ರಂಗನಾಥ
ರಂಗನಾಥ | ಹುಟ್ಟಿದ ದಿನಾಂಕ: 1962-06-03 | ||
ತಂದೆ: ನಾರಾಯಣ | ತಾಯಿ: | ||
ಮಕ್ಕಳು: ಅಮೋಘ | |||
ಒಡಹುಟ್ಟಿದವರು: ಶೋಭಾ, ವಾದಿರಾಜ, ಗೀತಾ, ಕೃಷ್ಣ, ಕೇಶವ | |||
ವಿಳಾಸ: "ಶ್ರೀ ಲಕ್ಷ್ಮಿ ನಾರಾಯಣ", ೪೦, ೩ನೇ ಮುಖ್ಯ ರಸ್ತೆ, ಶಕ್ತಿ ನಗರ (ಗಾಂಧಿ ನಗರ)ಧಾರವಾಡ, ಕರ್ನಾಟಕ-೫೮೦೦೦೪ | |||
ಮೊಬೈಲ್: +91 9844080926 | Branch: 1 | Generation: 9 |
ವ್ಯಕ್ತಿ ಚಿತ್ರ
ರಂಗನಾಥ ನಾರಾಯಣ ಮಂಗಳವೇಢೆ
ಸ್ವಾಮಿರಾಯಾಚಾರ್ಯರ ಪ್ರಪೌತ್ರ, ರಾಮಾಚಾರ್ಯರ ಪೌತ್ರ, ನಾರಾಯಣ ಅವರ ಪುತ್ರ.
ಧಾರವಾಡದ ನಿವಾಸಿ
ಕಿರು ಪರಿಚಯ
ಒಂದನೆ ಟಿಸಿಲಿನ ಒಂಬತ್ತನೆ ತಲೆಮಾರಿನವರು.
ತಂದೆ-ತಾಯಿ: ನಾರಾಯಣ ಮತ್ತು ಲೀಲಾಬಾಯಿ
ಜನ್ಮ ದಿನಾಂಕ ಮತ್ತು ಸ್ಥಳ: ೩ ಜೂನ ೧೯೬೨, ಹುಬ್ಬಳ್ಳಿಯಲ್ಲಿ
ನಕ್ಷತ್ರ – ರಾಶಿ: ರೋಹಿಣಿ (೩), ವೃಷಭ ರಾಶಿ.
ಒಡಹುಟ್ಟಿದವರು: ೧. ಶೋಭಾ (ಲಕ್ಷ್ಮಣ ತಲವಾಯಿಯವರ ಪತ್ನಿ, ಧಾರವಾಡ) (ಎಲ್ಲಕ್ಕೂ ಹಿರಿಯ ಅಕ್ಕ), ೨. ವಾದಿರಾಜ (ಹುಬ್ಬಳ್ಳಿ) (ಅಣ್ಣ) ೩. ಗೀತಾ (ಅಜಿತ ಬೆಳ್ಳುಬ್ಬಿಯವರ ಪತ್ನಿ, ಶ್ರೀ ರಾಮನಗರ – ಕೊಪ್ಪಳ ಜಿಲ್ಲೆ) (ಅಕ್ಕ) ೪. ಕೃಷ್ಣ (ಮೈಸೂರು) (ಅಣ್ಣ) ೫. ಕೇಶವ (ಪಂಢರಪುರ) (ಅಣ್ಣ) – (೬ ನೆಯವರಾದ ರಂಗನಾಥ ಕೊನೆಯವರು, ಹೀಗಾಗಿ ಈ ಐವರಿಗೂ ತಮ್ಮ).
ಇನ್ವೆಸ್ಟಮೆಂಟ ಕನ್ಸಲ್ಟಂಟ (Investment Consultant)
ಪತ್ನಿ: ಸೌ. ದಮಯಂತಿ (ದಯಾ ಎಂದೆ ಹೆಚ್ಚಾಗಿ ಪರಿಚಿತ), ಲೆಕ್ಚರರ, ಕೆ.ಎಚ್. ಕಬ್ಬೂರ ಇನಸ್ಟಿಟ್ಯೂಟ ಆಫ ಇಂಜಿನೀಯರಿಂಗ, ವಿದ್ಯಾಗಿರಿ – ಧಾರವಾಡ.
ಮಕ್ಕಳು: ಅಮೋಘ (ಮಾಧ್ಯಮಿಕ ಶಾಲಾ ವಿದ್ಯಾರ್ಥಿ)
ವಿಳಾಸ: ’ಶ್ರೀ ಲಕ್ಷ್ಮೀ ನಾರಾಯಣ’, ೪೦, ಮೂರನೆ ಮುಖ್ಯ ರಸ್ತೆ, ಶಕ್ತಿ ನಗರ (ಗಾಂಧಿ ನಗರ), ಧಾರವಾಡ – ೫೮೦೦೦೪.
ದೂರವಾಣಿ: ೦೮೩೬ – ೨೪೬೧ ೯೩೭ ; (ಮೋ) – ೯೮೪೪ ೦೮೦೯ ೨೬
ಇ-ಮೇಲ: ranganathmangalvedi@gmail.com
ವ್ಯಕ್ತಿ ಪರಿಚಯ
ತಂದೆ ನಾರಾಯಣ ರಾಮಚಂದ್ರ ಮಂಗಳವೇಡಿ ಮತ್ತು ತಾಯಿ ಲೀಲಾಬಾಯಿ ಇವರ ಆರನೆಯ ಮತ್ತು ಕೊನೆಯ ಸಂತಾನ ರಂಗನಾಥ. ಹುಬ್ಬಳ್ಳಿಯಲ್ಲಿ ಹುಟ್ಟಿ, ಅಲ್ಲಿಯೆ ಕಲಿತು ಪದವಿ ಪಡೆದ ಇವರು ಈಗ ವಾಸವಾಗಿರುವದು ಧಾರವಾಡದ ಗಾಂಧಿ ನಗರದಲ್ಲಿನ (ಶಕ್ತಿನಗರವೆಂದೂ ಆ ಭಾಗದ ಹೆಸರು) “ಲಕ್ಷ್ಮೀ ನಾರಾಯಣ” ಎಂಬ ಹೆಸರಿನ ಸ್ವಂತ ಮನೆಯಲ್ಲಿ. ಇನವೆಸ್ಟಮೆಂಟ ಕನ್ಸಲ್ಟಂಟ ಆಗಿ ಹುಬ್ಬಳ್ಳಿಯಲ್ಲಿ ತಮ್ಮದೇ ಆಫೀಸು ಹೊಂದಿದ್ದಾರೆ. ನಿತ್ಯ ಅಲ್ಲಿಗೆ ಹೋಗಿ ಬರುತ್ತಾರೆ. ಪತ್ನಿ ಸೌ. ದಯವಂತಿ ಸಿಲೆಕ್ಷನ ಗ್ರೇಡ ಲೆಕ್ಚರರ ಆಗಿ ವಿದ್ಯಾಗಿರಿ – ಧಾರವಾಡದಲ್ಲಿನ ಕೆ.ಎಚ್. ಕಬ್ಬೂರ ಇನಸ್ಟಿಟ್ಯೂಟ ಆಫ ಇಂಜಿನೀಯರಿಂಗದಲ್ಲಿ ಕೆಲಸ ಮಾಡುತ್ತಿದ್ದಾರೆ. ಒಬ್ಬನೆ ಮಗ ಅಮೋಘ ಮಾಧ್ಯಮಿಕ ಶಾಲಾ ವಿದ್ಯಾರ್ಥಿ.
ಇವರಿಗೆ ಇಬ್ಬರು ಅಕ್ಕಂದಿರು, ಮೂವರು ಅಣ್ಣಂದಿರು. ಈ ಒಡಹುಟ್ಟಿದವರಲ್ಲಿ ಎಲ್ಲಕ್ಕೂ ಹಿರಿಯವರು ಶೋಭಾ. ಜನತಾ ಶಿಕ್ಷಣ ಸಮಿತಿಯಲ್ಲಿ ಕೆಲಸದಲ್ಲಿದ್ದು ನಿವೃತ್ತರಾಗಿರುವ ಲಕ್ಷ್ಮಣ ವೆಂಕಟರಾವ ತಲವಾಯಿ ಇವರ ಪತ್ನಿ. ಯಾಲಕ್ಕಿ ಶೆಟ್ಟರ ಕಾಲನಿ, ಧಾರವಾಡದಲ್ಲಿದ್ದಾರೆ. ಎರಡನೆಯವರು ವಾದಿರಾಜ. ಐ.ಸಿ.ಐ.ಸಿ ಬ್ಯಾಂಕದಲ್ಲಿ ಮ್ಯಾನೆಜರ ಆಗಿ ಕಲ್ಯಾಣ ಶಾಖೆಯಲ್ಲಿ (ಮಹಾರಾಷ್ಟ್ರ) ಇರುವಾಗ ನಿವೃತ್ತರಾಗಿ, ಅನೇಕ ವ₹ರ್ಷ ಡೊಂಬಿವಲಿಯಲ್ಲಿ ಇದ್ದು ಇತ್ತೀಚೆಗೆ ಹುಬ್ಬಳ್ಳಿಗೆ- ಅಲ್ಲಿಯೂ ಅವರ ಒಂದು ಮನೆಯಿದೆ- ಬಂದು ಇದ್ದಾರೆ. ಮೂರನೆಯವರು ಗೀತಾ. ನಿವೃತ್ತ ಶಿಕ್ಷಿಕೆ ಮತ್ತು ಅಜಿತ ವಸಂತರಾವ ಬೆಳ್ಳುಬ್ಬಿ ಯವರ ಪತ್ನಿ. ಬೆಳ್ಳುಬ್ಬಿಯವರು, ಮರಳಿ ಸಕ್ಕರೆ ಕಾರಖಾನೆಯಲ್ಲಿ ಅಕೌಂಟಂಟ ಎಂದು ಕೆಲಸ ಮಾಡಿ ನಿವೃತ್ತರಾಗಿ ಶ್ರೀ ರಾಮನಗರದಲ್ಲಿ (ಗಂಗಾವತಿ ತಾಲುಕು, ಕೊಪ್ಪಳ ಜಿಲ್ಲೆ) ವಾಸವಾಗಿದ್ದಾರೆ. ನಾಕನೆಯವರು ಕೃಷ್ಣ. ಸ್ಟೇಟ ಬ್ಯಾಂಕ ಆಫ ಇಂಡಿಯಾದ ಶ್ರೀರಂಗ ಪಟ್ಟಣದಲ್ಲಿ ಕೆಲಸ. ಮೈಸೂರಿನಲ್ಲಿ ವಾಸ. ಐದನೆಯವರು ಕೇಶವ. ಇಂಜಿನೀಯರ ಆಗಿ ಮಹಾರಾಷ್ಟ್ರ ಸ್ಟೇಟ ಇಲೆಕ್ಟ್ರಿಸಿಟಿ ಬೋರ್ಡದಲ್ಲಿ ಕೆಲಸ. ಸಧ್ಯ (ಪುಣೆ ಮುಂಬಯಿ ನಡುವೆ) ಕರ್ಜತದಲ್ಲಿದ್ದಾರೆ.
