾಡಿ ಮುಂಬಯಿಗೆ ವರ್ಗವಾದರು. ಪರೇಳ, ಡೊಂಬಿವಲಿ ಯಲ್ಲಿ ೧೮ ವರ್ಷ ಕಳೆದವು. ಈ ನಡುವೆ ಸಾಂಗಲಿ ಬ್ಯಾಂಕು ICICI Bank ದಲ್ಲಿ ವಿಲೀನವಾಯಿತು. ವಾದಿರಾಜ ICICI Bank ಉದ್ಯೋಗಿಯಾದರು. ೨೦೧೪ರಲ್ಲಿ ಕಲ್ಯಾಣ ಶಾಖೆಯಲ್ಲಿ ಮ್ಯಾನೆಜರ ಆಗಿದ್ದಾಗ ನಿವೃತ್ತರಾದರು.
ಹುಬ್ಬಳ್ಳಿಯಲ್ಲಿಯೂ ತಮ್ಮ ಒಂದು ಮನೆ – ಶ್ರೀ ರಾಘವೇಂದ್ರ ಕಾಲನಿ, ಕೇಶವಾಪುರದಲ್ಲಿ ಇದ್ದಿತಾಗಿ ತೀರ ಇತ್ತೀಚೆಗೆ ಅಲ್ಲಿಗೆ ಬಂದಿದ್ದಾರೆ. ಆ ವರೆಗೆ ಡೊಂಬಿವಲಿಯಲ್ಲಿ (ಪೂರ್ವ) ಬಹಳ ಹಿಂದೆಯೆ ತೆಗೆದುಕೊಂಡಿದ್ದ ಪೇಂಡಸೆ ನಗರದಲ್ಲಿ, ನ್ಯೂ ಅಸಾವರಿ ಕೊ-ಆಪರೇಟಿವ ಹೌಸಿಂಗ ಸೊಸಾಯಟಿಯ ಫ್ಲ್ಯಾಟ ನಂ. ೫ ಮತ್ತು ೬ ಇವೆರಡನ್ನೂ ಕೂಡಿಸಿ ದೊಡ್ಡದನ್ನಾಗಿಸಿದ ಮನೆಯಲ್ಲಿ ಇದ್ದರು. ಈ ಅಪಾರ್ಟಮೆಂಟ ಪಂಚವಟಿ ಬಾವಡಿಯ ಹತ್ತಿರ ಇದ್ದಿತು. ಸಾಕಷ್ಟು ಹಿಂದೆ ಕಟ್ಟಿದ್ದ ಮನೆ (ಫ಼್ಲ್ಯಾಟ) ಆಗಿದ್ದರಿಂದ ಮತ್ತು ಎರಡು ಫ್ಲ್ಯಾಟ ಕೂಡಿಸಿದ್ದರಿಂದ ಅದು ‘ಇಟುಕರ’ ವೆಂದೇನೂ ಅನಿಸುತ್ತಿರಲಿಲ್ಲ. ಧಾರವಾಡ, ಹುಬ್ಬಳ್ಳಿ ಮನೆಗಳಲ್ಲಿದ್ದಂತೆ ದೇವರ ಮಂಟಪಕ್ಕೆ ಸಾಕಷ್ಟು ಸ್ಥಳಾವಕಾಶ ಮಾಡಿಕೊಂಡಿದ್ದರು.
ವಿವಾಹ: ಬಿಜಾಪುರದಲ್ಲಿ ಕೆ.ಎಸ್.ಆರ್.ಟಿ.ಸಿ ಯಲ್ಲಿ ಕೆಲಸ ಮಾಡುತ್ತಿದ್ದ ಶ್ರೀನಿವಾಚಾರ್ಯ ರಾಯಚೂರ ಅವರ ಮಗಳು ನಂದಾ (ತೌರು ಮನೆ ಹೆಸರು) ಅವರೊಂದಿಗೆ ಆಯಿತು. ತಾಯಿ ನಿಂಬಾಳದ ಹಬ್ಬು ಮನೆತನದವರು. ಈ ದಂಪತಿಗಳಿಗೆ ಏಳು ಹೆಣ್ಣು ಮಕ್ಕಳು. ಎಲ್ಲರ ವಿವಾಹವಾಗಿ ಅವರೆಲ್ಲ ಮಕ್ಕಳು, ಮೊಮ್ಮಕ್ಕಳು ಹುಟ್ಟಿ ಸುಖವಾಗಿ ಬೇರೆ ಬೇರೆ ಕಡೆ ಇದ್ದಾರೆ. ಶ್ರೀನಿವಾಸ ಅವರು ನಿವೃತ್ತರಾದ ಮೇಲೆ ಇಪ್ಪತ್ತು ವರ್ಷವಿದ್ದು ಸ್ವರ್ಗಸ್ಥರಾದರು.
ನಂದಾ ಅವರಿಗೆ ಅತ್ತೆ ಮನೆಯಲ್ಲಿ ವೀಣಾ ಎಂದು ಹೆಸರಿಟ್ಟರು. ಶಿಕ್ಷಣ ಪೂರ್ತಿ ಬಿಜಾಪುರದಲ್ಲಿಯೆ ನಡೆದು ಬಿ.ಎ. ಪದವಿ ಪಡೆದವರು. ಗೃಹಿಣಿಯಾಗಿ ಇದ್ದರು.
