ಮಹಾರಾಷ್ಟ್ರ ಸ್ಟೇಟ ಇಲೆಕ್ಟ್ರಿಸಿಟಿ ಬೋರ್ಡದಲ್ಲಿ ಇಂಜಿನೀಯರ, ಕರ್ಜತ (ರಾಯಗಡ ಜಿಲ್ಲೆ).
ಪತ್ನಿ: ಸೌ. ಮಮತಾ, ಗೃಹಿಣಿ
ಮಕ್ಕಳು: ೧. ಕಾರ್ತಿಕ B.E. (Mech.) ಇಂಜಿನೀಯರ ಮತ್ತು ೨. ಕಿರಣ B.E. (Mech.) ಇಂಜಿನೀಯರ
ವಿಳಾಸ: ನಂ.೧೮, ಉಮಾ ಹೌಸಿಂಗ ಸೊಸಾಯಟಿ, ದೂಧ ಪಾಂಢರಿ – ಅಕಲೂಜ ರೋಡ ಹತ್ತಿರ, ಪಂಢರಪುರ (ಸೊಲ್ಲಾಪುರ್ ಜಿಲ್ಲೆ) – ಮಹಾರಾಷ್ಟ್ರ.
ವ್ಯಕ್ತಿ ಪರಿಚಯ
ನಮ್ಮ ಮನೆತನದ ಕುಲದೇವರು ಪಾಂಡುರಂಗ. ಭೀಮೆಯ ಚಂದ್ರಭಾಗ ತೀರದ ಪಂಢರಪುರ ಅವನ ಆಲಯ. ಅಂತೆಯೆ ಅದು ತೀರ್ಥ ಕ್ಷೇತ್ರ.
ಕುಲ ದೇವರ ದರ್ಶನವನ್ನು ಮೇಲಿಂದ ಮೇಲೆ ಮಾಡುತ್ತಿರಲು ಪುಣ್ಯ ಬೇಕು. ಕೊನೆಗೆ, ಮನೆಯಲ್ಲಿ ಶುಭ ಕಾರ್ಯಗಳು ಆದಾಗಲಾದರೂ ಅಗತ್ಯವಾಗಿ ಹೋಗಿಬರಬೇಕು. ಕೊನೆಯ ಪಕ್ಷ ಹನ್ನೆರಡು ವರ್ಷಗಳ ಒಳಗೆ ಒಮ್ಮೆಯಾದರೂ ದರ್ಶನ ಪಡೆಯದೆ ಇರಬಾರದು. ಆದರೆ ಎಲ್ಲರಿಗೂ ಕೆಲವೊಮ್ಮೆ ಅನುಕೂಲವಿರುವದಿಲ್ಲ. ನಾನಾ ಕಾರಣಗಳಿಂದ ಸಾಧ್ಯವಾಗಿರುವದಿಲ್ಲ. ತಮ್ಮ ಜೀವಮಾನದಲ್ಲಿಯೆ ಎರಡು ಸಲ ಕೂಡ ಪಂಢರಪುರಕ್ಕೆ ಹೋಗದೆ ಇರುವ ಜನ ನಮ್ಮಲ್ಲಿದ್ದಾರೆ. ಹೋಗಿ ಬಂದಿದ್ದರೂ ಅಲ್ಲಿ ಇದ್ದುದು ಒಂದು ಒಪ್ಪತ್ತು, ಇಲ್ಲ ಒಂದು ದಿನ. ಆ ಊರನ್ನು ಚೆನ್ನಾಗಿ ನೋಡಿದವರು ಅಪರೂಪವೆ.
ಪಂಢರಪುರವನ್ನೇ ಸರಿಯಾಗಿ ನೋಡದವರು ಇರುವಾಗ ಹತ್ತಿರವೆ ಇರುವ ಶ್ರೀ ಟೀಕಾರಾಯರು ಹುಟ್ಟಿದ ಊರು ಮತ್ತು ನಮ್ಮ ಪೂರ್ವಿಕರ ಮೂಲ ಸ್ಥಳವಾದ ಮಂಗಳವೇಢೆ ಯನ್ನು ಎಷ್ಟು ಜನರು ನೋಡಿರಲು ಸಾಧ್ಯ!
