ತಂದೆ-ತಾಯಿ: ನಾರಾಯಣ ರಾಮಚಂದ್ರ ಮಂಗಳವೇಡಿ ಮತ್ತು ಲೀಲಾಬಾಯಿ. ಈ ದಂಪತಿಯ ಆರು ಮಕ್ಕಳಲ್ಲಿ ಎರಡನೆಯವರು.
ಜನ್ಮ ದಿನಾಂಕ ಮತ್ತು ಸ್ಥಳ: ? ಯಕ್ಕುಂಡಿಯಲ್ಲಿ ಜನ್ಮ
ಮರಣ: ವರ್ಷ?
ತಂದೆ: ರಾಮಚಂದ್ರ (ಸ್ವಾಮಿರಾಚಾರ್ಯರ ಪುತ್ರ ರಾಮಾಚಾರ್ಯ)
ತಾಯಿ: ಸುಂದರಾಬಾಯಿ.
ಒಡಹುಟ್ಟಿದವರು: ಅಕ್ಕ -ಹಣಮಕ್ಕ (ಹಣಮಂತಾಚಾರ್ಯ ಕುರುಬಗಟ್ಟಿಇವರ ಪತ್ನಿ), ಎರಡನೆ ಅಕ್ಕ ಸೋನಾ ಬಾಯಿ (ಯಕ್ಕುಂಡಿಯ ಕಟ್ಟಿ ಮನೆತನದ ಒಬ್ಬರ ಪತ್ನಿ); ಅಣ್ಣ – ಭೀಮಾಚಾರ್ಯ (ಭೀಮಣ್ಣ). ನಾರಾಯಣ ಅವರು ನಾಕನೆಯವರು ಮತ್ತು ಕೊನೆಯವರು.
ದಕ್ಷಿಣ ಮಧ್ಯ ರೇಲ್ವೆಯಲ್ಲಿ ಟ್ರಾವಲಿಂಗ ಟಿಕೆಟ ಇನ್ಸಪೆಕ್ಟರ ( ಟಿ.ಟಿ.ಸಿ) ಆಗಿ ಇದ್ದರು. ಹುಬ್ಬಳ್ಳಿಯಲ್ಲಿ ಕೆಲಸವಿದ್ದಿತು.
ಪತ್ನಿ: ಸೌ. ಲೀಲಾಬಾಯಿ.
ವಿಳಾಸ: ಅನೇಕ ವರ್ಷಗಳ ಕಾಲ ಹುಬ್ಬಳ್ಳಿಯಲ್ಲಿ ಸ್ಟೇಶನ ರೋಡಮೇಲೆ ಇರುವ ಚಿಟಗುಬ್ಬಿ ಚಾಳಿನಲ್ಲಿದ್ದರು.
ವ್ಯಕ್ತಿ ಪರಿಚಯ
ಈಗ ಅವರು ಇಲ್ಲವಾಗಿ ಅನೇಕ ವರ್ಷಗಳಾಗಿವೆ. ಉಳಿದದ್ದು ನೆನಪುಗಳು ಮಾತ್ರ. ವ್ಯಕ್ತಿ ಪರಿಚಯದ ದೃಷ್ಟಿಯಿಂದ ಹೇಳಬೇಕಾದ ಕೆಲ ಮಹತ್ವದ ಅಂಶಗಳೆಂದರೆ ಅವರು Travelling Ticket Inspector ಆಗಿ ದಕ್ಷಿಣ ಮಧ್ಯ ರೇಲ್ವೆಯ ಉದ್ಯೋಗಿಯಾಗಿ. ಹುಬ್ಬಳ್ಳಿಯಲ್ಲಿದ್ದರು.