ಜನ್ಮ ದಿನಾಂಕ ಮತ್ತು ಹುಟ್ಟಿದ ಊರು: ೩ ಜೂನ ೧೯೬೨ ರಂದು ಹುಬ್ಬಳ್ಳಿಯಲ್ಲಿ. ಜನ್ಮ ನಕ್ಷತ್ರ -ರೋಹಿಣಿ (ಮೂರನೆ ಚರಣ), ವೃಷಭ ರಾಶಿ. ತಂದೆ ನಾರಾಯಣ, ರೇಲ್ವೆದಲ್ಲಿ ಟಿ.ಟಿ.ಸಿ ಆಗಿದ್ದರು. ತಾಯಿ ಗೃಹಿಣಿ.
ಶಿಕ್ಷಣ: ಗಣೆಶ ಪೇಟೆಯಲ್ಲಿನ ಸರಕಾರಿ ಪ್ರಾಥಮಿಕ ಶಾಲೆ ನಂ. ೮ ರಲ್ಲಿ ೭ನೆ ಇಯತ್ತೆಯ ವರೆಗೆ, ಲ್ಯಾಮಿಂಗಟನ ಹಾಯಸ್ಕೂಲಿನಲ್ಲಿ ಮಾಧ್ಯಮಿಕ ಶಿಕ್ಷಣವಾಗಿ ೧೯೭೮ರ ಎಪ್ರಿಲದಲ್ಲಿ ಎಸ್.ಎಸ್.ಎಲ್.ಸಿ ಪಾಸಾದುದು. ಮುಂದೆ ಜಗದ್ಗುರು ಗಂಗಾಧರ ವಾಣಿಜ್ಯ ಮಹಾವಿದ್ಯಾಲಯದಲ್ಲಿ ಕಾಲೇಜು ಶಿಕ್ಷಣ ಮುಂದುವರೆದು ೧೯೮೨ರಲ್ಲಿ B.Com. ಪದವಿ ಪಡೆದುದು. ಆ ಮೇಲೆ ರಂಗನಾಥ ಅವರು ಸಕ್ರಿ ಲಾ ಕಾಲೇಜಿನಲ್ಲಿ ಕಲಿತು L.LB. ಆದರು (ಬಹುಶಃ ೧೯೮೪ ರಲ್ಲಿ). ಹಾಗೆಯೆ ಜೆ.ಎಸ್.ಎಸ್. ಕಾಲೇಜಿನಲ್ಲಿ ಕಲಿತು Post Graduation Diploma in Industrial Relations & Personnel Management (PGD in IR & PM) ಪಡೆದರು.
ಉದ್ಯೊಗ: Investment Consultant ಎಂದು ಸ್ವತಂತ್ರ ಸಲಹೆಗಾರರಾಗಿ, ಹುಬ್ಬಳ್ಳಿಯಲ್ಲಿ ಆಫೀಸು ಇಟ್ಟುಕೊಂಡಿದ್ದಾರೆ.
ವಿವಾಹ: ದಯಾ ಎಂದೆ ಹೆಚ್ಚಾಗಿ ಪರಿಚಿತವಾಗಿರುವ ದಯವಂತಿ ಅವರ ಜೊತೆ ಇವರ ವಿವಾಹ ೧೯೯೭ರ ಮೇ ೧೦ರಂದು, ಧಾರವಾಡದ ಟಿಕಾರೆ ರೋಡಮೇಲೆ ಇರುವ ಗೋಪಾಲಕೃಷ್ಣ ಮಂಗಲ ಕಾರ್ಯಾಲಯದಲ್ಲಿ ನಡೆಯಿತು. ಸೌ. ದಯವಂತಿ ಅವರು ಯಜ್ಞೇಶ್ವರ ಚಿದಂಬರ ದೀಕ್ಷಿತ ಮತ್ತು ಸೌ. ಮಾಧುರಿ ಅವರ ಎರಡನೆ ಮಗಳು. ತೌರುಮನೆಯದೂ ಅದೇ ಹೆಸರು.
ಜನ್ಮ ದಿನಾಂಕ ಮತ್ತು ಹುಟ್ಟಿದ ಊರು: ೩-೩-೧೯೬೭ ರಲ್ಲಿ ಬಾಗಲಕೋಟೆಯಲ್ಲಿ ಹುಟ್ಟಿದರು.
ತಂದೆ ಯಜ್ಞೇಶ್ವರ ಅವರು ಅಂಚೆ ಇಲಾಖೆಯಲ್ಲಿ ಕೆಲಸ ಮಾಡಿದವರು. ದಾರವಾಡದಲ್ಲಿ ಸೀನಿಯರ ಸುಪರಿಂಟೆಂಡೆಂಟ ಆಗಿದ್ದಾಗ ನಿವೃತ್ತಿ ಹೊಂದಿದವರು. ತಡಕೋಡದವರಾದ ಇವರು ಇವರು ಮುರಗೋಡದ ಶ್ರೀ. ಚಿದಂಬರ ದೀಕ್ಷಿತರ ವಂಶಸ್ಥರು. ಬೆಳಗಾವಿಯಲ್ಲಿ ಕಲಿತು B.A. ಆದವರು. ತಾಯಿ ಸೌ. ಮಾಧುರಿ (ತೌರು ಮನೆಯಲ್ಲಿನ ವಿದ್ಯಾ) ಅವರು ಎಸ್.ಎಸ್.ಸಿ ಆದವರು. ಹುಕ್ಕೇರಿಯ ನಾಡಗೌಡಾ ಕುಟುಂಬಕ್ಕೆ ಸೇರಿದವರು. ತಂದೆ ಜಿ. ನಾಡಗೌಡಾ ಅವರು ಬೆಳಗಾವಿಯಲ್ಲಿ ಸರಾಫಿ ಅಂಗಡಿಯನ್ನು – ಪ್ರಸಿದ್ಧ ಪೋದ್ದಾರ ಅವರ ಸರಾಫಿ ಅಂಗಡಿಯ ಹತ್ತಿರವೆ – ಇಟ್ಟುಕೊಂಡಿದ್ದರು.
ಈ ದೀಕ್ಷಿತ ದಂಪತಿಗಳ ಎರಡನೆ ಮಗಳು ದಯವಂತಿ ಅವರು Post graduation Diploma in Computer Science ಮದ್ರಾಸದಲ್ಲಿ ಮಾಡಿ, ನಂತರ M.Sc. (IT) (Mysore University ದೂರ ಶಿಕ್ಷಣ) ಹಾಗು M. Tech in Computer Science ಮಾಡಿಕೊಂಡಿದ್ದಾರೆ. ಈ ಮೊದಲು ಅವರು B.E. (Electronics) ಮಾಡಿಕೊಂಡಿದ್ದು ೧೯೯೮ರಲ್ಲಿ ಹುಬ್ಬಳ್ಳಿಯ BVB (ಭೂಮರೆಡ್ಡಿ) College ದಿಂದ. ಪ್ರಾಥಮಿಕ ಶಿಕ್ಷಣ ಐದನೆ ಇಯತ್ತೆವರೆಗೆ ಗೋಕಾಕದಲ್ಲಿ, ನಂತರ ಪಿ.ಯು. (ಎರಡು) ವರೆಗೆ ಕಿತ್ತೂರಿನ ಸೈನಿಕ ರೆಸಿಡೆನ್ಸಿಯಲ ಸ್ಕೂಲ ಫಾರ ಗರ್ಲ್ಸದಲ್ಲಿ ಕಲಿತದ್ದು. ಸಧ್ಯ ಸೆಲೆಕ್ಷನ ಗ್ರೇಡ ಲೆಕ್ಚರರ ಎಂದು ಕೆ.ಎಚ್. ಕಬ್ಬೂರ ಇನಸ್ಟಿಟ್ಯೂಟ ಆಫ ಇಂಜಿನೀಯರಿಂಗ, ಧಾರವಾಡದಲ್ಲಿ ಕೆಲಸ ಮಾಡುತ್ತಿದ್ದಾರೆ.