ಆ ಪ್ರದೇಶವನ್ನು ಬಿಟ್ಟು ಮುರಗೋಡಕ್ಕೆ ವಲಸೆ ಬಂದು ಎರಡೂವರೆ ನೂರು ವ₹ರ್ಷಗಳಿಗಿಂತಲೂ ಹೆಚ್ಚಾಯಿತು. ಈಗ ಆ ಪ್ರದೇಶದಲ್ಲಿ ನಮ್ಮ ಆಸ್ತಿ ಪಾಸ್ತಿ ಏನೇನೂ ಇಲ್ಲ. ಹೀಗಿರುವಾಗ, ಈಗ ಆ ಪಂಢರಪುರ ಕ್ಷೇತ್ರದಲ್ಲಿಯೆ ನಮ್ಮವರೊಬ್ಬರು ಇದ್ದಾರೆ. ಸ್ವಂತ ಮನೆ ಮಾಡಿಕೊಂಡಿದ್ದಾರೆ ಎಂದರೆ ಅದು ಒಂದು ವಿಶೇಷ ಅಲ್ಲವೆ! ಕೇಶವ ನಾರಾಯಣ ಮಂಗಳವೇಡಿಯವರೆ ಆ ವ್ಯಕ್ತಿ. ಅಲ್ಲಿ ಅವರ ಮನೆ ಇದೆ ಎಂಬುದೆ ಅವರ ಒಂದು ಹೆಚ್ಚುಗಾರಿಕೆ.
ಇದು ಸಾಧ್ಯವಾದದ್ದು ಅವರು ಆ ರಾಜ್ಯದ ಇಲೆಕ್ಟ್ರಿಸಿಟಿ ಬೋರ್ಡಿನಲ್ಲಿ ಕೆಲಸಕ್ಕೆ ಸೇರಿದ್ದರಿಂದ ಮತ್ತು ಅದರಿಂದಾಗಿ ಪಂಢರಪುರದಲ್ಲಿ ಇಪ್ಪತ್ತೆಂಟು ವರ್ಷಗಳಷ್ಟು ಸುದೀರ್ಘ ಕಾಲ ೧೯೮೪ ರಿಂದ ೨೦೧೨ರ ವರೆಗೆ, ಇರಬೇಕಾಗಿ ಬಂದದ್ದರಿಂದ. ಅವರು ಮದುವೆಯಾಗಿ ಸಂಸಾ ರ ಮಾಡಿದ್ದು, ಮಕ್ಕಳು ಹುಟ್ಟಿದ್ದು ಬೆಳದದ್ದು, ಪದವಿಪೂರ್ವದ ವರೆಗಿನ ಶಾಲಾಭ್ಯಾಸ ಇದೆಲ್ಲವೂ ನಡೆದದ್ದು ಆ ಶ್ರೀ ಕ್ಷೇತ್ರದಲ್ಲಿಯೆ.
ಕೇಶವ ಅವರು ತಮ್ಮ ತಂದೆತಾಯಿಗಳ ಐದನೆ ಸಂತಾನವಾಗಿ ಹುಟ್ಟಿದ್ದು ೧೮ ಅಕ್ಟೋಬರ ೧೯೬೦ ರಲ್ಲಿ. ಉತ್ತರಾ ನಕ್ಷತ್ರ. ಕನ್ಯಾ ರಾಶಿ. ತಮ್ಮ ಅಣ್ಣ, ಅಕ್ಕಂದಿರು ಕಲಿತ, ಹುಬ್ಬಳ್ಳಿಯ ಗಣೇಶ ಪೇಟೆಯ ಸರಕಾರಿ ಶಲೆ ನಂ.೮ ಮತ್ತು ಲ್ಯಾಮಿಂಗಟನ ಹಾಯಸ್ಕೂಲಗಳಲ್ಲಿ ಇವರೂ ಕಲಿತರು. ನಂತರ ಸೇರಿಕೊಂಡದ್ದು ಧಾರವಾಡದಲ್ಲಿನ ಕೆ.ಎಚ್. ಕಬ್ಬೂರ ಇನ್ಸಟಿ ಟ್ಯೂಟ ಆಫ ಇಂಜಿನೀಯರಿಂಗದಲ್ಲಿ. ೧೯೭೮ರಲ್ಲಿ ಡಿಪ್ಲೊಮಾ ಮುಗಿದು ಇಂಜಿನೀಯರ(ಎಲೆಕ್ಟ್ರಿಕಲ) ಆದರು.