ತಂದೆ ಯಕ್ಕುಂಡಿಯಲ್ಲಿದ್ದ ರಾಮಾಚಾರ್ಯರು (ರಾಮಚಂದ್ರ). ತಾಯಿ ಸುಂದರಾಬಾಯಿ. ಈದಂಪತಿಗಳ ನಾಕನೆ ಮತ್ತು ಕಡೆಯ ಸಂತಾನ ನಾರಾಯಣ ಅವರು. ಎಲ್ಲಕ್ಕೂ ಹಿರಿಯವಳು ಹಣಮಕ್ಕ ಎನ್ನುವವರನ್ನು ಹಣಮಂತಾಚಾರ್ಯ ಕುರಬಗಟ್ಟಿ ಯವರಿಗೆ ಕೊಟ್ಟು ಮದುವೆ ಮಾಡಿದ್ದರು. ಎರಡನೆಯವಳೂ ಮಗಳೆ, ಸೋನಾಬಾಯಿ. ಇವರನ್ನು ಯಕ್ಕುಂಡಿಯ ಕಟ್ಟಿ ಮನೆತನದ ವ್ಯಕ್ತಿಯೊಬ್ಬರಿಗೆ ಕೊಟ್ಟಿದ್ದಿತು. ಗಂಡ ಹೆಂಡಿರಿಬ್ಬರೂ ಚಿಕ್ಕ ವಯಸ್ಸಿನಲ್ಲೇ ತೀರಿಕೊಂಡರು. ಮೂರನೆಯವರು ಭೀಮಾಚಾರ್ಯರು (ಭೀಮಣ್ಣ). ಹುಬ್ಬಳ್ಳಿಯಲ್ಲಿದಾರೆ.
ನಾರಾಯಣ ಅವರು ಚಿಕ್ಕವರಿರುವಾಗಲೆ ತಂದೆತಾಯಿಗಳನ್ನು ಕಳೆದುಕೊಂಡರು. ಆ ಕಷ್ಟದ ದಿನಗಳಲ್ಲಿ ಕೈಹಿಡಿದು ಮೇಲಕ್ಕೆತ್ತಿದವರು ಹಿರಿಯ ಸೋದರಿ ಹಣಮಕ್ಕ. ಬರಿಯ ಲಾಲನೆ ಪಾಲನೆ ಅಷ್ಟೆ ಅಲ್ಲ ಶಿಕ್ಷಣದ ವ್ಯವಸ್ಥೆಗೆಂದು ಹುಬ್ಬಳ್ಳಿಗೆ ಬಂದು ನಿಂತರು. ಪ್ರಥಮಿಕ ಶಾಲೆ ಯಕ್ಕುಂಡಿಯಲ್ಲಿ ಆಗಿತ್ತು. ಮುಂದೆ ಮಾಧ್ಯಮಿಕ ಶಿಕ್ಷಣ ಹುಬ್ಬಳ್ಳಿಯ ಸಿಟಿ ಹಾಯಸ್ಕೂಲದಲ್ಲಿ ನಡೆದು ಎಸ್.ಎಸ್.ಎಲ್.ಸಿ ಆಯಿತು.
ಅಷ್ಟು ಕಲಿಯುವದು ಆದಮೇಲೆ ಕೆಲಸ ಕೊಡಿಸಿದರು. ಮೊದಲು ಭಾರತ ಮಿಲ್ಲಿನಲ್ಲಿ ಕೆಲಸವಾಗಿದ್ದಿತು. ನಂತರ ರೇಲ್ವೆಯಲ್ಲಿ ಉದ್ಯೋಗ ದೊರಕಿ ನಿವೃತ್ತಿ ಹೊಂದುವವರೆಗೂ ಅಲ್ಲಿಯೆ ಉಳಿದರು. ಕೆಲಸ ಸಿಕ್ಕಾಗ ಚಿಟಗುಪ್ಪಿ ಚಾಳಿನಲ್ಲಿ ಮನೆ ಹಿಡಿದರು. ತಮ್ಮ ಸೇವಾವಧಿಯ ಪೂರ್ಣ ಅದೇ ಅವರ ವಿಳಾಸವಾಗಿತ್ತು. ಅಲ್ಲಿಯೆ ಸಂಸಾರ ಮಾಡಿದರು. ಮಕ್ಕಳಾದವು. ಅವರ ಶಾಲೆ ಕಾಲೇಜು ಮದುವೆ ಎಲ್ಲ ಆಯಿತು.