ಸೌ.ದಯಾ ಅವರ ಅಕ್ಕ ಅನುರಾಧಾ ಅವರು Ph D in Journalism ಮಾಡಿ ಆಕಾಶವಾಣಿಯಲ್ಲಿ Programme Executive ಆಗಿ ಹೊಸಪೇಟೆಯಲ್ಲಿ ಕೆಲಸ ಮಾಡುತ್ತಿದ್ದಾರೆ. ಅವರ ಪತಿ ಡಾ. ಕೃಷ್ಣ ಕಟ್ಟಿ (ಯಲಗೂರದವರು) ಹಂಪಿ ವಿಶ್ವ ವಿದ್ಯಾಲಯದಲ್ಲಿ Planninga Officer ಎಂದು ಕೆಲಸ ಮಾಡುತ್ತಿದ್ದಾರೆ. ಹೊಸಪೇಟೆಯಲ್ಲಿ ಮನೆ ಮಾಡಿದ್ದಾರೆ. ಅವರ ಒಬ್ಬನೆ ಮಗ ಪಾರ್ಥ B.E. ಆಗಿದ್ದು ಬೆಂಗಳೂರಿನಲ್ಲಿ ಕೆಲಸಒಂದರಲ್ಲಿದ್ದಾರೆ.
ಸೌ.ದಯಾ ಅವರ ತಂಗಿ ಮಥುರಾ ಅವರು M.A. (music) ಮಾಡಿ ಸಂಗೀತ ಶಿಕ್ಷಿಕೆಯಾಗಿ ಧಾರವಾದದ ಕೇಂದ್ರೀಯ ವಿದ್ಯಾಲಯದಲ್ಲಿ ಕೆಲಸ ಮಾಡುತ್ತಿದ್ದಾರೆ. ಅವರು ಧಾರವಾಡದ ಆಕಾಶವಾಣಿಯಲ್ಲಿ ಎ ಗ್ರೇಡ ಕಲಾವಿದೆಯೂ ಆಗಿದ್ದು ಬಾನುಲಿಯಲ್ಲಿ ಮತ್ತು ಹೊರಗೆಕೂಡ ಅನೇಕ ಕಾರ್ಯಕ್ರಮ ಕೊಟ್ಟಿದ್ದಾರೆ. ಕೆಲವು CD ಗಳೂ ಆಗಿವೆ. ಇವರ ಪತಿ ಡಾ. ರಮೇಶ ಕುಲಕರ್ಣಿ ಕರ್ನಾಟಕ ವಿಶ್ವ ವಿದ್ಯಾಲಯದಲ್ಲಿ Associate Professor ಆಗಿದ್ದರೆ. ಒಬ್ಬಳೆ ಮಗಳು ಮಯೂರಿ ಬೆಳಗಾವಿಯಲ್ಲಿ BAMS ಮಾಡುತ್ತಿದ್ದಾರೆ.
ರಂಗನಾಥ – ದಯಾ ದಂಪತಿಗಳ ಮಕ್ಕಳು: ಇವರ ಏಕಮಾತ್ರ ಪುತ್ರ ಅಮೋಘ. ಹುಟ್ಟಿದ್ದು ಅಗಸ್ಟ ೧೫, ೨೦೦೩, ಧಾರವಾದದಲ್ಲಿ. ಅದು ದೇಶಕ್ಕೆ ಸ್ವಾತಂತ್ರ್ಯ ಬಂದ ದಿನವಾಗಿದ್ದ ಹಾಗೆ ಅಮೋಘ ಹುಟ್ಟಿದ ತಿಥಿ ಶ್ರೀ ರಾಘವೇಂದ್ರ ಸ್ವಾಮಿಗಳ ಉತ್ತರಾರಾಧನೆಯ ದಿವಸ. ಶ್ರಾವಣ ಕೃಷ್ಣ ತೃತೀಯಾ. ಉತ್ತರಾ ಭಾದ್ರಪದ (೧ನೆ ಚರಣ), ಮೀನ ರಾಶಿ.
ರಂಗನಾಥ ಅವರು ಧಾರವಾಡದ ಶಕ್ತಿನಗರದಲ್ಲಿನ ೬೦ ಫೂ . X ೪೦ ಫೂ. ನಿವೇಶನದಲ್ಲಿ ಮನೆಯನ್ನು ಕಟ್ಟಿಸಿದ್ದು ೨೦೦೩ರ ನವೆಂಬರದಲ್ಲಿ. ಕಾರ್ತಿಕ ಮಾಸ. ಶುದ್ಧ ತ್ರಯೋದಶಿ. ತುಲಸಿ ಲಗ್ನದ ಮುರುದಿನ. ಆಗಿನಿಂದ ಅಲ್ಲಿಯೆ ವಾಸವಾಗಿದ್ದಾರೆ. ಅದಕ್ಕೂ ಮೊದಲು ತಂದೆಯ ಹತ್ತಿರ ಚಿಟಗುಪ್ಪಿ ಚಾಳ, ಸ್ಟೇಶನ ರೋಡ, ಹುಬ್ಬಳ್ಳಿಯಲ್ಲಿ ಇದ್ದರು ಮತ್ತು ಅವರ ಬಾಲ್ಯ, ಶಿಕ್ಷಣ, ಮದುವೆ ಎಲ್ಲವೂ ಅಲ್ಲಿದ್ದಾಗಲೆ ಆದುದು. ವಾಹನ ಭಾಗ್ಯವೂ ಚೆನ್ನಾಗಿಯೆ ಇದ್ದು ಮೊದಲು Maruti 800 ಕಾರು ಇದ್ದಿತು. ಈಗ Zen Estilo ಕಾರು ಇದೆ.
ಪ್ರವಾಸ, ತೀರ್ಥ ಕ್ಷೇತ್ರಗಳ ದರ್ಶನ: ರಂಗನಾಥ ಅವರಿಗೆ ಬಲವಾದ ಪ್ರವಾಸ ಯೋಗವೂ ಇದ್ದಿರಬೇಕು. ಹೆಚ್ಚು ಕಡಿಮೆ ಭಾರತದ ಎಲ್ಲ ಮಹತ್ವದ ನಗರಗಳನ್ನು – ಮುಂಬಯಿ, ಬೆಂಗಳೂರು, ದಿಲ್ಲಿ, ಹೈದರಾಬಾದ, ಮದ್ರಾಸ (ಚೆನ್ನೈ), ಅಹಮದಾಬಾದ, ತ್ರಿವೇಂದ್ರಮ, ಕೋಚೀನ, ಉದಯಪುರ, ಜೈಪುರ ಈ ಎಲ್ಲವುಗಳನ್ನೂ ನೋಡಿದ್ದಾರೆ, ಮದುವೆ ಆದಮೇಲೆ. ವಿದೇಶ ಪ್ರವಾಸವೂ – ಸಿಂಗಾಪುರ, ಮಲೇಶ್ಯಾ, ಥಾಯಲ್ಯಾಂಡ ಗಳಿಗೆ – ಆಗಿದೆ, ೨೦೧೩ರಲ್ಲಿ ಪತ್ನಿ-ಪುತ್ರ ರ ಜೊತೆ.
ಸಾಕಷ್ಟು ಪುಣ್ಯಕ್ಷೇತ್ರ ದರ್ಶನ, ತೀರ್ಥ ಯಾತ್ರೆ ಕೂಡ ಆಗಿದೆ, ಕಾಶಿ, ಪ್ರಯಾಗ, ಗಯಾ ಮತ್ತು ಬದರಿ ಈ ಕ್ಷೇತ್ರಗಳನ್ನುಳಿದು, ಬೇರೆ ಅನೇಕ ಕ್ಷೇತ್ರ ಯಾತ್ರೆ ಆಗಿದೆ. ತಂದೆತಾಯಿ ಜೊತೆ ರಾಮೇಶ್ವರ, ಕನ್ಯಾಕುಮಾರಿ, ಮಧುರೈ ಈ ಎಲ್ಲ ಕಡೆ ಮದುವೆಯ ಮೊದಲು ೧೯೭೪ರಲ್ಲಿ ಆಗಿದೆ. ತಿರುಪತಿಗೆ ಹಲವು ಸಲ, ಎಂಟು ಒಂಬತ್ತು ಸಲ, ಹೋಗಿ ಬಂದದ್ದಾಗಿದೆ. ಒಂದೆರಡು ವರ್ಷಗಳನ್ನು ಬಿಟ್ಟು ೧೯೭೪ರಿಂದ ಇಲ್ಲಿನವರೆಗೆ ಪ್ರತಿ ವರ್ಷ ಆರಾಧನೆಯ ವೇಳೆಗೆ ಮಂತ್ರಾಲಯಕ್ಕೆ ಹೋಗಿಬರುವದಾಗಿದೆ. ಮಾತೃ ಗಯಾಕ್ಕೆ ೨೦೦೦ದ ಇಸವಿಯಲ್ಲಿ ಒಬ್ಬನೆ ಹೋಗಿದ್ದಿದೆ. ಜಗನ್ನಾಥಪುರಿಯನ್ನು ಹಾಗೆಯೆ ಮತ್ತೆ ಬೇರೆ ಕೆಲ ಕ್ಷೇತ್ರಗಳನ್ನು ಏಳೆಂಟು ವರ್ಷದವರಿದ್ದಾಗಲೆ, ತಂದೆತಾಯಿ ಜೊತೆ ಹೋಗಿದ್ದಾಗಿದೆ.
ರೂಢಿ -ಸಂಪ್ರದಾಯ ಆಚರಣೆಗಳು:
೧. ಪಂಢರಪುರದ ಪಾಂಡುರಂಗ ಕುಲದೇವರಾಗಿದ್ದರಿಂದ, ಉಳಿದೆಲ್ಲ ಮಂಗಳವೇಢೆ ಜನ ಪಾಲಿಸುವಂತೆ, ಆಷಾಢ ನವರಾತ್ರಿ ಮತ್ತು ಕಾರ್ತಿಕ ನವರಾತ್ರಿ ಆಚರಣೆ ಇವರ ಮನೆಯಲ್ಲೂ ಇದೆ. ತುಪ್ಪದ ಮತ್ತು ಎಣ್ಣೆಯ ನಂದಾದೀಪ ಇಡಲಾಗುತ್ತದೆ.