ಮರು ವರ್ಷವೆ ಎಂ.ಎಸ್. ಇ. ಬಿಯಲ್ಲಿ ಕೆಲಸ ಸಿಕ್ಕಿತು. ನಾಶಿಕ ಜಿಲ್ಲೆಯ ಸಿನ್ನರ ದಿಂದ ಅವರ ವೃತ್ತಿ ಜೀವನ ಶುರುವಾಯಿತು. ೧೯೮೪ ರಲ್ಲಿ ಪಂಢರಪುರಕ್ಕೆ ವರ್ಗವಾಯಿತು ಮುಂದೆ ೨೦೧೩ರ ವರೆಗೆ ಅಲ್ಲಿಯೆ ಇದ್ದರು. ೨೦೧೦ರಲ್ಲಿ ಪದೋನ್ನತಿ ಸಿಕ್ಕು ಜುನಿಯರ ಇಂಜಿನೀಯರ ಆಗಿದ್ದರು. ಮುಂದೆ ವರ್ಗವಾದದ್ದು ಕಲ್ಯಾಣ ಝೋನಿಗೆ. ಪೋಸ್ಟಿಂಗ ಆದದ್ದು ಕರ್ಜತ (ರಾಯಗಡ ಜಿಲ್ಲೆ) ಎಂಬ ಪುಣೆ- ಮುಂಬಯಿ ಮಧ್ಯದ ಊರಿಗೆ. ಸಧ್ಯ ಅಲ್ಲಿಯೆ ಇದ್ದಾರೆ.
ಮದುವೆ: ಕೇಶವ ಅವರು ೧೯೯೦ರಲ್ಲಿ ವಿವಾಹ ಸಂಪನ್ನರಾದರು. ಧಾರವಾಡದ, ಭಾರದ್ವಾಜ ಗೊತ್ರದ ಮನೋಹರರಾವ ವೆಂಕಟರಾವ ತಲವಾಯಿ ಮತ್ತು ಗೀತಾಬಾಯಿ ಅವರ ಮಗಳು ಮಮತಾ ಎಂಬುವರ ಜೊತೆ ಮೇ ೧೦ರಂದು ಸರಸ್ವತಿ ನಿಕೇತನದಲ್ಲಿ ನಡೆಯಿತು. ಮಮತಾ ಅವರು ಮದುವೆಯಾಗಿ ಪದ್ಮಾ ಎಂಬ ಹೆಸರು ಪಡೆದರು .
ಮಮತಾ ಅವರ ತಂದೆ ಮನೋಹರರಾವ ಹೆಬ್ಬಳ್ಳಿಯಲ್ಲಿ ಹುಟ್ಟಿದವರು. ಕರ್ನಾಟಕ ಸರಕಾರದ ಪಶುವೈದ್ಯ ಇಲಾಖೆಯಲ್ಲಿ ಲಾಯ್ವಸ್ಟಾಕ ಇನ್ಸಪೆಕ್ಟರ ಆಗಿದ್ದರು. ತಮ್ಮ ಸೇವಾವಧಿಯಲ್ಲಿ ಅನೇಕ ಸ್ಥಳಗಳಲ್ಲಿ ಕೆಲಸ ಮಾಡಿ ಧಾರವಾಡದಲ್ಲಿದ್ದಾಗ ನಿವೃತ್ತಿ ಹೊಂದಿದರು. ಅವರ ಪತ್ನಿ ಅಂದರೆ ಮಮತಾ ಅವರ ತಾಯಿ ಗೀತಾ ಅವರು ಕಿತ್ತೂರಿನ ಗಡಗಿ ಮನೆತನದವರು. ಪ್ರಾಥಮಿಕ ಶಾಲಾ ಶಿಕ್ಷಿಕೆಯಾಗಿ ನಿವೃತ್ತಿ ಹೊಂದಿದವರು. ಈಗ ಇಲ್ಲ. ೨೦೧೩ರಲ್ಲಿ ತೀರಿಕೊಂಡರು.