ಅಕ್ಕ ಹಣಮಕ್ಕನಿಗೆ ಮಕ್ಕಳಾಗಿರಲಿಲ್ಲ. ಆಗಿದ್ದರೆ ಅವರ ಮೇಲೆ ತೋರಬಹುದಾಗಿದ್ದ ಎಲ್ಲ ಮಮತೆ ಇವರಿಗೆ ಸಿಕ್ಕಿತು. ಈ ದಂಪತಿಗಳು ನಾರಾಯಣ ಅವರಿಗೆ ಕಲಿಸಿ ಕೆಲಸ ಕೊಡಿಸಿದರಷ್ಟೆ ಅಲ್ಲ ಮದುವೆಯ ಜವಾಬುದಾರಿಯನ್ನೂ ತೀರಿಸಿದರು. ಹುಬ್ಬಳ್ಳಿಯವರೆ ಆದ ವೆಂಕಟರಾವ ತಲವಾಯಿ ಮತ್ತು ಸೌ.ಪದ್ಮಾವತಿಯವರ ಮಗಳು ಲಕ್ಷ್ಮಿಬಾಯಿ ವಧುವಾಗಿ ಮನೆ ತುಂಬಿದರು. ಹಣಮಕ್ಕ ಅವರ ಮನೆಯಲ್ಲಿಯೆ ಸಂಸಾರ ನಡೆಯಿತು. ನಾರಯಣ ಅವರ ಪತ್ನಿ ಲೀಲಕ್ಕ, ಲೀಲಾಬಾಯಿ ಎಂದೆ ಹೆಚ್ಚಾಗಿ ಪರಿಚಿತರಾಗಿದ್ದರು. ಮುಂದೆ ಇವರಿಗೆ, ಶೋಭಾ (೧೯೫೨), ವಾದಿರಾಜ, (೧೯೫೪), ಗೀತಾ (೧೯೫೬), ಕೃಷ್ಣ (೧೯೫೭) ಕೇಶವ (೧೯೬೦) ಮತ್ತು ಕೊನೆಯವರಾಗಿ ರಂಗನಾಥ (೧೯೬೨) ಹುಟ್ಟಿದರು. ಮಕ್ಕಳಿಗೆ ಒಳ್ಳೆಯ ಶಿಕ್ಷಣ ಸಿಕ್ಕಿತು.
ಶೋಭಕ್ಕ ಕರ್ನಾಟಕ ವಿಶ್ವ ವಿದ್ಯಾಲಯದಿಂದ M.A. ಮಾಡಿದ್ದಾರೆ. ಮದುವೆಯಾಗಿ, ಲಕ್ಷ್ಮಣ ವೆಂಕಟರಾವ ತಲವಾಯಿಯವರ ಸೌಭಾಗ್ಯವತಿಯರಾಗಿ, ಗೃಹಿಣಿಯಾಗಿದ್ದಾರೆ. ಪತಿ ಕೂಡ M.A. ಮಾಡಿದವರು. ಜನತಾ ಶಿಕ್ಷಣ ಸಮಿತಿಯಲ್ಲಿದ್ದು ನಿವೃತ್ತ ರಾಗಿದ್ದಾರೆ. ಧಾರವಾಡದ ಯಾಲಕ್ಕಿ ಶೆಟ್ಟರ ಕಾಲನಿಯ ಸ್ವಂತ ಮನೆಯಲ್ಲಿ ವಾಸವಾಗಿದ್ದಾರೆ.
ವಾದಿರಾಜ ಅವರು B.Sc. ಆಗಿ ICICI Bank ದಲ್ಲಿ ಮ್ಯಾನೆಜರ ಆಗಿ ಕಲ್ಯಾಣ ಶಾಖೆ (ಮಹಾರಾಷ್ಟ್ರ) ಯಲ್ಲಿದ್ದಾಗ ನಿವೃತ್ತರಾಗಿ, ಅನೇಕ ವರ್ಷ ಡೊಂಬಿವಲಿಯಲ್ಲಿದ್ದು, ಇತ್ತೀಚೆಗೆ ಹುಬ್ಬಳ್ಲಿಯಲ್ಲಿ ಕೂಡ ಇದ್ದ ತಮ್ಮ ಮನೆಯಲ್ಲಿ ವಾಸವಾಗಿದ್ದಾರೆ.