೨. ಆದರೆ ಈ ಮನೆ ಜನರ – ಅಂದರೆ ಒಂದನೆ ಟಿಸಿಲಿನ ಮಂಗಳವೇಢೆ ಜನರ ವಿಶೇಷವೆಂದರೆ, ಪ್ರತಿವರ್ಷ ವೈಶಾಖ ಶುಕ್ಲ ಅಷ್ಟಮಿಯಂದು ‘ ಆಚಾರ್ಯ ಪ್ರಯೋಜನ ’ವೆಂಬ ಸಮಾರಂಭವನ್ನು ಆಚರಿಸಲಾಗುತ್ತದೆ ಇದು ಶ್ರೀ ಯಾದವಾರ್ಯರ ಶಿಷ್ಯ ಶ್ರೀ. ಲಕ್ಷ್ಮೀ ನರಸಿಂಹ ಆಚಾರ್ಯರ ಆರಾಧನೆ. ಪೂಜ್ಯ ಶ್ರೀ ಆಚಾರ್ಯರು ಯಕ್ಕುಂಡಿಯ ಕಟ್ಟಿ ಮನೆತನದವರು .
೧೯೯೩ರಲ್ಲಿವೈಕುಂಠವಾಸಿಯಾದ ಹುಬ್ಬಳ್ಳಿ ನಿವಾಸಿ ಪಂಡಿತ ಬಾಳಾಚಾರ್ಯರ ಮಂಗಳವೇಡಿಯವರ ಮೊದಲ ಪತ್ನಿ ತುಳಸಾಬಾಯಿ ಯಕ್ಕುಂಡಿಯ ಇದೇ ಕಟ್ಟಿ ಮನೆತನದ ಹೆಣ್ಣುಮಗಳು. ಅವರ ಮನೆಯಲ್ಲಿ ಶ್ರೀ. ಲಕ್ಷ್ಮೀ ನರಸಿಂಹಾಚಾರ್ಯರ ನಂತರ ಆಗಿಹೋದ ಹಿರಿಯರು – ಸುಬ್ರಹ್ಮಣ್ಯಾಚಾರ್ಯ, ವೆಂಕಟರಮಣಾಚಾರ್ಯ, ಗೋಪಾಳಾಚಾರ್ಯ (ಬಾಳಾಚಾರ್ಯರ ಹೆಣ್ಣುಕೊಟ್ಟ ಮಾವ) ಮತ್ತು ವಿಟ್ಠಲಾಚಾರ್ಯರು.
ಪೂಜ್ಯ ಶ್ರೀ ಲಕ್ಷ್ಮೀ ನರಸಿಂಹಾಚಾರ್ಯರನ್ನು ಕಟ್ಟಿ ಮನೆತನದವರು ತಮ್ಮ ‘ಕುಲ ಗುರು’ ವೆಂದು ಮನ್ನಿಸುತ್ತಿದ್ದ ಹಾಗೆ ಯಕ್ಕುಂಡಿಯವರೆ ಆಗಿದ್ದ ಈ ಮಂಗಳವೇಡಿ ಜನ ಕೂಡ ತಮ್ಮ ಕುಲ ಗುರು ಎಂದು ಮನ್ನಿಸಿ, ಅವರ ಆರಾಧನೆ – ‘ಆಚಾರ್ಯ ಪ್ರಯೋಜನ’ಯನ್ನು ಪ್ರತಿ ವರ್ಷ ಗೌರವಾದರ ಭಕ್ತಿಯಿಂದ ಆಚರಿಸುತ್ತಿದ್ದಾರೆ. ರಂಗನಾಥ ಅವರೂ ಯಕ್ಕುಂಡಿ ಮೂಲದವರೆ. ಹೀಗಾಗಿ ಅವರ ಮನೆಯಲ್ಲಿಯೂ ಈ ಆಚರಣೆಯಿದೆ. ಅಂದು ಬೇರೆ ಬೇರೆ ಕಡೆ ಇರುವ ಇವರ ಅಣ್ಣಂದಿರು ಮತ್ತು ಪರಿವಾರದವರೆಲ್ಲ ಧಾರವಾಡದ ಇವರ ಮನೆಯಲ್ಲಿ ಸೇರುತ್ತಾರೆ.
ಅಂದು ಹತ್ತು ಹದಿನೈದು ಬ್ರಾಹ್ಮಣರನ್ನು ಕರೆದು, ಅವರ ಪಾದಪೂಜೆ ಮಾಡಿ, ಗಂಧ ಮಾಲೆಗಳನ್ನು ಅರ್ಪಿಸುತ್ತಾರೆ. ನಂತರ ಬ್ರಾಹ್ಮಣ ಭೋಜನ ನಡೆಯುತ್ತದೆ. ಇದರದ್ದೂ ಒಂದು ವಿಶೇಷ. ವೈಶಾಖ ಮಾವಿನ ಹಣ್ಣು ಲಭ್ಯವಾಗಲು ಶುರುವಾಗಿರುವ ಕಾಲ. ಗಿಡಗಳಲ್ಲಿ, ಪೇಟೆಯಲ್ಲಿ ಆ ಹಣ್ಣುಗಳ ರಾಜನ ಆಗಮನವೆಂದಾದೀತೋ, ಎಂದದರ ರುಚಿ ಸವಿಯಲಾದೀತೋ ಎಂದು ಅದರ ದಾರಿ ಕಾಯದವರಾರು!
ಆದರೆ ಈ ‘ಆಚಾರ್ಯ ಪ್ರಯೋಜನ’ದ ಸಮಾರಂಭವಾಗುವ ವರೆಗೆ ಇವರ ಪೈಕಿ ಯಾರೂ ಮಾವಿನ ಹಣ್ಣೂ ತಿನ್ನುವದಿಲ್ಲ. ಅಂದಿನ ಬ್ರಾಹ್ಮಣ ಭೋಜನದಲ್ಲಿ ಅದರ ಅರ್ಪಣೆಯಾದ ಮೇಲೆಯೆ ಇವರು ಆ ಸೀಜನ್ನಿನಲ್ಲಿ ಮೊದಲ ಸಲ ಮಾವಿನ ಹಣ್ಣನ್ನು ಸವಿಯುವದು. ಯಾವಾಗಿನಿಂದ ಈ ಆಚರಣೆಯ ಪಾಲನೆ ಶುರುವಾಯಿತೊ, ನಿಖರವಾದ ಉತ್ತರ ರಂಗನಾಥ ಅವರಿಗೆ ಗೊತ್ತಿಲ್ಲವಾದರೂ, ಅರ್ಧ ಶತಮಾನದಷ್ಟಾದರೂ ವರ್ಷಗಳಿಂದ ನಡೆದು ಬಂದಿದೆ ಎಂದು ಗೊತ್ತಿದೆ. ತಮ್ಮ ಬಾಲ್ಯದಲ್ಲಿ ತಮ್ಮ ತಂದೆ ಆಗ ಹುಬ್ಬಳ್ಳಿ ಚಿಟಗುಪ್ಪಿ ಚಾಳಿನಲ್ಲಿದ್ದರು, ಅವರೂ ಇದನ್ನು ಆಚರಿಸುತ್ತಿದ್ದರು ಎಂದು ನೆನಪು. ಇಂದಿಗೂ ಆ ಆಚರಣೆ ನಡೆದುಕೊಂಡು ಬಂದಿದೆ.
೩. ಇದೊಂದೆ ಈ ದಿನದ ವಿಶೇಷವಾಗಿರದೆ, ಹಾಲಿನ ಖೀರು ಮತ್ತು ಹೂರಣದ ಹೋಳಿಗೆ ಅಂದಿನ ನೈವೇದ್ಯದಲ್ಲಿ ಇರಲೆಬೇಕು. ಇದೂ ಬಹಳವರ್ಷಗಳಿಂದ ನಡೆದು ಬಂದಿದೆ. ಅಲ್ಲದೆ ಇದರ ಹಿನ್ನೆಲೆಯಲ್ಲಿ ಹಿರಿಯರ ಅನುಭವಕ್ಕೆ ಬಂದ ಒಂದು ಸಂದರ್ಭವೂ ಇದೆ.
ರಂಗನಾಥ ಅವರ ಅಜ್ಜಿ ಸುಂದರಾಬಾಯಿಯವರಿಗೆ (ರಾಮಾಚಾರ್ಯರ ಪತ್ನಿ) ಅನೇಕ ವರ್ಷ ಮಕ್ಕಳಾಗದೆ ಹೋದಾಗ, ಬೇಗನೆ ಮಕ್ಕಳಾದರೆ ಕೊಡ ಹಾಲಿನ ಖೀರು ನೈವೇದ್ಯ ಮಾಡುವ ಹರಕೆ ಹೊತ್ತರಂತೆ. ಹರಕೆ ಹೊತ್ತದ್ದೇ ತಡ, ಒಂದು ವರ್ಷದಲ್ಲಿಯೆ ಅವರ ಇಷ್ಟಾರ್ಥ ಪ್ರಾಪ್ತಿಯಾಯಿತು. ಹೀಗಾಗಿ ಒಂದು ಕೊಡ ಹಾಲಿನ ಖೀರು ಮತ್ತು ಹೂರಣದ ಹೋಳಿಗೆ ಅಂದಿನ ದಿನದ ‘ಮೆನು’ವಿನಲ್ಲಿ ಕಡ್ಡಾಯದ ಐಟಮ್ಮುಗಳು.