aವರಿಗೆ ರಾಘವೇಂದ್ರ ಎಂಬ ಅಣ್ಣ ಮತ್ತು ಸುಜಾತಾ ಎಂಬ ತಂಗಿ ಇದ್ದಾರೆ. ರಾಘವೇಂದ್ರ ಅವರು ಎನ್.ಟಿ.ಟಿ.ಎಫ್. ದಲ್ಲಿ ಕಲಿತು, ಕಿರ್ಲೊಸ್ಕರ ಮತ್ತು ಬಜಾಜ ಕಂಪನಿಗಳಲ್ಲಿ ಕೆಲಸ ಮಾಡಿ ಈಗ ಅಸ್ಟ್ರೇಲಿಯಾದ ಮೆಲ್ಬೊರ್ನದಲ್ಲಿ ವಿವಾಹಿತ. ಪತ್ನಿ ಸೌ.ಜ್ಯೋತಿ ಮತ್ತು ಮಗಳು ಸಂಜನಾ, ಮಗ — ಜೊತೆಯಲ್ಲಿ ಸ್ಥಿತರಾಗಿದ್ದಾರೆ. ತಂಗಿ ಸುಜಾತಾ ಕರ್ನಾಟಕ ವಿಶ್ವ ವಿದ್ಯಾಲಯದಿಂದ Ph.D ಮಾಡಿದವರು. ವಿದ್ಯಾಗಿರಿಯಲ್ಲಿದ್ದ ಸತೀಶ ಮೋಹನರಾವ ಕುಲಕರ್ಣಿ ಅವರ ಪತ್ನಿ. ಈ ದಂಪತಿಗಳೂ ತಮ್ಮ ಇಬ್ಬರು ಗಂಡು ಮಕ್ಕಳ ಸಹಿತ ಮೆಲ್ಬೊರ್ನದಲ್ಲಿಯೆ ಸ್ಥಿತರಾಗಿದ್ದಾರೆ.
ಕೇಶವ – ಮಮತಾ ಅವರ ಮಕ್ಕಳು : ಇವರಿಗೆ ಕಾರ್ತಿಕ ಮತ್ತು ಕಿರಣ ಎಂಬ ಇಬ್ಬರು ಮಕ್ಕಳು.
ಕಾರ್ತಿಕ ಹುಟ್ಟಿದ್ದು ೮ ಮೇ ೧೯೯೧ ರಂದು. ಶತ ತಾರಾ ನಕ್ಷತ್ರ, ಕುಂಭ ರಾಶಿ. ಧಾರವಾಡದಲ್ಲಿ ಕರ್ನಾಟಕ ಹಾಯಸ್ಕೂಲಿನಲ್ಲಿ ನಂತರ SDM Engineering College ದಲ್ಲಿ ಕಲಿತು ೨೦೧೨ರಲ್ಲಿ B.E (Mech.) ಇಂಜಿನೀಯರ ಆಗಿದ್ದಾರೆ. ಮುಂದೆ ಸುಮಾರು ಎರಡು ವರ್ಷ ಪುಣೆಯಲ್ಲಿ ಒಂದು ಬಹುದೇಶೀಯ ಕಂಪನಿಯಲ್ಲಿ ಇದ್ದು, ಈಗ ಮೈಸೂರಿನಲ್ಲಿ MBA ಮಾಡುತ್ತಿದ್ದಾರೆ.
ಕಿರಣ ಹುಟ್ಟಿದ್ದು ಅಕ್ಟೊಬರ ೧೮, ೧೯೯೫ ರಲ್ಲಿ. ಪುಷ್ಯ ನಕ್ಷತ್ರ, ಕರ್ಕ ರಾಶಿ. ಈಗ ಧಾರವಾಡದಲ್ಲಿ SDM Engineering College ದ ವಿದ್ಯಾರ್ಥಿ.
ಬರೆದವರು : ಶ್ರೀಕಾಂತ ರಂ. ಮಂಗಳವೇಢೆ ಮುಗಿದದ್ದು : ಶನಿವಾರ, ಮಾಘ ಕೃಷ್ಣ ಪಕ್ಷ ಪ್ರತಿಪದಾ, ೧೧-೨-೨೦೧೭. ಬೆಳಗಿನ ೭.೫ ಗಂಟೆ. ಆಧಾರ :ಕೇಶವ ಅವರ ತಮ್ಮ ರಂಗನಾಥ ಅವರು ಕೊಟ್ಟ ಲಿಖಿತ ಮಾಹಿ ಮತ್ತು ಕೇಳಿ ತಿಳಿದುಕೊಂಡದ್ದು.