ಸೌ.ವೀಣಾ ಅವರ ರಾಯಚೂರ ಎಂಬ ಅಡ್ಡಹೆಸರಿನ ತೌರು ಮನೆಯವರು, ಸವಣೂರಿನ ಸುಪ್ರಸಿದ್ಧ ಶ್ರೀಸತ್ಯಬೋಧ ಸ್ವಾಮಿಗಳ ವಂಶಸ್ಥರು. ಐದು ವರ್ಷಗಳಿಗೊಮ್ಮೆ ಇವರ ಪರ್ಯಾಯ ಬರುತ್ತದೆ. ಇತ್ತೀಚೆಗೆ ೨೦೧೫ರಲ್ಲಿ ಇವರ ಪರ್ಯಾಯ ಬಂದಿತ್ತು. ಪ್ರತಿ ಉಗಾದಿಯಂದು ಪೂಜೆಯ ಅಧಿಕಾರ – ವ್ಯವಸ್ಥೆಯ ಜವಾಬುದಾರಿ, ನೂತನ ಪರ್ಯಾಯಸ್ಥರಿಗೆ ಹಸ್ತಾಂತರವಾಗುತ್ತದೆ.
ಶ್ರೀನಿವಾಸ ರಾಯಚೂರ ಅವರಿಗೆ ಹುಟ್ಟಿದವರೆಲ್ಲ ಹೆಣ್ಣು ಮಕ್ಕಳೆ. ತಮ್ಮ ಪರ್ಯಾಯ ಬಂದಾಗ ನೆರವಿಗೆ ಯಾವ ಗಂಡು ಮಕ್ಕಳ ನೆರವೂ ಇರದೆ ಹೋಗಿತ್ತು. ಮನೆಯಲ್ಲಿಯೆ ಅಂತಹ ನೆರವು ಇಲ್ಲದೆ ಇದ್ದಾಗ, ಒಬ್ಬರಿಗೇ ಇಂತಹ ದೊಡ್ಡ ಜವಾಬುದಾರಿ ಹೊರುವದು ಬಹಳ ಕಷ್ಟ ಸಾಧ್ಯ. ಹೀಗಾಗಿ ಶ್ರೀನಿವಾಸ ಅವರು ಈ ಪರ್ಯಾಯದ ವ್ಯವಸ್ಥೆಯ ಹೊಣೆಯನ್ನು ತಮ್ಮ ಬಂಧುಗಳಿಗೆ ವಹಿಸಿಕೊಟ್ಟರು. ಆದರೆ ಅವಕಾಶ ಸಿಕ್ಕಾಗ ತಪ್ಪದೆ ಹೋಗಿ ಅಲ್ಲಿ ನಿಲ್ಲುತ್ತಿದ್ದರು.
ಮಕ್ಕಳು: ಜ್ಯೇಷ್ಠ ಪುತ್ರ ವರುಣ. ಇವರು B.E ; M.B.A. (Mumbai) ; Soft-ware Engineer ; Associate at JP Morgan, Bengaluru. ವಿವಾಹಿತ, ಪತ್ನಿ ಸುಧಾ. M.Tech. ಹುಬ್ಬಳ್ಳಿಯ ಹುದ್ದಾರ ಕುಟುಂಬ ಇವರ ತೌರುಮನೆ.
ಡಾ. ವಿಕ್ರಮ. M.B.B.S. from Belgaum Institute of Medical Sciences. Bagalkot Medical College ದಲ್ಲಿ M.D. ಮಾಡುತ್ತಿದ್ದಾರೆ.
ಆಸ್ತಿಪಾಸ್ತಿ: ಹುಬ್ಬಳ್ಳಿಯಲ್ಲಿ ಶ್ರೀ. ರಾಘವೇಂದ್ರ ಕಾಲನಿ, ಕೇಶವಾಪುರದಲ್ಲಿ ಒಂದು ಮನೆ. ಡೊಂಬಿವಲಿಯಲ್ಲಿ ಎರಡು ಫ್ಲ್ಯಾಟ ಕೂಡಿಸಿ ಮಾಡಿದ್ದ ಇನ್ನೊಂದು ಹೀಗೆ ಎರಡು ಮನೆಗಳಿವೆ. ಹಿರಿಯ ಮಗ ವರುಣ ಅವರ ಫ್ಲ್ಯಾಟ ಬೆಂಗಳೂರಿನಲ್ಲಿದೆ.
ಈ ವ್ಯಕ್ತಿ ಪರಿಚಯದ ಲೇಖಕನಾದ ನಾನೂ ಇವರನ್ನು ನೋಡಿದ್ದೆ. ಒಮ್ಮೆಯೆ. ಮಗ ವಾದಿರಾಜ ಮತ್ತು ಸೊಸೆ ಸೌ. ವೀಣಾ ಅವರ ಜೊತೆ ಪಂ.ಬಾಳಾಚಾರ್ಯರ ಮನೆಗೆ ಬಂದಿದ್ದಾಗ. ವಾಸ್ತು ಶಾಂತಿಮತ್ತು ಗೃಹಪ್ರವೇಶದ ಆಮಂತ್ರಣ ಕೊಡಲು, ೧೯೯೩ರ ಸೆಪ್ಟೆಂಬರಿನಲ್ಲಿ. ಅಲ್ಲಿ ಅವರು ಆ ಹಿರಿಯರ ಪಾದ ಪೂಜೆ ಮಾಡಿದ್ದನ್ನು ನೋಡಿ ನನಗೂ ಪ್ರೇರಣೆಯಾಗಿದ್ದು, ಮತ್ತು ಹಾಗೆಮಾಡಿದ್ದು ನೆನಪಿಗೆ ಬರುತ್ತದೆ.