೪. ಬಳಗವೆಲ್ಲ ಒಂದೆಡೆ ಸೇರಿ ಈ ಸಮಾರಂಭದ ಆಚರಣೆಯಲ್ಲಿ ಪಾಲುಗೊಳ್ಳುತ್ತಾರೆ. ಐವತ್ತು ಅರವತ್ತು ಜನರ ಊಟವಾಗುತ್ತದೆ. ಅಣ್ಣ ತಮ್ಮಂದಿರು, ಅಕ್ಕ ತಂಗಿಯರು ಎಲ್ಲರೂ ಕುಟುಂಬ ಸಮೇತ ಬರುತ್ತಾರೆ. ಹತ್ತು ಹದಿನೈದು ವೈದಿಕ ಬ್ರಾಹ್ಮಣರನ್ನೂ ಕರೆದಿರುತ್ತಾರೆ. ಗಾಂಧಿನಗರ / ಶಕ್ತಿನಗರದ ಆ ‘ಲಕ್ಷ್ಮೀ ನಾರಾಯಣ’ ಮನೆಯನ್ನು ಈ ಸಮಾರಂಭ ಜರುಗಿಸಲು ಅನುಕೂಲವಾಗುವಂತೆ ಕಟ್ಟಿದ್ದಾರೆ. ಹೊರಗಿನ ಅಷ್ಟು ಜನರ ಮಡಿ ಸ್ನಾನಕ್ಕೆ ನೀರು, ಸ್ಥಳ ಬೇಕು. ಮತ್ತು ಅಷ್ಟು ಜನರು ಮಡಿಯಲ್ಲಿ ಪಾದ ಪೂಜೆಗಾಗಿ ಕುಳಿತುಕೊಳ್ಳಲು ಸ್ಥಳಾವಕಾಶ ಇರುವ Hall ಬೇಕು. ಇದನ್ನು ದೃಷ್ಟಿಯಲ್ಲಿಟ್ಟುಕೊಂಡು ಮನೆ ಕಟ್ಟಲಾಗಿದೆ.
ಅಂಗಳದಲ್ಲಿಯೆ ಮಡಿ ಸ್ನಾನಕ್ಕಾಗಿ ಕೊಳವೆ ಬಾವಿ ಇದೆ. ಅಲ್ಲಿಂದ ಸ್ನಾನ ಮಾಡಿ ಮಡಿಯಲ್ಲಿ ಬಂದ ಬ್ರಾಹ್ಮಣರು, ಮನೆಯ ಮೇಲು ಮಹಡಿಯಲ್ಲಿ ಬಂದರೆ, ಇಪ್ಪತ್ತು ಮೂವತ್ತು ಜನ ಕುಳಿತುಕೊಳ್ಳುವಂತೆ, ಏಕಕಾಲದಲ್ಲಿ ಎಲ್ಲರ ಭೋಜನ ನಡೆಯುವಂತೆ Hall ನ್ನು ಕಟ್ಟಿಸಲಾಗಿದೆ.
೫. ಇನ್ನು – ಪ್ರತಿ ವರ್ಷ ಒಂದೊ ಎರಡೊ ಸ್ಸರಿಯಾದರೂ ಯಲ್ಲಮ್ಮನ ಗುಡ್ಡಕ್ಕೆ ಹೋಗಿಬರುವ ರೂಢಿಯೂ ಇದೆ. ಈ ಎಲ್ಲರಲ್ಲಿಯೂ ತಮ್ಮ ತಮ್ಮ ಮನೆಯಲ್ಲಿ ಯಲ್ಲಮ್ಮನ ಹಡಲಿಗೆ (ಪಡಲಿಗೆ) ತಪ್ಪದೆ ತುಂಬಿಸುವ ರೂಢಿಯೂ ಇದೆ.
೬. ಯಲ್ಲಮ್ಮನ ಗುಡ್ದಕ್ಕೆ ಮಾತ್ರವಲ್ಲ, ಮುರಗೋದದ ಹತ್ತಿರದ ಸೊಗಲ ಸೋಮೇಶ್ವರ ಮತ್ತು ಧಬಧಬೆ ಇದೆಯಲ್ಲ, ಅದರ ಹತ್ತಿರವೆ ಗುಡಿಯಿರುವ ಇನ್ನೊಂದು ‘ಸಣ್ಣ ಸೊಗಲ’ ಎಂಬ ಒಂದು ಸ್ಥಳವಿದೆ. ಪ್ರತಿ ವರ್ಷ ಶ್ರಾವಣದಲ್ಲಿ ಆ ಸಣ್ಣ ಸೊಗಲಕ್ಕೆ ಹೋಗಿ ದೇವರಿಗೆ (ಈಶ್ವರ ?) ಅಭಿಷೇಕ ಮಾಡಿಸುವ ಸಂಪ್ರದಾಯವೂ ಇವರಲ್ಲಿದೆ. ರಂಗನಾಥ ಅವರ ಅಜ್ಜ ರಾಮಚಂದ್ರ (ರಾಮಾಚಾರ್ಯ) ಸ್ವಾಮಿರಾಚಾರ್ಯ ಮಂಗಳವೇಡಿಯವರು ತಮ್ಮ ಕಾಲದಲ್ಲಿ ಯಕ್ಕುಂಡಿಯಿಂದ ದಿನ ನಿತ್ಯ ಕಾಲ್ನಡಿಗೆಯಲ್ಲಿ ಅಲ್ಲಿಗೆ ಹೋಗಿ ಪೂಜೆ ಮಾಡಿ ಬರುತ್ತಿದ್ದರಂತೆ. ಅದಕ್ಕಾಗಿ ಒಬ್ಬರು ಎರಡು ಎಕರೆ ಹೊಲವನ್ನೂ ಕೊಟ್ಟಿದ್ದರಂತೆ. ಮುಂದೆ ಟೆನನ್ಸಿ ಕಾಯದೆಯಲ್ಲಿ ಹೊಲಹೋಯಿತು. ಯಕ್ಕುಂಡಿಯೂ ಮುಳುಗಿತು. ಹೊಸ ಯಕ್ಕುಂಡಿಯಲ್ಲಿ ಇವರಿಗೊಂದು ನಿವೇಶನವೂ ಸಿಕ್ಕಿತು. ಅದು ಇವರ ಹೆಸರಲ್ಲಿ ಇನ್ನೂ ಇದೆ.
೭. ಇವರ ಮನೆಯ ‘ದೊಡ್ಡ ದೇವರೂ’ ರಂಗನಾಥ ಅವರ ಮನೆಯಲ್ಲಿವೆ.
ಟಿಪ್ಪಣಿ: ಇದಿಷ್ಟು ರಂಗನಾಥ ಅವರಿಂದ ಸಿಕ್ಕ ಲಿಖಿತ ಮಾಹಿತಿಯ ಆಧಾರದಿಂದ ಶ್ರೀಕಾಂತ ಮಂಗಳವೇಢೆ ಅವರು ಬರೆದುದು. ಆದರೆ ಈ ಲೇಖಕನ ದೃಷ್ಟಿಯಲ್ಲಿ ಚಿತ್ರಿತವಾಗಿರುವ ಅವರ ವ್ಯಕ್ತಿ ಚಿತ್ರದಲ್ಲಿ ಇಷ್ಟು ನಿಖರವಾದ ಈ ಯಾವ ವಿವರಗಳು ಇಲ್ಲವಾದರೂ – ಅವರ ಸ್ವಭಾವದ ಆ ಬೇರೆಯದೆ ಒಂದು ವ್ಯಕ್ತಿತ್ವ, ನನ್ನ ದೃಷ್ಟಿಯಲ್ಲಿ ಕಂಡದ್ದು ಮತ್ತೊಂದಿದೆ. ಈ ಮುಂದಿನ ಬರಹ
ನನಗೆ ಕಾಣಿಸಿದ ರಂಗನಾಥ ಅವರು
ರಂಗನಾಥ ಅವರು ನಮ್ಮ ಮನೆತನದ ಒಂದನೆ ಟಿಸಿಲಿನ ಒಬತ್ತನೆ ತಲೆಮಾರಿನವರು. ಈ ವ್ಯಕ್ತಿ ಪರಿಚಯವನ್ನು, ಮನೆತನದ ಇತಿಹಾಸವನ್ನು ಬರೆಯುತ್ತಿರುವ ನಾನೊ – ಶ್ರೀಕಾಂತ, ಮೂರನೆ ಟಿಸಿಲಿನ ಎಂಟನೆ ತಲೆಮಾರಿನವನು. ಅವರೋ ಹುಬ್ಬಳ್ಳಿಯಲ್ಲಿ ಹುಟ್ಟಿ, ಬೆಳೆದು ಅಲ್ಲಿಯೆ ಕಲಿತು ಧಾರವಾಡದಲ್ಲಿ ಸ್ವಂತ ಮನೆ ಮಾಡಿಕೊಂಡು ವಾಸವಾಗಿದ್ದಾರೆ. ನಾನೋ ಬೆಳಗಾವಿಯವ. ಅಲ್ಲಿಯೆ ಹುಟ್ಟಿ, ಬೆಳೆದು, ಕಲಿತು, ಕೆಲಸಮಾಡಿ, ಮದುವೆಯಾಗಿ, ಮಕ್ಕಳನ್ನು ಬೆಳಸಿ ನಿವೃತ್ತನಾದವ. ಅದರೂ, ಆ ಊರು ಬಿಟ್ಟು, ಧಾರವಾಡದ ನೀರು ನೆಲದ ಋಣ ಇದ್ದುದರಿಂದ, ಈಗ ಕಳೆದ ಐದು ವರ್ಷದಿಂದ ಅಲ್ಲಿ ಮನೆ ಮಾಡಿದ್ದೇನೆ, ಅಲ್ಲಿ ಇದ್ದೇನೆ. ರಂಗನಾಥ ನನಗಿಂತ ಇಪ್ಪತ್ತು ವರ್ಷ ಚಿಕ್ಕವರು. ನನಗೆ ರಂಗನಾಥ ಎಂಬ ಹೆಸರಿನದೂ – ಮತ್ತೆ ಬೇರೆಯ, ಅತ್ಯಂತ ಸಮೀಪದ ಸಂಬಂಧವಿದೆ. ಆ ಹೆಸರು ನನ್ನ ತಂದೆಯದೂ ಹೌದು, ಹಿರಿಯ ಮಗನದೂ ಹೌದು.