ಗೀತಾ ಅವರು B.A. ಮಾಡಿದವರು. ಪತಿ ಅಜಿತ ವಸಂತರಾವ ಬೆಳ್ಳುಬ್ಬಿ, ಮರಳಿಯಲ್ಲಿನ (ಕೊಪ್ಪಲ ಜಿಲ್ಲೆ) ಸಕ್ಕರೆ ಕಾರಖಾನೆಯಲ್ಲಿ ಅಕೌಂಟಂಟ ಎಂದು ಇದ್ದು ಈಗ ನಿವೃತ್ತರಾಗಿದ್ದಾರೆ. ಗೀತಾ ಅವರು T.C.H ಕೂಡ ಮಾಡಿದವರು. ಶಿಕ್ಷಿಕೆಯಾಗಿ ಕೆಲವರ್ಷ ಕೆಲಸ ಮಾಡಿ ಸ್ವೇಚ್ಛಾ ನಿವೃತ್ತಿ ಪಡೆದಿದ್ದಾರೆ. ಶ್ರೀರಾಮ ನಗರ (ಗಂಗಾವತಿ ತಾಲುಕು)ದಲ್ಲಿ ವಾಸವಾಗಿದ್ದಾರೆ.
ಕೃಷ್ಣ ಅವರು B.Com. ಮಾಡಿಶ್ರೀರಂಗ ಪಟ್ಟಣದಲ್ಲಿ ಲಾಯಿಫ ಇನ್ಸುರನ್ಸ ಕಾರ್ಪೋರೇಶನ (ಎಲ್.ಆಯ.ಸಿ) ಯಲ್ಲಿ ಉದ್ಯೋಗದಲ್ಲಿದ್ದು, ಮೈಸೂರಿನಲ್ಲಿ ವಾಸವಾಗಿದ್ದಾರೆ. ಸೋದರತ್ತೆ ಹಣಮಕ್ಕ (ಇಂದಿರಾಬಾಯಿ) ಅವರ ಪತಿ ಹಣಮಂತಾಚಾರ್ಯ ಕುರುಬಗಟ್ಟಿ ಅವರು ತಮಗೆ ಮಕ್ಕಳಾಗದ್ದರಿಂದ ಕೃಷ್ಣ ಅವರನ್ನು ೧೯೬೪ರಲ್ಲಿ ದತ್ತಕ ಮಗನೆಂದು ತೆಗೆದುಕೊಂದರು. ಅದರಿಂದಾಗಿ ಜಮದಗ್ನಿ ಗೋತ್ರದವರಾದರು.
ಕೇಶವ ಅವರು Diploma in Electrical Engineering ಮಾಡಿ ಮಹಾರಾಷ್ತ್ರ ಸ್ಟೇಟ ಇಲೆಕ್ಟ್ರಿಸಿಟಿ ಬೋರ್ಡದಲ್ಲಿ ಇಂಜಿನೀಯರ ಆಗಿ ಕೆಲಸದಲ್ಲಿದ್ದಾರೆ. ಸಧ್ಯ ಕರ್ಜತದಲ್ಲಿ ಇದ್ದಾರೆ. ಕೇಶವ ಅವರ ವಿಶೇಷವೆಂದರೆ ನಮ್ಮ ಮನೆತನದ ಕುಲದೇವರು ಪಾಂಡುರಂಗ. ಅವನಿರುವ ಪಂಢರಪುರಕ್ಕೆ ನಮ್ಮ ಮನೆತನದ ಅನೇಕರು ದರ್ಶನಕ್ಕೆಂದು ಒಂದೆರಡು ಸಲ ಮಾತ್ರ ಹೋಗಿ ಆ ಊರನ್ನು ನೋಡಿದವರಷ್ಟೆ, ನಾಕಾರು ದಿನವಿದ್ದು ಆ ಊರನ್ನು ಕಂಡವರು, ಆ ಊರನ್ನು ಚೆನ್ನಾಗಿ ಪರಿಚಯ ಮಾಡಿಕೊಂಡವರು ಬಹುತೇಕ ಯಾರೂ ಇಲ್ಲ. ಅಂತಹದರಲ್ಲಿ ಇವರು ಪಾಂದುರಂಗನ ಆ ಪಂಢರಪುರದಲ್ಲಿ ಆಸ್ತಿ – ಮನೆ ಮಾಡಿದ್ದಾರೆ. ದೂಧ ಪಾಂಢರಿ ಅಕಲೂಜ ರೋಡಿನ ಮೇಲಿರುವ ಉಮಾ ಹೌಸಿಂಗ ಸೊಸಾಯಟಿಯ ನಂ. ೧೮ ಮನೆ ಇವರದು.