ಇದನ್ನೆಲ್ಲ ಹೇಳಲು ಕಾರಣವಿದೆ. ಒಂದು ಕಾಲದಲ್ಲಿ ಇವರಾರೋ ನಾವಾರೋ! ಪರಸ್ಪರರು, ಒಂದೇ ಮನೆತನದವರು ಎಂಬುದು ಹೋಗಲಿ, ನಮ್ಮ ಇರುವಿಕೆ ಅವರಿಗೆ, ಅವರ ಇರುವಿಕೆ ನಮಗೆ ಗೊತ್ತಿರಲಿಲ್ಲ. ನಮ್ಮ ನಮ್ಮ ನಡುವೆ ಬೇರೆ ಬೇರೆ ಟಿಸಿಲುಗಳ, ಆ ಪ್ರತಿಯೊಂದರಲ್ಲಿ ಎಂಟು ಒಂಬತ್ತು ತಲೆಮಾರುಗಳು ಆಗಿದ್ದ ದೊಡ್ಡ ಅಂತರ ನಿರ್ಮಾಣಗೊಂಡಿತ್ತು.
ಮನೆತನದಲ್ಲಿನ ನಮ್ಮ ಟಿಸಿಲನ್ನು ಗುರುತಿಸಲು ಮುರಗೋಡ, ಯಕ್ಕುಂಡಿ ಈ ಊರುಗಳನ್ನು ಉಪಯೋಗಿಸಿಕೊಂಡ ಹಾಗೆ, ಆ ಟಿಸಿಲಿನಲ್ಲಿ ಹುಟ್ಟಿದ ಹೆಚ್ಚು ಪರಿಚಿತ ಹಿರಿಯರ ಹೆಸರುಗಳನ್ನೂ ಉಪಯೊಗಿಸಲು ಪ್ರಾರಂಭಿಸಿದ್ದೆ. ಈ ರಂಗನಾಥ ಯಾರು ಎಂದರೆ ಹುಬ್ಬಳ್ಳಿಯ ತೊರವಿ ಗಲ್ಲಿಯಲ್ಲಿದ್ದ ಪಂಡಿತ ಬಾಳಾಚಾರ್ಯರ – ಆ ಟಿಸಿಲಿನಲ್ಲಿ ಹುಟ್ಟಿದ ವ್ಯಕ್ತಿ ಎಂದು ಹೇಳುವಂತಾಗಿತ್ತು. ಹೀಗೆ ಮಾಡುತ್ತಿದ್ದುದು ಇತ್ತೀಚೆಗೆ. ಆದರೆ ಇಪ್ಪತ್ತೈದು ವರ್ಷಗಳ ಹಿಂದೆ ನನಗಾಗಲೀ ಪರಿವಾರದ ಅನೇಕರಿಗಾಗಲೀ, ಬಾಳಾಚಾರ್ಯರ ಇರುವಿಕೆಯೂ ಗೊತ್ತಿರಲಿಲ್ಲ. ತಪ್ಪಿ, ಯಾರಾದರೂ ಅವರ ಪರಿಚಿತರೊ ಹೆಸರನ್ನು ಕೇಳಿದವರೊ, ಹುಬ್ಬಳ್ಳಿಯಲ್ಲಿ ಬಾಳಾಚಾರ್ಯ ಎಂಬ ಪಂಡಿತರಿದ್ದಾರಲ್ಲ- ಅವರು ನಿಮಗೆ ಏನು ಸಂಬಂಧ ಎಂದು ಕೇಳಿದರೆ, ಸಂಬಂಧ ಏನೂ ಇಲ್ಲ. ಅಡ್ದ ಹೆಸರು ಅದೇ ಎನ್ನುವ ಆ ಒಂದೇ ಸಂಬಂಧ ಎಂದು ಹುಚ್ಚು ಉತ್ತರ ಹೊರಬಂದು, ಅಜ್ಞಾನ ಪ್ರಕಟವಾಗುತ್ತಿತ್ತು.
ಹೀಗಿದ್ದಾಗ, ೧೯೯೩ರ ಸೆಪ್ಟೆಂಬರ ಮಧ್ಯದಲ್ಲಿ ಯಾವುದೋ ಬೇರೊಂದು ಕಾರಣದಿಂದ ಹುಬ್ಬಳ್ಳಿಗೆ -ಅದರಲ್ಲೂ ತೊರವಿಗಲ್ಲಿಗೆ ಹೋಗಿದ್ದೆ. ನಮ್ಮ ಅಡ್ದಹೆಸರಿನವರೆ ಆದ ಪಂಡಿತರೊಬ್ಬರು ಅಲ್ಲಿದ್ದಾರೆಂದು ಕೇಳಿ ಅವರನ್ನು ಹುಡುಕಿಕೊಂಡು ಹೋಗಿದ್ದೆ. ನಮಗೇನಾದರೂ ಸಂಬಂಧವೆ ಎನ್ನುವದನ್ನು ತಿಳಿದುಕೊಳ್ಳಲು. ಮನೆಯಲ್ಲಿ ಕಾಲಿಟ್ಟು ಎರಡು ಮೂರು ನಿಮಿಷಗಳೂ ಆಗಿರಲಿಲ್ಲ, ಬೆನ್ನ ಹಿಂದಿನಿಂದ ಹಿರಿಯರೊಬ್ಬರು ಬಂದರು, ಮಗ ಮತ್ತು ಸೊಸೆಯ ಜೊತೆ. ಮಾತಿನಿಂದ ಗೊತ್ತಾಯಿತು, ಅವರ ಸಮೀಪದ ಬಂಧುಗಳೆ ಎಂದು. ಗೃಹ ಪ್ರವೇಶ ಮತ್ತು ವಾಸ್ತು ಶಾಂತಿಯ ಕಾರ್ಯಕ್ರಮಕ್ಕೆ ಆಮಂತ್ರಣ ಕೊಡಲು ಬಂದಿದ್ದರು. ಬರಿಗೈಯಿಂದಲ್ಲ. ಹೂ, ಮಾಲೆ, ಹಣ್ಣು, ಶ್ರೀಫಲ ಎಲ್ಲ ತಂದಿದ್ದರು. ತೊಂಬತ್ತು ವರ್ಷದ ವಯೋವೃದ್ಧ ಬಾಳಾಚಾರ್ಯರ ಪಾದ ಪೂಜೆ ಮಾಡಿ ಆಮಂತ್ರಣ ಕೊಟ್ಟರು. ನಮಗೂ ಪ್ರೇರಣೆ ಆಯಿತು. ಪಕ್ಕದಲ್ಲಿಯೆ ಪೇಟೆ. ಗಡಿಬಿಡಿ ಮಾಡಿ ಮಾಲೆ, ಹಣ್ಣು ಇತ್ಯಾದಿ ತಂದೆವು. ಪಾದ ಪೂಜೆಯನ್ನು ನಾವೂ ಕೂಡ ಮಾಡಿದೆವು.
ಬಂದಿದ್ದವರು, ರಂಗನಾಥ ಅವರ ತಂದೆ ನಾರಾಯಣ ಅವರು. ಜೊತೆಯಿದ್ದವರು ನೂತನ ವಾಸ್ತು ಕಟ್ಟಿಸಿದ್ದ ವಾದಿರಾಜ ದಂಪತಿಗಳು. ಒಂದೆರಡು ನಿಮಿಷದ ಮಾತಿನಲ್ಲಿ ಎಷ್ಟು ಗುರುತಾಗಲು ಸಾಧ್ಯ ! ಬಾಳಾಚಾರ್ಯರನ್ನೂ ಮತ್ತೆ ಭೆಟ್ಟಿಯಾಗಲಿಲ್ಲ, ಅದೇ ಕೊನೆಯದಾಯಿತು. ಇವರದೂ ಅಷ್ಟೆ. ಮತ್ತೆ ಭೆಟ್ಟಿಯಾಗಲೆ ಇಲ್ಲ. ಅದೆಲ್ಲ ಯೋಗಾಯೋಗದ ಮಾತು, ಅಲ್ಲವೆ! ಇರಲಿ, ಇಪ್ಪತ್ತೊಂದು ವರ್ಷಗಳು ಕಳೆದ ನಂತರ ಮತ್ತೆ ಅಂತಹದೆ ಯೋಗ ಬಂದಿತು. ೨೦೧೪ರಲ್ಲಿ.
ನನ್ನ ಕಡೆಗೆ ಕಾಗದದ ತುಂಡೊಂದರ ಮೇಲೆ ಬರೆದುಕೊಂಡಿದ್ದ ಹೆಸರು, ವಿಳಾಸ, ಫೋನ ನಂಬರ ಇ. ವಿವರಗಳದ್ದು. ಮುಂಜಿವೆಯ ಆಮಂತ್ರಣ ಪತ್ರವನ್ನು ನೋಡಿ ಬರೆದು ಕೊಂಡಿದ್ದ ಮಾಹಿತಿಯದು. ಮುಂಜಿವೆಯಾದದ್ದು ಫೆಬ್ರುವರಿ ೨೦೧೧ ರಲ್ಲಿ, ಆ ಕಾಗದ ಕಣ್ಣಿಗೆ ಬಿದ್ದದ್ದು ಮೂರೂವರೆ ವರ್ಷದ ನಂತರ, ೨೦೧೪ರ ಡಿಸೆಂಬರ ೬ ರಂದು. ಮಗ ಅಮೋಘನ ಮುಂಜಿವೆ ಮಾಡಿದ ಆ ವ್ಯಕ್ತಿ ರಂಗನಾಥ. ಅಡ್ಡ ಹೆಸರೂ ನಮ್ಮದೆ. ಅಂದು ಸಂಜೆ ಫೋನ ಮಾಡಿಯೆ ಬಿಟ್ಟೆ.
ಎತ್ತಿಕೊಂಡವರು ಅವರ ಪತ್ನಿ, ಸೌ. ದಯಾ. ನಾನೋ ಅಪರಿತ. ಸಂಕೋಚದಿಂದಲೆ ಫೋನ ಮಾಡಿದ ಕಾರಣ ಹೇಳಿದೆ. ನಿರಾಸಕ್ತಿ ಧ್ವನಿಯಲ್ಲಿನ ಉತ್ತರವನ್ನು ನಿರೀಕ್ಷಿಸಿದ್ದೆ. ವಂಶಾವಳಿ ವಿವರ ಕಲೆಹಾಕುತ್ತಿದ್ದೇನೆ, ಸಹಕಾರ ಕೊಡುವಿರಾ ಎಂದದಕ್ಕೆ, ಸಂತೋಷವನ್ನಷ್ಟೆ ಅಲ್ಲ, ಕುತೂಹಲವನ್ನೂ ವ್ಯಕ್ತ ಪಡಿಸಿ ತಮಗೂ ಇದರಲ್ಲಿ ಆಸಕ್ತಿ ಇದೆ, ತಮ್ಮ ಪೂರ್ಣ ಸಹಕಾರ ಇದೆ ಎಂದು ಹೇಳಿದರು. ಪತಿ ರಂಗನಾಥ ಮನೆಗೆ ಬಂದ ಕೂಡಲೆ ಅವರಿಗೆ ತಿಳಿಸುವದಾಗಿ ಮತ್ತು ಅವರು ನಿಮ್ಮನ್ನು ಸಂಪರ್ಕಿಸುವರು ಎಂದು ಎಂದೂ ಹೇಳಿದರು. ಆಶ್ಚರ್ಯವೆನಿಸುವಂತೆ ಮುಂದೆ ನಲವತ್ತು ಐವತ್ತು ನಿಮಿಷಗಳ ನಂತರ ಅವರಿಂದ ಫೋನ ಬಂದದ್ದೂ ಆಯಿತು. ಹೀಗೆ ಗುರುತಾದುದು. ಮುಂದೆ ೨೧ ಡಿಸೆಂಬರ ದಂದು ಧಾರವಾಡದ ನಮ್ಮ ಮನೆಗೂ ಬಂದು ಸುಮಾರು ಒಂದು ಗಂಟೆಕಾಲ ಮಾತನಾಡಿ, ಇನ್ನಷ್ಟು ಪರಿಚಯ ಮಾಡಿಕೊಂಡರು.
ಮತ್ತೆ ಕೆಲ ದಿನಗಳ ನಂತರ ಪತ್ನಿ ಸೌ.ದಯಾ ಅವರ್ ಜೊತೆಗೂ ಒಮ್ಮೆ ಬಂದು ಹೋದರು. ಮತ್ತೊಮ್ಮೆ ಡೊಂಬಿವಲಿಯಿಂದ ಬಂದಿದ್ದ ಅಣ್ಣ ಅತ್ತಿಗೆ (ವಾದಿರಾಜ ಮತ್ತು ಸೌ. ವೀಣಾ) ಮತ್ತು ಅತ್ತಿಗೆ (ಸೌ. ಮಮತಾ, ಕೇಶವ ಅವರ ಪತ್ನಿ) ಅವರನ್ನೂ ಮನೆಗೆ ಕರೆದುಕೊಂಡು ಬಂದು, ಪರಿಚಯ ಮಾಡಿಕೊಟ್ಟರು. ಮತ್ತೆ ಅವರು ಬಂದುದು ಹೆಂಡತಿಯ ಸಹಿತ ಜನೆವರಿ ೬, ೨೦೧೫ ರಂದು. ಈ ಭೆಟ್ಟಿಯ ಫಲವಾಗಿ ಮರುದಿನ ನನಗೆ ಹುಬ್ಬಳ್ಳಿಯಲ್ಲಿ ಬೇರೊಂದು ವಿಳಾಸಕ್ಕೆ ಸ್ಥಳಾಂತರಗೊಂಡಿದ್ದ ದಿ. ಪಂಡಿತ ಬಾಳಾಚಾರ್ಯರ ಮಗ ಗೋವರ್ಧನ ಅವರ ಭೆಟ್ಟಿ, ಆ ಹಿರಿಯರ ಮಾಹಿತಿ ಸಿಕ್ಕದ್ದು.
ಬಾಳಾಚಾರ್ಯರ ಮೊದಲನೆಯ ಭೆಟ್ಟಿಯೆ ಕೊನೆಯದೂ ಆಯಿತು. ಅವರು ತೊಂಬತ್ತು ವರ್ಷದ ವಯೋವೃದ್ಧರು. ಯಕ್ಕುಂಡಿ ಮೂಲದ (ಒಂದು ಕಾಲಕ್ಕೆ ಆ ಮನೆತನದವರೂ ಮುರಗೋಡ ಮೂಲದವರೆ) ಮಂಗಳವೇಢೆ ಜನರಲ್ಲಿ ಅವರಷ್ಟು ಹಿರಿಯರು, ಹಳೆಯ ವಿಷಯಗಳನ್ನು ತಿಳಿದವರು ಮತ್ತಾರೂ ಇರಲಿಲ್ಲ. ಅವರಿಂದ ಮನೆತನದ ಬಹಳಷ್ಟು ಇತಿಹಾಸದ ಮಾಹಿತಿ ಪಡೆಯುವ ನಿರೀಕ್ಷೆಯಲ್ಲಿದ್ದೆ. ಒಮ್ಮೆಲೆ ಅವರೆ ಇಲ್ಲವಾಗಿದ್ದರು. ಗೋವರ್ಧನ ಆಗ ಇನ್ನೂ ನೌಕರಿ ಮಾಡುತ್ತಿದ್ದರು. ತಮಗೆ ಬಿಡುವಿದ್ದಾಗ ಬಂದರೆ ಗೊತ್ತಿದ್ದದ್ದನ್ನು ಹೇಳುವೆ ಎಂದರಾದರೂ, ನಾನು ಅಪೇಕ್ಷಿಸಿದ್ದ ಸಹಕಾರ ಸಿಗುವ ಖಾತರಿ ಅದೇಕೋ ಮೂಡಲಿಲ್ಲ.
೨೦೦೨ರಲ್ಲಿ ಒಮ್ಮೆ ಹೋಗಿದ್ದೆ. ಕೆಲ ಫೋಟೊಗಳನ್ನು ತೆಗೆದುಕೊಳ್ಳುವದು ಆಯಿತಾದರೂ, ಎಳ್ಳು ಕಾಳಷ್ಟೂಹೊಸ ಮಾಹಿತಿ ಯಾವುದೂ ಸಿಗಲಿಲ್ಲ. ನನಗೆ ಹುಬ್ಬಳ್ಳಿಯೇನು ಪಕ್ಕದ ಓಣಿಯೆ, ಮತ್ತೆ ಮತ್ತೆ ಅಲ್ಲಿ ಹೋಗಿ ಪ್ರಯತ್ನ ಮುಂದುವರೆಸಲು. ೨೦೧೦ರಲ್ಲಿ ಮತ್ತೊಮ್ಮೆ ಹೋಗಿದ್ದೆ. ತೀವ್ರ ನಿರಾಶೆ ಕಾದಿತ್ತು. ಅವರು ಮನೆಯನ್ನೂ ಮಾರಿ ಬೇರೆಡೆ ಹೋಗಿದ್ದರು, ಅದೂ ಮೂರುವರ್ಷಗಳಷ್ಟು ಹಿಂದೆಯೆ. ಅಕ್ಕ ಪಕ್ಕದವರಿಂದ ಹೊಸ ಮನೆಯ ವಿಳಾಸ ಹೋಗಲಿ, ಫೋನ ನಂಬರ ಕೂಡ ದೊರೆಯಲಿಲ್ಲ.
ಅವರ ಬಳಗದವರ ಪರಿಚಯ ನನಗೆ ಇರಲಿಲ್ಲ. ಅದೇ ಗಡ್ಡಿಯ ಒಬ್ಬಿಬ್ಬರು ಸ್ವಲ್ಪ ಗುರುತಾಗಿದ್ದರೂ, ತಮ್ಮದೇ ವಿಷಯ ಸರಿಯಾಗಿ ಹೇಳಲೊಲ್ಲದೆ ಹೋದವರು. ಬಾಳಾಚಾರ್ಯರು ನಮ್ಮ ಪೈಕಿಯವರೆ, ದೂರದವರೇನಲ್ಲ. ಆದರೆ ನಿಮ್ಮ ಪ್ರಶ್ನೆಗಳಿಗೆ ಅವರ ಕುರಿತು ಹೇಳುವಷ್ಟು ನಿಖರವಾದ ಉತ್ತರ ನಮ್ಮಲ್ಲಿಲ್ಲ. ಈಗೀಗ ಅವರ ಮಕ್ಕಳ ಭೆಟ್ಟಿ ಅಪರೂಪವಾಗಿದೆ ಎಂದು ಹೇಳುತ್ತ ವ್ಯಾವಹಾರಿಕೆಯ ಜಾಣ್ಮೆ ತೋರಿಸಿ ಕೈತೊಳೆದುಕೊಂಡು ಬಿಟ್ಟರು.