ಕೊನೆಯ ಮಗ ರಂಗನಾಥ ವಾಣಿಜ್ಯ ವಿಷಯದ, ಕಾಯದೆ ವಿಷಯದ ಪದವಿಧರ. ಇಂಡಸ್ಟ್ರಿಯಲ ರಿಲೇಶನ್ಸ ಮತ್ತು ಪರ್ಸೊನೆಲ ಮ್ಯಾನೆಜಮೆಂಟ ದಲ್ಲಿ ಸ್ನಾತಕೋತ್ತರ ಡಿಪ್ಲೋಮಾ ಕೂದ ಆಗಿದೆ. ಇನ್ವೆಸ್ಟಮೆಂಟ ಕನ್ಸಲ್ಟಂಟ ಆಗಿ ಸ್ವತಂತ್ರ ವಾಗಿ ಕೆಲಸ ಮಾದುತ್ತಿದ್ದರೆ. ಧಾರವಾಡ ಗಾಂಧಿ ನಗರದಲ್ಲಿ ಸ್ವಂತ ಮನೆಯಿದೆ. ಅಲ್ಲಿಯೆ ವಾಸ.
ಇದಿಷ್ಟು ನಾರಾಯಣ ಅವರ ಮಕ್ಕಳ ವಿಷಯ. ಪೂರ್ವಿಕರ ಪುಣ್ಯದಿಂದ ಶಿಕ್ಷಣ, ಉದ್ಯೋಗ, ಕೌಟುಂಬಿಕ ಜೀವನ, ಆರ್ಥಿಕ ಸ್ಥಿತಿಗತಿ, ಪ್ರವಾಸ ಯಾತ್ರೆ, ರೂಢಿಸಂಪ್ರದಾಯಗಳ ಪಾಲನೆ ಈ ಮೊದಲಾದ ವಿಷಯಗಳಲ್ಲಿ ಸಮಾಧಾನದ ಸ್ಥಿತಿ ಇದೆ. ಹಡೆದವರು, ಹಿರಿಯರು ನೋಡಿ ಸಂತೋಷಿಸಿ, ತಮ್ಮ ಕಾಲ ಬಂದಹಾಗೆ ನಿರ್ಗಮಿಸಿದರು.
ಮಕ್ಕಳಾಗದಿದ್ದ ಕೊರಗಿನಲ್ಲಿದ್ದ ನಾರಾಯಣ ಅವರ ಅಕ್ಕನ ಗಂಡ ಹಣಮಂತಾಚಾರ್ಯ ಕುರುಬಗಟ್ಟಿ ೧೯೬೪ರಲ್ಲಿ ನಾರಾಯಣ ಅವರ ಮಕ್ಕಳಲ್ಲಿ ನಾಕನೆಯವರಾದ ಕೃಷ್ಣ ಅವರನ್ನು ದತ್ತಕ ತೆಗೆದುಕೊಂಡು ಮಗನನ್ನಾಗಿ ಮಾಡಿಕೊಂಡರು. ಮರುವರ್ಷ ೧೯೬೫ ರಲ್ಲಿ ಕಾಲನ ಕರೆಗೆ ಓಗೊಟ್ಟರು. ೧೯೮೧ ರಲ್ಲಿ ನಾರಾಯಣ ಅವರ ಧರ್ಮ ಪತ್ನಿ ಲೀಲಾಬಾಯಿಯವರು ಇಲ್ಲವಾದರು.
ಸಾಕಿ ಸಲಹಿದ ಅಕ್ಕ ಹಣಮಕ್ಕ (ಇಂದಿರಾಬಾಯಿ) ಅವರಿಗೆ ೧೯೯೩ ರಲ್ಲಿ ಅರ್ಧಾಂಗವಾಯುವಿನ ಆಘಾತವಾಯಿತು. ಪೂರ್ಣವಾಗಿ ಹಾಸಿಗೆ ಹಿಡಿದರು. ತಮ್ಮ ನಾರಾಯಣ ಅವರ ಸೇವೆ ಶುಶ್ರೂಸೆಯಲ್ಲಿ ಯವುದಕ್ಕೂ ಕಡಿಮೆ ಮಾಡಲಿಲ್ಲ. ತಮ್ಮ ಕೃತಜ್ಞತೆಯನ್ನು ಸೇವಾರೂಪದಲ್ಲಿ ತೋರಿಸಿದರು.