ಇತ್ತ, ಅವರ ಭೆಟ್ಟಿಯಾದ ದಿನವೇ ಒಮ್ಮೆ ಅರ್ಧ ಗಂಟೆ ಮಾತ್ರ ನೋಡಿದ್ದ ಆ ಜನರ ಫೋನ ನಂಬರು ಇರದಿದ್ದರೂ, ವಿಳಾಸ ಇದ್ದಿತು. ಆದರೆ ಹುಬ್ಬಳ್ಳಿಯೇನು ನನಗೆ ಬಹಳ ಪರಿಚಿತ ಊರು ಅಲ್ಲದಿದ್ದಾಗ, ಆ ಬಡಾವಣೆಯಲ್ಲಿ ಅವರನ್ನು ಹುಡುಕುವದು ಕಷ್ಟಸಾಧ್ಯ ಎನಿಸಿ, ಮತ್ತೇನೂ ತೋಚದೆ ಸುಮ್ಮನೆ ಉಳಿದುಬಿಟ್ಟಿದ್ದೆ. ಆ ಮನೆತನದವರ ಬಗ್ಗೆ ಹೋಗಲಿ, ನಿನ್ನೆ ಮೊನ್ನೆಯ ವರೆಗೆ ಇದ್ದ, ಹುಬ್ಬಳ್ಳಿಯಲ್ಲಿ ಸಾಕಷ್ಟು ಹೆಸರು ಮಾಡಿದ್ದ ಪಂ. ಬಾಳಾಚಾರ್ಯರ ವ್ಯಕ್ತಿ ಪರಿಚಯವನ್ನೂ, ಉದ್ದೇಶಿತ ಆ ಪುಸ್ತಕದಲ್ಲಿ ಕೊಡಲು ಸಾಧ್ಯವಿಲ್ಲದ ಸ್ಥಿತಿಯ ಅಂಚಿಗೆ ಮುಟ್ಟಿದ್ದೆ.
ಪರಿಸ್ಥಿತಿ ಹೀಗಿದ್ದಾಗ ಫೋನು ಮಾಡಿದ ಒಂದು ಗಂಟೆಯಲ್ಲಿಯೆ ಸಂಪರ್ಕಿಸಿದ, ನಂತರ ಸ್ವಲ್ಪ ದಿನಗಳಲ್ಲಿಯೆ ಗಂಡ ಹೆಂಡತಿ ಇಬ್ಬರೂ ಕೂಡಿ ಮನೆಗೆ ಬಂದು ಪರಿಚಯ ಮಾಡಿಕೊಂಡ ಆ ವ್ಯಕ್ತಿಯೆ ರಂಗನಾಥ.
ಬಾಳಾಚಾರ್ಯರ ಮನೆಯಲ್ಲಿ ಭೆಟ್ಟಿಯಾಗಿದ್ದವರು ಅವರ ತಂದೆ ನಾರಾಯಣ ಮತ್ತು ಅಣ್ಣ ಅತ್ತಿಗೆ ವಾದಿರಾಜ, ವೀಣಾ ಅವರು. ಅದು ೧೯೯೩ ರ ಕತೆ, ಇದು ೨೦೧೪ ರ ಸಂಗತಿ.
ಹುಬ್ಬಳ್ಳಿಯಲ್ಲಿದ್ದ ಆ ಪಂಡಿತರ ಮಗ ಗೋವರ್ಧನ ಅವರನ್ನು ಭ್ಹೆಟ್ಟಿಯಾಗಬೇಕಿದೆ. ಎಲ್ಲಿರುತ್ತಾರೊ ಗೊತ್ತಿಲ್ಲ ಎಂದೆ. ಕೂಡಲೆ ಗೋವರ್ಧನ ಅವರ ಜೊತೆ ಫೋನಿನಲ್ಲಿ ಸಂಪರ್ಕಿಸಿ ಮರುದಿನ ಭೆಟ್ಟಿಯನ್ನು ಗೊತ್ತುಮಾಡಿದರು. ಮರುದಿನ ನಾನು ಹುಬ್ಬಳ್ಳಿ ಮುಟ್ಟಿ ಫೋನ ಮಾಡಿದಾಗ, ನಾನು ನಿಂತಿದ್ದಲ್ಲೆ ಬಂದು ತಮ್ಮ ಸ್ಕೂಟರಿನ ಮೇಲೆ ಕರೆದುಕೊಂಡು ಹೋಗಿ ಭೆಟ್ಟಿ ಮಾಡಿಸಿದರು.
ಅಂತೂ ಗೋವರ್ಧನ ಅವರ ಜೊತೆ ಸಂದರ್ಶನ ಸಾಧ್ಯವಾಯಿತು. ಬೇಕಾದಷ್ಟು, ಬೇಕಾದುದೆಲ್ಲ ಮಾಹಿತಿ ಸಿಗದಿದ್ದರೂ, ಆ ಗತಿಸಿದ ಹಿರಿಯ ಜೀವ ಪಂ. ಬಾಳಾಚಾರ್ಯರ ಸ್ಠೂಲವಾದ ಒಂದು ಚಿತ್ರ ಸಿಕ್ಕಿತು.
ರಂಗನಾಥ ಅವರು ತೋರಿಸಿದ ಆಸ್ಥೆಯಿಂದ, ಗೋವರ್ಧನ ಅವರ ಸಂದರ್ಶನವಷ್ಟೆ ಅಲ್ಲ. ಮುಳುಂಡ – ಮುಂಬಯಿಯಲ್ಲಿದ್ದ ಬಾಳಾಚಾರ್ಯರ ಜ್ಯೇಷ್ಠ ಪುತ್ರ ಯಾದವ ಅವರ ವಿಳ್ಳಾಸ, ಫೋನ ನಂಬರಗಳೂ ಸಿಕ್ಕವು. ಎಪ್ರಿಲ್, ೨೦೧೬ ರಲ್ಲಿ ಅವಕಾಶ ಸಿಕ್ಕು ಅವರನ್ನೂ ಮುಳುಂಡದ ಅವರ ಮನೆಯಲ್ಲಿಯೆ ಭೆಟ್ಟಿಯಾಗಿ ಬೇಕಾದ ಮಾಹಿತಿ ಪಡೆದೆ.
ನಮ್ಮ ಒಂದೆರಡು ಭೆಟ್ಟಿಗಳಲ್ಲಿ, ನನಗೆ ಬೇಕಾದ ಮಾಹಿತಿ ಕೂಡಿಸುವಲ್ಲಿ ಉಂಟಾಗುತ್ತಿದ್ದ ಕಷ್ಟ ಗೊತ್ತಾಗಿ ರಂಗನಾಥ – “ನೀವು ನನ್ನ ಗತಿಸಿದ ತಂದೆ, ಬೇರೆ ಬೇರೆ ಕಡೆಗೆ ಇರುವ ಅಕ್ಕಂದಿರು, ಅಣ್ಣಂದಿರು ಇವರ ಮಾಹಿತಿಗಾಗಿ ಪರದಾಡಬೇಡಿರಿ. ಬೇಕಾದ ವಿಷಯ – ಅಂಶಗಳ ಪಟ್ಟಿ ಮಾಡಿಕೊಟ್ಟರೆ ನಾನೆ ಅವರೆಲ್ಲರ ಮಾಹಿತಿ ಬರೆದು ಕೊಡುತ್ತೇನೆ ಎಂದು ಆಶ್ವಾಸನೆ ಇತ್ತರು.
ದೊಡ್ಡ ಸಮಾಧಾನ ವಾಯಿತು. ಉಳಿದವರಾರೂ ಈ ಕೆಲಸದಲ್ಲಿ ಇಷ್ಟು ಆಸಕ್ತಿ ತೋರಿಸಿರಲಿಲ್ಲ. ಸಹಕಾರ ಕೊಟ್ಟಿರಲಿಲ್ಲ. ದೊಡ್ಡ ಸಮಾಧಾನವಾಯಿತು. ಮುಂದೆ ಆಡಿದಂತೆ ನಡೆದೂ ಕೊಂಡರು. ತಾವು ಆರು ಜನ ಸಹೋದರರು ಮತ್ತು ತಮ್ಮ ತಂದೆ ಇಷ್ಟು ಜನರ ಲಿಖಿತ ಮಾಹಿತಿ ಸಿದ್ಧ ಪಡಿಸಿ ೨೦೧೫ ರ ಅಗಸ್ಟದಲ್ಲಿ ಕುರಿಯರದಿಂದ ಪುಣೆಗೆ (ಆಗ ನಾನು ಮಗನ ಹತ್ತಿರ ಅಲ್ಲಿ ಇದ್ದೆ.) ಕಳಿಸಿದರು. ಅವರಿಂದಾಗಿ ನನಗೆ ಬೇಕಾಗಿದ್ದ ಮತ್ತೂ ಒಂದೆರಡು ವಿಳಾಸ, ಫೋನ ನಂಬರ ಕೂಡ ಸಿಕ್ಕಿವೆ.
ಇದನ್ನೆಲ್ಲ ಹೇಳುತ್ತಿರುವದು, ಯಾವುದಕ್ಕೂ ಯೋಗ ಬರಬೇಕು, ಅದು ಯೋಗಾಯೋಗದ ಮಾತು, ಕಾಲ ಕೂಡಿಬರಬೇಕು, ಎಂದೆಲ್ಲ ಹಿರಿಯರು ಹೇಳುತ್ತಾರಲ್ಲ ಅದು ನಿಜ. ಅದಕ್ಕೆ ನಿದರ್ಶನ ಈ ಘಟನೆಗಳು. ಅನುಭವಕ್ಕೆ ಬಂದ ಇಂತಹ ಇನ್ನೂ ಹಲವುಘಟನೆಗಳು ಆ ನಂಬುಗೆಯನ್ನು ದೃಢ ಪಡಿಸುತ್ತವೆ. ಯೊಗ ಬಂದಾಗ, ಕಾಲ ಕೂಡಿ ಬಂದಾಗ ಕೆಲಸಗಳು ತಂತಾನೆ ಆಗುತ್ತವೆ. ಕಾಲ ಕೂಡಿ ಬಂದಿರದಿದ್ದರೆ ಎಷ್ಟು ಲಾಗ ಹಾಕಿದರೂ ಎನೂ ಆಗುವದಿಲ್ಲ.
ಬರೆದವರು : ಶ್ರೀಕಾಂತ ರಂ. ಮಂಗಳವೇಢೆ. ಮುಗಿದುದು : ಬುಧವಾರ, ೮ ಫೆಬ್ರುವರಿ ೨೦೧೭, ಮಾಘ ಶುಕ್ಲ ದ್ವಾದಶಿ, ಮಧ್ಯಾಹ್ನ ೨.೩೦ ಗಂಟೆ.