ಆದರೆ ನಿಯತಿಯನ್ನು ಗೆದ್ದವರು ಯಾರು! ೧೯೯೬ ರಲ್ಲಿ ಅವರು ಮುಕ್ತರಾದರು. ನಾರಾಯಣ ಅವರು ಈ ಅಕ್ಕನನ್ನು ನೆನಸದ ದಿನವೆ ಇರಲಿಲ್ಲ. ಅವರನ್ನು ನೆನಸದೆ ಊಟವನ್ನು ಮಾಡಿತ್ತಿರಲಿಲ್ಲ. ತಾವು ತಮ್ಮ ಮಕ್ಕಳು ಇಷ್ಟು ಮುಂದೆ ಬಂದದ್ದರ ಹಿಂದೆ ಅವರ ಸಾಧನೆಯಿದೆ ಎಂದು ಪದೆ ಪದೆ ಸ್ಮರಿಸುತ್ತಿದ್ದರು.
ಅವರು ತಮ್ಮನ್ನು ಸಾಕಿ ಸಲಹಿದವರನ್ನು ನೆನೆದ ಹಾಗೆ ಇಂದು ನಾರಾಯಣ ಅವರ ಮಕ್ಕಳು ತಮ್ಮ ತಂದೆಯನ್ನು ಸ್ಮರಿಸುತ್ತಾರೆ. ತಮ್ಮ ಚಿಟಗುಬ್ಬಿ ಚಾಳಿನ ಆ ದಿನಗಳನ್ನು. “ನಮ್ಮ ಮನೆ ಶಹರದ ನಡುವೆ ಇದ್ದಿತು. ಅವರು ಕೆಲಸಕ್ಕೆ ಸ್ಟೇಶನ್ನಿಗೆ ಎರಡು ನಿಮಿಷದಲ್ಲಿ ಹೋಗಲು ಸಾಧ್ಯವಾಗುತ್ತಿತ್ತು. ಆ ಮನೆ ಮಧ್ಯವರ್ತಿ ಸ್ಥಳದಲ್ಲಿ ಇದ್ದುದರಿಂದ ಸದಾ ಒಭ್ಭರಿಲ್ಲ ಮತ್ತೊಬ್ಬರು ಬರು ಹೋಗುವವರು ಇದ್ದೇ ಇರುತ್ತಿದ್ದರು. ಊಟಕ್ಕೆ ಒಂದೆರಡು ಎಲೆ ಹೆಚ್ಚು ಬೀಳುತ್ತಿದ್ದುದು ಸಾಮಾನ್ಯವಾಗಿತ್ತು. ನಾರಾಯಣ ಅವರು ಜನರನ್ನು ಹಚ್ಚಿಕೊಂಡು ಇದ್ದರು. ತಮ್ಮ ಮಾತು ನಡೆದಲ್ಲೆಲ್ಲ ಹಲವರಿಗೆ ನೌಕರಿ ಕೊಡಿಸಿದರು. ಕಷ್ಟದಲ್ಲಿದ್ದ ಅವರ ಕುಟುಂಬೀಯರಿಗೂ ಕೈಲಾದ ಸಹಾಯ ಮಾಡಿಯೆ ಮಾಡುತ್ತಿದ್ದರು. ಹೀಗಾಗಿ ಇಂದಿಗೂ ಅನೇಕರು ಅವರನ್ನು ನೆನಪಿಸಿಕೊಳ್ಳುತ್ತಾರೆ,” ಎಂದು ಹೆಮ್ಮೆಯಿಂದ ಹೇಳುತ್ತಾರೆ ಅವರ ಕಡೆಯ ಮಗ ರಂಗನಾಥ.
ಬರೆದವರು : ಶ್ರೀಕಾಂತ ರಂ. ಮಂಗಳವೇಢೆ ಮುಗಿದದ್ದು : ಗುರುವಾರ, ಮಾಘ ಶುದ್ಧ ತ್ರಯೋದಶಿ, ೯ ಫೆಬ್ರುವರಿ ೨೦೧೭. ಹಗಲಿನ ೧೧.೪೫ ಗಂಟೆ. ಆಧಾರ : ನಾರಾಯಣ ಅವರ ಪುತ್ರ ರಂಗನಾಥ ಅವರ ಲಿಖಿತ ಮಾಹಿತಿ ಮತ್ತು ಕೇಳಿ ತಿಳಿದುಕೊಂಡದ್ದು.